‘ಹಿಂದೂಗಳನ್ನು ವಿಭಜಿಸಲು ಬೇರೆ ದಾರಿ ಹುಡುಕಬೇಕಾಗಿದೆಯೆಂತೆ!’ – Maulana Sajjad Nomani

​‘ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ’ಯ ವಕ್ತಾರ ಮೌಲಾನಾ ಸಜ್ಜಾದ್ ನೊಮಾನಿ ಅವರಿಂದ ಮುಸ್ಲಿಮರಿಗೆ ಕರೆ

ಮೌಲಾನಾ ಸಜ್ಜಾದ್ ನೊಮಾನಿ

ಲಕ್ಷ್ಮಣಪುರಿ (ಉತ್ತರ ಪ್ರದೇಶ): “ನಾನು ಜಾತ್ಯತೀತ (ಸೆಕ್ಯುಲರ್) ಹಿಂದೂಗಳ ಬಗ್ಗೆ ನಿರಾಶೆಗೊಂಡಿದ್ದೇನೆ. ಹಿಂದೂ ಸಮುದಾಯವನ್ನು ವಿಭಜಿಸಲು ನಾವು ಬೇರೆ ಮಾರ್ಗವನ್ನು ಹುಡುಕಬೇಕಾಗಿದೆ,” ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ವಕ್ತಾರ ಮೌಲಾನಾ ಸಜ್ಜಾದ್ ನೊಮಾನಿ ಸಭೆಯೊಂದರಲ್ಲಿ ಹೇಳಿದ್ದಾರೆ.

​‘ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಲ್ಲ!’

ನೊಮಾನಿ ಮುಂದೆ ಮಾತನಾಡಿ, “ಜಾಟ್, ಲಿಂಗಾಯತರಂತಹ ಅನೇಕ ಜಾತಿಗಳು ತಮ್ಮನ್ನು ಹಿಂದೂಗಳೆಂದು ಪರಿಗಣಿಸುವುದಿಲ್ಲ. ಸಿಖ್, ಬೌದ್ಧ, ಪರಿಶಿಷ್ಟ ಜಾತಿ-ಪಂಗಡಗಳು ಮತ್ತು ಆದಿವಾಸಿಗಳು ಕೂಡ ಹಿಂದೂ ಧರ್ಮದ ಹೊರಗಿನವರಾಗಿದ್ದಾರೆ. ತಮಿಳುನಾಡಿನ ಜನರೂ ಹಿಂದೂಗಳಲ್ಲ. ಹಾಗಾಗಿ ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಲ್ಲ,” ಎಂದಿದ್ದಾರೆ.

(ಹಿಂದೂಗಳು ಸಂಘಟಿತರಾಗಿರದ ಕಾರಣ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ನಡೆಸುತ್ತಾರೆ ಮತ್ತು ಹಿಂದೂಗಳಿಂದ ಯಾವುದೇ ಪ್ರತ್ಯುತ್ತರ ಸಿಗುತ್ತಿಲ್ಲ, ಎಂಬುದು ಮತಾಂಧ ಮುಸ್ಲಿಮರಿಗೆ ತಿಳಿದಿದೆ. ಹಿಂದೂಗಳು ಯಾವಾಗ ಸಂಘಟಿತರಾಗುತ್ತಾರೋ ಆಗ ಮತಾಂಧರು ಪಾಕಿಸ್ತಾನಕ್ಕೆ ಓಡಿಹೋಗಬೇಕಾಗುತ್ತದೆ! ಇಂತಹ ಪರಿಸ್ಥಿತಿ ಬರುವಂತೆ ಹಿಂದೂಗಳು ಸಂಘಟಿತರಾಗುವುದು ಯಾವಾಗ? – ಸಂಪಾದಕರು).

ಸಂಪಾದಕೀಯ ನಿಲುವು

ಹಿಂದೂಗಳು ಈಗಾಗಲೇ ವಿಭಜನೆಯಾಗಿದ್ದಾರೆ, ಅದಕ್ಕಾಗಿಯೇ ನೊಮಾನಿ ಇಂತಹ ಹೇಳಿಕೆ ನೀಡುವ ಧೈರ್ಯ ಮಾಡುತ್ತಿದ್ದಾರೆ. ಇದು ಹಿಂದೂಗಳಿಗೆ ಲಜ್ಯಾಸ್ಪದವಾಗಿದೆ !