‘ಇಂದಿರಾ ಮತ್ತು ರಾಜೀವ್ ಗಾಂಧಿ ಕೊಲ್ಲಲ್ಪಟ್ಟರು; ಆದರೆ ನರೇಂದ್ರ ಮೋದಿಯನ್ನು ಕೊಲ್ಲಲು ಬಾಂಬ್ ಏಕೆ ಸಿಗುತ್ತಿಲ್ಲ ?’(ವಂತೆ)

ಮಧ್ಯಪ್ರದೇಶದ ‘ಗೊಂಡವಾನಾ ಗಣತಂತ್ರ ಪಕ್ಷ’ದ ಮಾಜಿ ಶಾಸಕ ರಾಮಗುಲಾಮ್ ಉಯಿಕೆಯ ಬೆದರಿಕೆಯೊಡ್ಡುವ ಹೇಳಿಕೆ

  • ಇಂತಹ ಹೇಳಿಕೆಗಳನ್ನು ನೀಡುವವರು ಇನ್ನೂ ಏಕೆ ಸ್ವತಂತ್ರವಾಗಿದ್ದಾರೆ ? ಯಾರಾದರೂ ದೂರು ನೀಡುವುದನ್ನು ಪೊಲೀಸರು ಕಾಯುತ್ತಿದ್ದಾರೆಯೇ ? ಭಾಜಪದ ರಾಜ್ಯದಲ್ಲೇ ಇಂತಹ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳದಿರುವುದು, ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !
  • ಇತರ ರಾಜಕೀಯ ಪಕ್ಷಗಳು ಇದನ್ನು ಏಕೆ ವಿರೋಧಿಸುವುದಿಲ್ಲ ಹಾಗೂ ಕ್ರಮ ಕೈಗೊಳ್ಳುವಂತೆ ಏಕೆ ಒತ್ತಾಯಿಸುತ್ತಿಲ್ಲ ? ಅಥವಾ ಅವರು ಅದೇ ರೀತಿ ಅನಿಸುತ್ತದೆಯೇ ?

ಸಿವನಿ (ಮಧ್ಯಪ್ರದೇಶ) – ಇಂದಿರಾ ಗಾಂಧಿಯನ್ನು ಕೊಲ್ಲಲು ಗುಂಡು ಸಿಕ್ಕಿತು, ರಾಜೀವ್ ಗಾಂಧಿಯನ್ನು ಕೊಲ್ಲಲು ಬಾಂಬ್ ಸಿಕ್ಕಿತು; ಆದರೆ ನರೇಂದ್ರ ಮೋದಿಯವರನ್ನು ಕೊಲ್ಲಲು ಯಾವುದೇ ಬಾಂಬ್ ಪತ್ತೆಯಾಗಿಲ್ಲ, ನರೇಂದ್ರ ಮೋದಿಯವರನ್ನು ಏಕೆ ಕೊಲ್ಲಬಾರದು ? ಎಂದು ಘಂಸೌರ್ ವಿಧಾನಸಭಾ ಚುನಾವಣಾಕ್ಷೇತ್ರದ ಗೊಂಡವಾನಾ ಗಣತಂತ್ರ ಪಾರ್ಟಿಯ ಮಾಜಿ ಶಾಸಕ ರಾಮಗುಲಾಮ ಉಯಿಕೆ ಇವರು ಒಂದು ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದ್ದಾರೆ. ಅವರ ಈ ಹೇಳಿಕೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಅವರು ೩ ದಿನಗಳ ಹಿಂದೆ ಈ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಹೇಳಿಕೆ ಬಗ್ಗೆ ಭಾಜಪವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.