ಆಂಧ್ರಪ್ರದೇಶದಲ್ಲಿ ೨೦ ಲಕ್ಷ ರೂಪಾಯಿ ಬೆಲೆಯ ೨೬ ಸಾವಿರ ಕೆಜಿ ಗೋಮಾಂಸ ವಶಕ್ಕೆ

  • ಬಜರಂಗದಳ ನೀಡಿದ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ

  • ಬಜರಂಗದಳಕ್ಕೆ ಸಿಗುವ ಮಾಹಿತಿ, ಎಲ್ಲಾ ಆಡಳಿತವ್ಯವಸ್ಥೆ ಕೈಯಲ್ಲಿರುವ ಪೊಲೀಸರಿಗೆ ಏಕೆ ಸಿಗುವುದಿಲ್ಲ ? ಅಥವಾ ಪೊಲೀಸರು ಗೋಮಾಂಸದ ಸಾಗಾಟದ ಕಡೆ ಉದ್ದೇಶಪೂರ್ವಕವಾಗಿ ದುರ್ಲಕ್ಷ ಮಾಡುತ್ತಾರೆಯೇ ?

ಶ್ರೀಕಾಕುಲಮ (ಆಂದ್ರಪ್ರದೇಶ) – ಆಂಧ್ರಪ್ರದೇಶ-ಓಡಿಶಾ ಗಡಿಭಾಗದ ಶ್ರೀಕಾಕುಲಮ್‌ನಲ್ಲಿಯ ಪುರುಷೋತ್ತಮಪುರಮ್ ತಪಾಸಣಾ ಕೇಂದ್ರದಲ್ಲಿ ಜೂನ್ ೨೧ ರಂದು ಆಂಧ್ರಪ್ರದೇಶದ ಪೊಲೀಸರು ಸರಿಸುಮಾರು ೨೬ ಸಾವಿರ ಕೆಜಿ ಗೋಮಾಂಸ ವಶಪಡಿಸಿಕೊಂಡಿದ್ದಾರೆ. ಈ ಗೋಮಾಂಸವನ್ನು ಲಾರಿಯ ಮೂಲಕ ಬಂಗಾಲದಿಂದ ತಮಿಳುನಾಡು ರಾಜ್ಯಕ್ಕೆ ಸಾಗಿಸಲಾಗುತ್ತಿತ್ತು. ವಶಪಡಿಸಿಕೊಂಡ ಮಾಂಸದ ಮೌಲ್ಯವು ೨೦ ಲಕ್ಷ ರೂಪಾಯಿಯದ್ದಾಗಿದೆ.

ಅದು ಸಣ್ಣ ಸಣ್ಣ ಪೊಟ್ಟಣಗಳಲ್ಲಿ ತುಂಬಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ರಾನ್ಸಿಸ್ ಹಾಗೂ ಗಣಪತಿ ಶೇಖರ ಈ ಇಬ್ಬರು ವಾಹನ ಚಾಲಕರನ್ನು ಬಂಧಿಸಲಾಗಿದೆ. ಓಡಿಶಾದ ಬೆರಹಮಪುರದ ಬಜರಂಗ ದಳದಿಂದ ಈ ಸಾಗಾಟದ ಮುನ್ಸೂಚನೆ ನಿಕ್ಕಿತ್ತು.