
ದ್ವಾರಕಾ (ಗುಜರಾತ) – ಗುಜರಾತನಲ್ಲಿ ಕೆಲವು ದಿನಗಳ ಹಿಂದೆ ದ್ವಾರಕೆಯ ಭಗವಾನ ಶ್ರೀಕೃಷ್ಣನ ದ್ವಾರಕಾಧೀಶ ದೇವಸ್ಥಾನದ ಕಳಸದ ಮೇಲಿನ ಧ್ವಜದ ದಂಡ ತುಂಡಾಗಿರುವ ಘಟನೆ ನಡೆದಿತ್ತು. ಅಲ್ಲಿ ಸತತ ೩ ದಿನಗಳಿಂದ ಮಳೆ ಬರುತ್ತಿದ್ದರಿಂದ ಅದರ ದಂಡ ಮುರಿದಿದೆ ಎಂದು ಹೇಳಲಾಗುತ್ತಿದೆ. ಇದು ಅಶುಭವಾಗಿದೆ ಎಂಬ ನಂಬಿಕೆ ಇದ್ದು ‘ಏನಾದರು ಅನಾಹುತ ನಡೆಯಬಹುದು’, ಎಂದು ಸ್ಥಳೀಯರಲ್ಲಿ ಆತಂಕ ಮೂಡಿದೆ. ಈ ದೇವಸ್ಥಾನದ ಅರ್ಚಕರಾದ ಮುಕುಂದ ಗುಗಡಿಯವರು ಈ ಬಗ್ಗೆ ಹೇಳುತ್ತಾ, ‘ಧ್ವಜಸ್ತಂಭ ಮುರಿಯುವುದು, ಇದು ರಾಜ್ಯದ ಅಥವಾ ರಾಜ್ಯದ ಆಡಳಿತಾರೂಢ ವ್ಯಕ್ತಿಯ ಮೇಲೆ ವಿಪತ್ತು ಬರುವ ಸೂಚನೆಯಾಗಿದೆ. ೧೯೯೮ ರಲ್ಲಿ ಧ್ವಜ ಸ್ತಂಭ ಮುರಿದಿದ್ದರಿಂದ ಗುಜರತದ ಕಾಂಡಲಾ ಬಂದರಿನಲ್ಲಿ ವಿನಾಶಕಾರಿ ಚಂಡಮಾರುತ ಬಂದಿತ್ತು’ ಎಂದಿದ್ದಾರೆ.
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ಹಿಂದೂ ಮಾಡೆಲ್ ಗೆ ನಟಿಯಾಗುವ ಆಮಿಷವೊಡ್ಡಿ 10 ವರ್ಷಗಳ ಕಾಲ ಅತ್ಯಾಚಾರವೆಸಗಿದ ವಸೀಮ್! : Meerut Love Jihad
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !