ಕೊರೋನಾವನ್ನು ಮುಗಿಸಲು ಆಗಸ್ಟ್ ೫ ರ ತನಕ ಪ್ರತಿದಿನ ಹನುಮಾನ ಚಾಲೀಸಾ ಪಠಿಸಿ ! – ಸಾಧ್ವಿ ಪ್ರಜ್ಞಾಸಿಂಹ ಠಾಕುರ್ ಇವರಿಂದ ಕರೆ

  • ಕೊರೋನಾ ಮಹಾಮಾರಿಯಾಗಿದೆ ಎಂಬುದಕ್ಕಾಗಿ ಅಲ್ಲ, ಹಿಂದೂಗಳು ಪ್ರತೀದಿನ ತಮ್ಮ ಪ್ರಕೃತಿಗನುಸಾರ ಸಾಧನೆಯನ್ನು ಮಾಡಬೇಕು ಹಾಗೂ ಎಲ್ಲ ಸಂಕಟಗಳಿಂದ ತಮ್ಮ, ಸಮಾಜದ ಹಾಗೂ ಪರ್ಯಾಯವಾಗಿ ರಾಷ್ಟ್ರ ಹಾಗೂ ಧರ್ಮ ಇವುಗಳ ರಕ್ಷಣೆಯನ್ನು ಮಾಡಬೇಕು !

  • ಯಾವ ಸಾಧನೆಯನ್ನು ಮಾಡಬೇಕು ?, ಯಾವ ನಾಮಜಪ ಮಾಡಬೇಕು ? ಇತ್ಯಾದಿಗಳ ಮಾರ್ಗದರ್ಶನ ಮಾಡಲು ಸಾಧ್ವಿ ಪ್ರಜ್ಞಾಸಿಂಹನಂತಹ ಸಾಧು-ಸಂತರು ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡಲು ಅಭಿಯಾನವನ್ನು ಹಮ್ಮಿಕೊಳ್ಳಬೇಕು !

ಭೋಪಾಳ (ಮಧ್ಯಪ್ರದೇಶ) – ‘ನಡೆಯಿರಿ ಕೊರೋನಾ ಮಹಾಮಾರಿಯನ್ನು ಮುಗಿಸಲು ಹಾಗೂ ಜನರಿಗೆ ಉತ್ತಮ ಆರೋಗ್ಯಕ್ಕಾಗಿ ನಾವು ಒಂದು ಆಧ್ಯಾತ್ಮಿಕ ಪ್ರಯತ್ನವನ್ನು ಮಾಡೋಣ. ಇಂದಿನಿಂದ ಆಗಸ್ಟ್ ೫ ರ ತನಕ ಪ್ರತಿದಿನ ಸಂಜೆ ೭ ಗಂಟೆಗೆ ತಮ್ಮ ತಮ್ಮ ಮನೆಗಳಲ್ಲಿ ಹನುಮಾನ ಚಾಲೀಸಾದ ಪಠಣವನ್ನು ಮಾಡಬೇಕು. ಅದೇರೀತಿ ಆಗಸ್ಟ್ ೫ ರಂದು ರಾಮಜನ್ಮಭೂಮಿಯಲ್ಲಿ ರಾಮಮಂದಿರದ ಭೂಮಿಪೂಜೆಯ ಸಮಯ ರಾಮಲಲಾನ ಆರತಿ ಆದನಂತರ ತಮ್ಮ ತಮ್ಮ ಮನೆಗಳಲ್ಲಿ ದೀಪವನ್ನು ಬೆಳಗಿಸಬೇಕು’, ಎಂದು ಭಾಜಪದ ಶಾಸಕಿ ಸಾಧ್ವಿ ಪ್ರಜ್ಞಾಸಿಂಹ ಠಾಕುರ ಇವರು ಟ್ವೀಟ್ ಮಾಡುವ ಮೂಲಕ ಕರೆ ನೀಡಿದ್ದಾರೆ.