ರಾಮಮಂದಿರ ಭೂಮಿಪೂಜೆಯ ದಿನದಂದು ವಾತಾವರಣವನ್ನು ಶ್ರೀರಾಮಮಯ ಮಾಡಿ !
ರಾಮಜನ್ಮಭೂಮಿಯು ೫೦೦ ವರ್ಷಗಳಿಂದ ರಾಮ ಮಂದಿರ ನಿರ್ಮಾಣಕ್ಕಾಗಿ ಕಾಯುತ್ತಿದೆ. ದೈವೀ ಆಯೋಜನೆಯಂತೆ ಆ ಪರಮಾನಂದದ ಕ್ಷಣವು ಸಮೀಪಿಸಿದೆ. ನಮಗೆ ಈ ಭವ್ಯ ಮತ್ತು ಈಶ್ವರಿ ಕಾರ್ಯದಲ್ಲಿ ಪಾಲ್ಗೊಳ್ಳುವ ಸುವರ್ಣಾವಕಾಶ ಸಿಗುತ್ತಿದೆ, ಅದಕ್ಕಾಗಿ ಈ ಐತಿಹಾಸಿಕ ಕ್ಷಣವನ್ನು ಉತ್ಸಾಹದಿಂದ ಮತ್ತು ಆನಂದದಿಂದ ಆದರೆ ಕರೋನಾ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಸರಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಆಚರಿಸಿರಿ. ಈ ಭೂಮಿ ಪೂಜೆ ಸಮಾರಂಭವನ್ನು ರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲು ಪ್ರತಿಯೊಬ್ಬ ರಾಮಭಕ್ತನು ಈ ಮುಂದಿನ ಕೃತಿಗಳನ್ನು ಮಾಡಬೇಕು,
೧. ಪ್ರತಿಯೊಬ್ಬ ಹಿಂದೂ ತನ್ನ ಮನೆಯ ಮೇಲೆ ಕೇಸರಿ ಧ್ವಜವನ್ನು ಹಾರಿಸಬೇಕು !
೨. ಶ್ರೀರಾಮತತ್ತ್ವದ ಸಾತ್ತ್ವಿಕ ರಂಗೋಲಿಯನ್ನು ಮನೆಯ ಮುಂದೆ ಬಿಡಿಸಬೇಕು !
೩. ಬೆಳಗ್ಗೆ ಶ್ರೀರಾಮನನ್ನು ಪೂಜಿಸುವಾಗ ಎಣ್ಣೆ ದೀಪ ಬೆಳಗಬೇಕು ಮತ್ತು ಸಂಜೆ ಬಾಗಿಲಿನ ಬಳಿ ಹಣತೆಯನ್ನು ಹಚ್ಚಬೇಕು !
೪. ಕುಟುಂಬದವರೆಲ್ಲ ಸೇರಿ ಸಾಮೂಹಿಕವಾಗಿ ಶ್ರೀರಾಮರಾಕ್ಷಾಸ್ತೋತ್ರವನ್ನು ಪಠಿಸಬೇಕು !
೫. ಪ್ರತಿಯೊಬ್ಬರೂ ದಿನವಿಡೀ ಸಾಧ್ಯವಾದಷ್ಟು ’ಶ್ರೀರಾಮ ಜಯ ರಾಮ ಜಯ ಜಯ ರಾಮ’ ಎಂದು ನಾಮಜಪ ಮಾಡಬೇಕು !
೬. ‘ಶ್ರೀರಾಮನಿಗೆ ಅಪೇಕ್ಷಿತವಿರುವ ಆದರ್ಶ ರಾಮರಾಜ್ಯವು ಶೀಘ್ರದಲ್ಲೇ ಸ್ಥಾಪನೆಯಾಗಲಿ’ ಎಂದು ಶ್ರೀ ರಾಮನಲ್ಲಿ ಭಾವಪೂರ್ಣವಾಗಿ ಪ್ರಾರ್ಥನೆ ಮಾಡಬೇಕು !
ಹೀಗೆ ವಿವಿಧ ಕಾರ್ಯಗಳ ಮೂಲಕ ಶ್ರೀರಾಮನ ಭಕ್ತಿಯನ್ನು ಮಾಡಿ ಪ್ರಭು ಶ್ರೀರಾಮನ ಕೃಪೆಯನ್ನು ಸಂಪಾದಿಸಬೇಕೆಂದು ಸನಾತನ ಸಂಸ್ಥೆಯು ಹಿಂದೂ ಸಮಾಜಕ್ಕೆ ಕರೆ ನೀಡಿದೆ.

ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!
ಮಾವ ಅತ್ಯಾಚಾರ ಮಾಡಿದ್ದಾನೆಂದು ಹೇಳಿದ ಕೂಡಲೇ ಪತ್ನಿಗೆ ತಲಾಖ್ ನೀಡಿದ ಪತಿ ರೆಹಾನ್ !
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ