ವಿಮಾನ ನಿಲ್ದಾಣದ ಆವರಣದಲ್ಲಿ ಮಾತಮ್ಗೆ ಅನುಮತಿ ನೀಡಿದ್ದಕ್ಕಾಗಿ ಹಲವರಿಂದ ಟೀಕೆ!
(ಮಾತಮ್ ಎಂದರೆ: ಮರಣ, ದುರಂತ ಘಟನೆ ಅಥವಾ ಬಲಿದಾನದ ನೆನಪಿಗಾಗಿ ಎದೆಯ ಮೇಲೆ ಕೈಯಿಂದ ಹೊಡೆದುಕೊಂಡು ಸಾರ್ವಜನಿಕವಾಗಿ ಶೋಕ ವ್ಯಕ್ತಪಡಿಸುವ ಮುಸ್ಲಿಮರ ಪದ್ಧತಿ.)

ಮುಂಬಯಿ – ವಿಮಾನ ನಿಲ್ದಾಣವೊಂದರ ಆವರಣದಲ್ಲಿ ಶಿಯಾ ಸಮುದಾಯದ ಕೆಲವು ಸದಸ್ಯರು ಮಾತಮ್ ಆಚರಿಸಿರುವುದು ಒಂದು ವಿಡಿಯೋ ಮೂಲಕ ಬೆಳಕಿಗೆ ಬಂದಿದೆ. ಈ ವಿಡಿಯೋ ನಿಖರವಾಗಿ ಯಾವ ವಿಮಾನ ನಿಲ್ದಾಣದ್ದು?, ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಒಂದು ವೇಳೆ ಇದು ಮುಂಬಯಿ ವಿಮಾನ ನಿಲ್ದಾಣದ ಆವರಣದ್ದೇ ಆಗಿದ್ದರೆ, ಈ ಘಟನೆ ಯಾವಾಗ ನಡೆಯಿತು? ಮತ್ತು ಇದಕ್ಕೆ ಅಧಿಕೃತ ಅನುಮತಿ ಪಡೆಯಲಾಗಿತ್ತೇ? ಎಂಬ ಬಗ್ಗೆ ವಿಮಾನ ನಿಲ್ದಾಣದ ಆಡಳಿತ ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟೀಕರಣ ಅಥವಾ ಪ್ರಕಟಣೆ ಮಾಡಿಲ್ಲ.
೧. ಮಾತಮ್ ಎನ್ನುವುದು ಮುಖ್ಯವಾಗಿ ಶಿಯಾ ಮುಸ್ಲಿಂ ಸಮುದಾಯದಲ್ಲಿ ಆಚರಿಸಲಾಗುವ, ಶೋಕ ವ್ಯಕ್ತಪಡಿಸುವ ಒಂದು ಧಾರ್ಮಿಕ ಸಂಪ್ರದಾಯವಾಗಿದೆ. ಇಸ್ಲಾಂ ಧರ್ಮದ ಸಂಸ್ಥಾಪಕ ಮಹಮ್ಮದ್ ಪೈಗಂಬರರ ಮೊಮ್ಮಗ ಇಮಾಮ್ ಹುಸೇನ್ ಮತ್ತು ಅವರ ಸಹಚರರು ೭ನೇ ಶತಮಾನದ ಕರ್ಬಲಾ ಯುದ್ಧದಲ್ಲಿ ನೀಡಿದ ಬಲಿದಾನದ ಸ್ಮರಣಾರ್ಥ ಈ ರೀತಿಯಾಗಿ ದುಃಖ ಮತ್ತು ಒಗ್ಗಟ್ಟನ್ನು ವ್ಯಕ್ತಪಡಿಸಲಾಗುತ್ತದೆ.
೨. ವಿಮಾನ ನಿಲ್ದಾಣದ ಆವರಣದಲ್ಲಿ ಇಂತಹ ಆಚರಣೆಗಳಿಗೆ ಅನುಮತಿ ಹೇಗೆ ನೀಡಲಾಯಿತು? ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ. ಅಲ್ಲದೆ ಸಾರ್ವಜನಿಕರು ಇನ್ನಷ್ಟು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಗೋಮಾಂಸ ಭಕ್ಷಣೆಯನ್ನು ಪ್ರಚಾರ ಮಾಡುವ ಸಂಸ್ಥೆ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ!
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati