ವಾಸ್ತವದಲ್ಲಿ ಕೇಂದ್ರದಲ್ಲಿರುವ ಭಾಜಪ ಸರಕಾರವೇ ಸಂಪೂರ್ಣ ದೇಶದಲ್ಲಿ ಈ ಕಾನೂನನ್ನು ತರುವುದು ಹಾಗೂ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಅಪೇಕ್ಷಿತವಿದೆ
ಇಂದು ದೇಶದ ಅನೇಕ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾನೂನು ಅಸ್ತಿತ್ವದಲ್ಲಿದೆ; ಆದರೆ ಅದರ ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿಲ್ಲದ್ದರಿಂದ ಗೋಹತ್ಯೆ ಹಾಗೂ ಗೋಮಾಂಸದ ಮಾರಾಟ ಸರಾಗವಾಗಿ ಆಗುತ್ತಿದೆ. ಈ ರೀತಿಯ ಕಾನೂನು ಇರುವ ರಾಜ್ಯಗಳಲ್ಲಿ ಇಂದಿಗೂ ಗೋರಕ್ಷಕರು ಗೋರಕ್ಷಣೆಗಾಗಿ ರಸ್ತೆಗೆ ಇಳಿಯಬೇಕಾಗುತ್ತದೆ. ಗೋರಕ್ಷಕರು ನೀಡಿದ ಮಾಹಿತಿಗನುಸಾರ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ; ಆದರೆ ಪೊಲೀಸರು ಸ್ವತಃ ಕ್ರಮ ಕೈಗೊಂಡಿರುವ ಬಗ್ಗೆ ಎಲ್ಲಿಯೂ ಕೇಳಿ ಬಂದಿಲ್ಲ. ಕರ್ನಾಟಕದಲ್ಲಿಯೂ ಕಾನೂನು ಬಂದ ಮೇಲೆ ಈ ರೀತಿಯಲ್ಲಿ ಆಗಬಾರದು, ಅದಕ್ಕಾಗಿ ಸರಕಾರವು ಪ್ರಯತ್ನ ಮಾಡಬೇಕಿದೆ !

ಬೆಂಗಳೂರು – ಕರ್ನಾಟಕದಲ್ಲಿ ಶೀಘ್ರದಲ್ಲೇ ಗೋಹತ್ಯೆ, ಗೋಮಾಂಸ ಮಾರಾಟ, ಕಸಾಯಿಖಾನೆಗಾಗಿ ಗೋವುಗಳ ಸಾಗಾಟ ಹಾಗೂ ಮಾರಾಟದ ಮೇಲೆ ನಿರ್ಬಂಧ ಹೇರಲಿದೆ, ಎಂಬ ಮಾಹಿತಿಯನ್ನು ಪಶುಸಂಗೋಪಾಸನೆ ರಾಜ್ಯ ಸಚಿವ ಪ್ರಭು ಚೌಹಾಣ ಇವರು ನೀಡಿದರು. ಭಾಜಪ ತನ್ನ ಚುನಾವಣೆಯ ಪ್ರಣಾಳಿಕೆಯಲ್ಲಿ ಗೋ ಹತ್ಯಾ ನಿಷೇಧ ಮಾಡುವ ಆಶ್ವಾಸನೆಯನ್ನು ನೀಡಿತ್ತು. ೨೦೧೦ ರಲ್ಲಿ ಭಾಜಪ ಸರಕಾರ ಇರುವಾಗ ಗೋಹತ್ಯಾನಿಷೇಧದ ಮಸೂದೆಯನ್ನು ಜಾರಿಗೆ ತಂದಿತ್ತು. ಆದರೆ ೨೦೧೩ ರಲ್ಲಿ ಕಾಂಗ್ರೆಸ್ ಸರಕಾರ ಬಂದನಂತರ ಅದನ್ನು ಹಿಂಪಡೆದಿತ್ತು. (ಇದುವೇ ಕಾಂಗ್ರೆಸ್ಸಿನ ನೈಜರೂಪ ! – ಸಂಪಾದಕರು)
ಚೌಹಾಣ ತಮ್ಮ ಮಾತನ್ನು ಮುಂದುವರೆಸುತ್ತ, ‘ಕೊರೋನಾದ ವಿಪತ್ತು ದೂರವಾದ ನಂತರ ಕೂಡಲೇ ಗೋಹತ್ಯೆಯ ಮೇಲೆ ನಿಷೇಧ ಹೇರಲು ತಜ್ಞರ ಸಮಿತಿಯನ್ನು ಸ್ಥಾಪಿಸಲಾಗುವುದು. (ಅದಕ್ಕಾಗಿ ಕೊರೋನಾದ ವಿಪತ್ತು ದೂರವಾಗುವ ತನಕ ಏಕೆ ಕಾಯಬೇಕು ? ಈಗಲೂ ಈ ರೀತಿಯ ಸಮಿತಿಯನ್ನು ಸ್ಥಾಪಿಸಬಹುದು ! – ಸಂಪಾದಕರು) ಇದರ ಬಗ್ಗೆ ಮುಖ್ಯಮಂತ್ರಿಯವರಲ್ಲಿ ಚರ್ಚೆ ಮಾಡಲಾಗುವುದು’ ಎಂದು ಹೇಳಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!