ಕರ್ನಾಟಕ ಮತ್ತು ಕೇರಳದಲ್ಲಿ ಅನೇಕ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ! – ವಿಶ್ವಸಂಸ್ಥೆ

ವಿಶ್ವ ಸಂಸ್ಥೆ ಪಡೆಯುವ ಮಾಹಿತಿಯನ್ನು ಭಾರತೀಯ ಗುಪ್ತಚರರು ಏಕೆ ಪಡೆಯುವುದಿಲ್ಲ? ಈಗ, ಈ ಮಾಹಿತಿಯ ಆಧಾರದಲ್ಲಿ ಈ ಜಿಹಾದಿ ಭಯೋತ್ಪಾದಕರು ಭಯೋತ್ಪಾದಕ ದಾಳಿ ನಡೆಸುವ ಮೊದಲೇ ಪತ್ತೆ ಹಚ್ಚಿ ಹಿಡಿಯಬೇಕು!

ನ್ಯೂಯಾರ್ಕ್ (ಯುಎಸ್‌ಎ) – ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಅನೇಕ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ಇರಬಹುದು. ಅಲ್-ಖೈದಾ ಕೂಡ ಭಾರತದ ಉಪಖಂಡದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದೆ. ಈ ಸಂಘಟನೆಯು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಲ್ಲಿ ೧೦೦ ರಿಂದ ೧೫೦ ಭಯೋತ್ಪಾದಕರನ್ನು ಹೊಂದಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.