ಚಲನಚಿತ್ರ ನಿರ್ಮಾಪಕ ಇಮ್ತಿಯಾಜ್ ಅಲಿ ಅವರಿಗೆ ‘ರಾಧಾ-ಕೃಷ್ಣ’ ಕುರಿತು ಸಿನಿಮಾ ಮಾಡುವ ಆಸೆ!

‘ರಾಧಾ-ಕೃಷ್ಣ’ ಆಧಾರಿತ ಚಲನಚಿತ್ರವನ್ನು ನಿರ್ಮಿಸುವಾಗ ಮೊದಲು ಅವರ ಪ್ರೀತಿಯಲ್ಲಿನ ಆಧ್ಯಾತ್ಮಿಕ ಮಟ್ಟವನ್ನು ಅರ್ಥಮಾಡಿಕೊಳ್ಳಬೇಕು!

ಮುಂಬಯಿ – ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಮತ್ತು ಚಿತ್ರಕಥೆಗಾರ ಇಮ್ತಿಯಾಜ್ ಅಲಿ ಅವರು ‘ಎಬಿಪಿ ಮಾಝಾ’ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಭವಿಷ್ಯದಲ್ಲಿ ‘ರಾಧಾ-ಕೃಷ್ಣ’ ಕಥೆಯನ್ನು ಬೆಳ್ಳಿತೆರೆಯ ಮೇಲೆ ತರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ‘ಭವಿಷ್ಯದಲ್ಲಿ ಎಂತಹ ಕಥೆಗಳನ್ನು ತೆರೆಯ ಮೇಲೆ ತರಲು ಬಯಸುತ್ತೀರಿ?’ ಎಂದು ಕೇಳಿದಾಗ ಅವರು ತಮ್ಮ ಈ ಮನದಾಸೆಯನ್ನು ವ್ಯಕ್ತಪಡಿಸಿದರು.

ಇಮ್ತಿಯಾಜ್ ಅಲಿ ಅವರು, ‘‘ಭಾರತೀಯ ಪೌರಾಣಿಕ ಕಥೆಗಳಲ್ಲಿನ ಅನೇಕ ವಿಷಯಗಳು ನನಗೆ ಪ್ರೇರಣೆ ನೀಡಿವೆ. ಆ ಕಥೆಗಳನ್ನು ತೆರೆಯ ಮೇಲೆ ತರುವಷ್ಟು ಸಾಮರ್ಥ್ಯ ನನ್ನಲ್ಲಿರಲಿ ಎಂದು ನಾನು ಭಾವಿಸುತ್ತೇನೆ. ನನಗೆ ರಾಧಾ-ಕೃಷ್ಣ ಅವರ ಕಥೆಯನ್ನು ತೆರೆಯ ಮೇಲೆ ತರಬೇಕಾಗಿದೆ. ಇದು ಕೇವಲ ಪ್ರೇಮಕಥೆಯಲ್ಲ, ಬದಲಿಗೆ ಅವರ ಕಥೆಗೆ ಅನೇಕ ಆಯಾಮಗಳಿವೆ. ಅದರ ಹಿಂದೆ ಒಂದು ಆಳವಾದ ತತ್ವಜ್ಞಾನವೂ ಅಡಗಿದೆ’’ ಎಂದರು.