ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
‘ರಾಮ ರಾಜ್ಯವು ಕೇವಲ ಹಿಂದೂ ರಾಷ್ಟ್ರದಲ್ಲಿ ಮಾತ್ರ ಇರುವುದು !’
‘ವೈಯಕ್ತಿಕ ಪ್ರೀತಿಗಿಂತ ದೇಶಪ್ರೇಮ ಮತ್ತು ಧರ್ಮಪ್ರೇಮವನ್ನು ಮಾಡಿ ನೋಡಿರಿ. ಅದರಲ್ಲಿ ಹೆಚ್ಚು ಆನಂದವಿದೆ !
‘ಭಾರತವು ೯೦೦ ವರ್ಷಗಳಿಂದ ಪಾರತಂತ್ರ್ಯದಲ್ಲಿದ್ದರಿಂದ, ಹಿಂದೂಗಳು ಅನೇಕ ತಲೆಮಾರುಗಳು ಕಾಲ ಗುಲಾಮಗಿರಿಯಲ್ಲಿ ಜೀವಿಸಿದರು. ಮನಸ್ಸಿನಲ್ಲಿಯ ಗುಲಾಮಗಿರಿಯ ವಿಷವನ್ನು ನಿರ್ಮೂಲನೆ ಮಾಡಲು ಹಿಂದೂ ರಾಷ್ಟ್ರವನ್ನು (ಈಶ್ವರೀ ರಾಜ್ಯ) ಸ್ಥಾಪಿಸಲು ಹಗಲುರಾತ್ರಿ ಪ್ರಯತ್ನ ಮಾಡುವುದು ಈಗ ಅಗತ್ಯವಾಗಿದೆ. ಹಾಗೆ ಮಾಡಿದರೆ ಮಾತ್ರ ೪-೫ ತಲೆಮಾರುಗಳಲ್ಲಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಹಿಂದೂಗಳಲ್ಲಿ ಅಭಿಮಾನ ಜಾಗೃತವಾಗುವುದು.
ವಿಜ್ಞಾನದ ಅಹಂಕಾರ ಇರುವವರೇ, ಅಧ್ಯಾತ್ಮದ ತುಲನೆಯಲ್ಲಿ ವಿಜ್ಞಾನವು ಎಷ್ಟು ತುಚ್ಛವಾಗಿದೆ ಎಂಬುದನ್ನು ಗಮನದಲ್ಲಿಡಿ !
‘ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಇತಿಹಾಸ, ಭೂಗೋಲ ಮುಂತಾದ ಎಲ್ಲ ವಿಷಯಗಳು ಆಯಾ ವಿಷಯದ ಮಾಹಿತಿಯನ್ನು ಮಾತ್ರ ಹೇಳಬಲ್ಲವು. ಆದರೆ, ಅಧ್ಯಾತ್ಮವು ನಿಮಗೆ ಜಗತ್ತಿನ ಬಗ್ಗೆ ಎಲ್ಲ ವಿಷಯಗಳ ಮಾಹಿತಿಯನ್ನು ಹೇಳಬಲ್ಲದು. – (ಪರಾತ್ಪರ ಗುರು) ಡಾ. ಆಠವಲೆ.