ಭಾರತೀಯ ಸೈನಿಕರ ಹುತಾತ್ಮರಾದ ಬಗ್ಗೆ ಸೇಡನ್ನು ತೀರಿಸಿಕೊಳ್ಳಬೇಕೆಂದು ಟ್ವಿಟರ್ನಿಂದ ರಾಷ್ಟ್ರಪ್ರೇಮಿಗಳ ಆಗ್ರಹ

ಮುಂಬಯಿ – ಚೀನಾ ಹಾಗೂ ಭಾರತದ ಸೈನಿಕರ ನಡುವೆ ಆಗಿದ್ದ ಕಾಳಗದಲ್ಲಿ ಭಾರತದ ಒಬ್ಬ ಕರ್ನಲ್ ಸಹಿತ ೨೦ ಸೈನಿಕರು ಹುತಾತ್ಮರಾದರು. ಇದಾದ ನಂತರ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿರುವಾಗ ಟ್ವಿಟರ್ನಿಂದಲೂ ವಿರೋಧ ವ್ಯಕ್ತವಾಗಿದೆ. ಜೂನ್ ೧೬ ರಂದು ಬೆಳಿಗ್ಗೆ ರಾಷ್ಟ್ರಪ್ರೇಮಿಗಳಿಂದ ‘#TeachLessonToChina’ ಈ ಹ್ಯಾಷ್ಟ್ಯಾಗ್ನ ಟ್ರೆಂಡ್ ಆರಂಭಿಸಲಾಯಿತು. ಕೆಲವೇ ಕಾಲಾವಧಿಯಲ್ಲಿ ಈ ಟ್ರೆಂಡ್ ರಾಷ್ಟ್ರೀಯ ಟ್ರೆಂಡ್ನಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ ಜಾಗತಿಕ ಟ್ರೆಂಡ್ನಲ್ಲಿ ೭ ನೇ ಸ್ಥಾನದಲ್ಲಿತ್ತು. ಇದರಲ್ಲಿ ೭೫ ಸಾವಿರಕ್ಕೂ ಹೆಚ್ಚು ಟ್ವೀಟ್ಗಳನ್ನು ಮಾಡಲಾಯಿತು.
ಕೆಲವು ರಾಷ್ಟ್ರಪ್ರೇಮಿಗಳ ಟ್ವೀಟ್ಗಳು
- ಚೀನಾದೊಂದಿಗೆ ಇನ್ನು ಚರ್ಚೆ ಅಲ್ಲ, ಪ್ರತಿಕಾರ ತೀರಿಸಬೇಕು.
- ಭಾರತವು ಯಾವರೀತಿ ಪಾಕ್ನಲ್ಲಿ ನುಗ್ಗಿ ‘ಸರ್ಜಿಕಲ್ ಸ್ಟ್ರೈಕ್’ ಮಾಡಿತೋ, ಅದೇರೀತಿ ಈಗ ಚೀನಾದ ಮೇಲೆ ಮಾಡುವ ಸಮಯ ಬಂದಿದೆ.
- ಚೀನಾಗೆ ಪ್ರತ್ಯುತ್ತರ ನೀಡಲು ಭಾರತೀಯ ಸೈನಿಕರು ಸಕ್ಷಮರಾಗಿದ್ದಾರೆ. ಈಗ ಭಾರತೀಯರು ಚೀನಾದ ವಸ್ತುಗಳ ಮೇಲೆ ಸಂಪೂರ್ಣ ಬಹಿಷ್ಕಾರ ಹಾಕುವ ಆವಶ್ಯಕತೆ ಇದ್ದು ಈ ಮೂಲಕ ಚೀನಾದ ಅರ್ಥವ್ಯವಸ್ಥೆಯ ಸೊಂಟ ಮುರಿಯುವ ಅವಶ್ಯಕತೆ ಇದೆ.
- ಲಡಾಖನ ೩೮ ಸಾವಿರ ಚದರ ಕಿ.ಮೀ. ಭೂ ಪ್ರದೇಶವು ಚೀನಾದ ವಶದಲ್ಲಿದೆ. ಅದನ್ನು ಪುನಃ ಪಡೆಯುವ ಸಮಯ ಬಂದಿದೆ.
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ