ಭಗವಂತನು ಕೇವಲ ಭಕ್ತರ, ಸಾಧಕರ ರಕ್ಷಣೆಯನ್ನು ಮಾಡುತ್ತಾರೆ, ಆದ್ದರಿಂದ ‘ಕೊರೋನಾದಂತಹ ವಿಪತ್ತಿನಲ್ಲಿ ದೇವರು ನಮಗೆ ಕಾಪಾಡಬೇಕು’, ಎಂದು ಯಾರಿಗಾದರು ನಿಜವಾಗಿಯೂ ಅನಿಸುತ್ತಿದ್ದರೆ, ಅವರು ಈಗಿನಿಂದಲೇ ಸಾಧನೆಗೆ, ಧರ್ಮಾಚರಣೆಗೆ ಹಾಗೂ ನೀತಿಯಿಂದ ನಡೆಯಲು ಆರಂಭಿಸಬೇಕು !

ಚಿತ್ರದುರ್ಗಾ – ಹೆಚ್ಚಾಗುತ್ತಿರುವ ಕೊರೋನಾದ ಹಾವಳಿಯಿಂದ ಇನ್ನು ಕೇವಲ ಭಗವಂತನೇ ಕಾಪಾಡಬಹುದು, ಎಂದು ಕರ್ನಾಟಕದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಇವರು ನುಡಿದಿದ್ದಾರೆ. ಅವರು ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಸದ್ಯ ಕರ್ನಾಟಕದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಒಟ್ಟು ೪೭ ಸಾವಿರದ ೨೫೩ ರಷ್ಟಿದೆ. ಈ ಪೈಕಿ ೧೮ ಸಾವಿರದ ೪೬೬ ರೋಗಿಗಳು ಗುಣಮುಖರಾಗಿ ಮನೆಗೆ ಹೋಗಿದ್ದಾರೆ. ರಾಜ್ಯದಲ್ಲಿ ಕೊರೋನಾದಿಂದಾಗಿ ೯೨೮ ಜನರು ಸಾವಿಗೀಡಾಗಿದ್ದಾರೆ.
“Tell me whose hand it is (to control the disease). Only God has to save us all."https://t.co/yILve7SbSG
— The Indian Express (@IndianExpress) July 16, 2020
ಬಿ. ಶ್ರೀರಾಮುಲು ತಮ್ಮ ಮತನ್ನು ಮುಂದುವರೆಸುತ್ತ, ‘ಜಗತ್ತಿನಾದ್ಯಂತ ಕೊರೋನಾದ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರಿಂದ ಎಲ್ಲರೂ ಜಾಗರೂಕತೆಯಿಂದ ಇರಬೇಕು. ಶಾಸಕರಾಗಿರಲಿ, ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ಈ ವಿಷಾಣು ಯಾವುದೇ ಭೇದಭಾವ ಮಾಡುವುದಿಲ್ಲ. ಇನ್ನು ೨ ತಿಂಗಳಲ್ಲಿ ರೋಗಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಶೇ. ೧೦೦ ರಷ್ಟಿದೆ ಎಂದು ಹೇಳಿದ್ದಾರೆ. ಸಚಿವರ, ಸರ್ಕಾರದ ನಿರ್ಲಕ್ಷ್ಯ ಅಥವಾ ಶಾಸಕರ ಹೊಂದಾಣಿಕೆ ಇಲ್ಲದೆ ಕೊರೊನಾ ಹೆಚ್ಚಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದ ಆರೋಪಗಳು ಎಂದರು. ವಸ್ತುಸ್ಥಿಯಿಂದ ದೂರ ಇದೆ. ಕೇವಲ ಭಗವಂತನೇ ನಮ್ಮನ್ನು ಈ ಕೊರೋನಾದಿಂದ ಕಾಪಾಡಬಹುದು’ ಎಂದು ಹೇಳಿದರು.
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್