ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ

​(ಜೈ ಭೀಮ್ ಜೈ ಮೀಮ್ ಎಂಬುದು ದಲಿತರು ಮತ್ತು ಮುಸ್ಲಿಮರ ನಡುವಿನ ಕಲ್ಪಿತ ಸಾಮಾಜಿಕ ಹಾಗೂ ರಾಜಕೀಯ ಒಕ್ಕೂಟವನ್ನು ಪ್ರದರ್ಶಿಸಲು ಕೂಗಲಾಗುವ ಘೋಷಣೆಯಾಗಿದೆ. ಈ ಮೂಲಕ ದಲಿತರನ್ನು ಹಿಂದೂಗಳಿಂದ ಪ್ರತ್ಯೇಕಿಸುವ ಪಿತೂರಿ ನಡೆಸಲಾಗಿದೆ.)

​ಲಕ್ಷ್ಮಣಪುರಿ (ಉತ್ತರ ಪ್ರದೇಶ) – ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಅತ್ಯಧಿಕ ೨,೧೬೦ ಅಪರಾಧಗಳು ಯಾದವ್ ಸಮುದಾಯದ ವಿರುದ್ಧ ದಾಖಲಾಗಿವೆ. ಮತ್ತೊಂದೆಡೆ ೧,೯೮೩ ಅಪರಾಧಗಳೊಂದಿಗೆ ಮುಸ್ಲಿಮರು ಎರಡನೇ ಸ್ಥಾನದಲ್ಲಿದ್ದಾರೆ. ಇದಲ್ಲದೆ ೧,೬೦೧ ಬ್ರಾಹ್ಮಣ ಸಮುದಾಯದವರು ಮತ್ತು ೧,೬೯೮ ಕ್ಷತ್ರಿಯ ಸಮುದಾಯದ ಜನರು ಸಹ ಈ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.

​೪ ತಿಂಗಳಲ್ಲಿ ೪,೭೪೧ ಅಪರಾಧಗಳು; ೧೪,೬೭೨ ಆರೋಪಿಗಳು

ಜನವರಿಯಿಂದ ಏಪ್ರಿಲ್ ೨೦೨೬ ರ ಅವಧಿಯಲ್ಲಿ ಈ ಕಾಯ್ದೆಯಡಿ ಒಟ್ಟು ೪,೭೪೧ ಅಪರಾಧಗಳು ದಾಖಲಾಗಿವೆ. ಈ ಪ್ರಕರಣಗಳ ತನಿಖೆಯ ನಂತರ ಒಟ್ಟು ೧೪,೬೭೨ ಜನರು ಆರೋಪಿಗಳೆಂದು ಗುರುತಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳು ಮತ್ತು ವಿಭಾಗಗಳಿಂದ ಪಡೆದ ವರದಿಗಳ ಆಧಾರದ ಮೇಲೆ ಈ ಅಂಕಿ-ಅಂಶಗಳನ್ನು ಸಿದ್ಧಪಡಿಸಲಾಗಿದೆ. ಅಪರಾಧ ದಾಖಲೆಗಳ ಆಧಾರದ ಮೇಲೆ ಈ ಮಾಹಿತಿಯನ್ನು ದೃಢೀಕರಿಸಲಾಗಿದೆ.

ಸಂಪಾದಕೀಯ ನಿಲುವು

  • ​ದಲಿತರ ಹೆಸರಿನಲ್ಲಿ ರಾಜಕಾರಣ ಮಾಡುವ ಪಕ್ಷಗಳು ಈಗ ಯಾಕೆ ಮೌನವಾಗಿವೆ?
  • ‘ಜೈ ಭೀಮ್ ಜೈ ಮೀಮ್’ ಘೋಷಣೆ ಕೂಗುವವರಿಗೆ ಈ ಬಗ್ಗೆ ಪ್ರಶ್ನಿಸಬೇಕು!