
ನವ ದೆಹಲಿ: ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೯೮೮೭ ಜನರಿಗೆ ಕರೋನಾ ಸೋಂಕು ತಗುಲಿದ್ದು ದೇಶದಲ್ಲಿ ಒಟ್ಟು ಕರೋನಾ ಸಂತ್ರಸ್ತರ ಸಂಖ್ಯೆ ೨ ಲಕ್ಷ ೩೬ ಸಾವಿರದ ೧೧೭ ಕ್ಕೆ ತಲುಪಿದೆ. ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಭಾರತವು ಕೊರೋನಾ ಪೀಡಿತ ರೋಗಿಗಳ ಸಂಖ್ಯೆಯಲ್ಲಿ ಇಟಲಿಯನ್ನು ಹಿಂದಿಕ್ಕುವ ಮೂಲಕ ವಿಶ್ವದ ಅತೀ ಹೆಚ್ಚು ರೋಗಿಗಳು ಇರುವ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ತಲುಪಿದೆ. ಇಟಲಿಯಲ್ಲಿ ೨ ಲಕ್ಷ ೩೪ ಸಾವಿರದ ೫೩೧ ರೋಗಿಗಳು ಕರೋನಾ ಪೀಡಿತರಾಗಿದ್ದಾರೆ.
ದೇಶದಲ್ಲಿ ಕರೋನಾದಿಂದಾಗಿ ಒಂದೇ ದಿನದಲ್ಲಿ ೨೯೫ ಜನರ ಸಾವು
ದೇಶದಲ್ಲಿ ಸಂಚಾರ ನಿಷೇಧವು ಸಡಿಲಗೊಳಿಸಿದಾಗ ಕರೋನಾ ಸೋಂಕಿತ ರೋಗಿಗಳ ಸಂಖ್ಯೆ ಸತತವಾಗಿ ಏರುತ್ತಿದೆ. ದೇಶದಲ್ಲಿ ಕೊರೋನಾದಿಂದಾಗಿ ಜೂನ್ ೫ ರಂದು ೨೯೫ ರೋಗಿಗಳು ಸಾವನ್ನಪ್ಪಿದರು. ಇದೇ ಮೊದಲಬಾರಿಗೆ ಒಂದೇ ದಿನದಲ್ಲಿ ಇಷ್ಟು ಜನರು ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದಲ್ಲಿ ರೋಗಿಗಳ ಸಂಖ್ಯೆ ೮೦ ಸಾವಿರದ ೨೨೯ ಹಾಗೂ ೨ ಸಾವಿರದ ೮೪೯ ಜನರ ಸಾವು

ಜೂನ್ ೫ ರಂದು ಮಹಾರಾಷ್ಟ್ರದಲ್ಲಿ ೨೪೩೬ ಹೊಸ ಕರೋನಾ ರೋಗಿಗಳನ್ನು ಪತ್ತೆಯಾದವು. ಇದರ ಪರಿಣಾಮವಾಗಿ, ರಾಜ್ಯದಲ್ಲಿ ಒಟ್ಟು ಕರೋನಾ ಸಂತ್ರಸ್ತರ ಸಂಖ್ಯೆ ೮೦೨೨೯ ತಲುಪಿದೆ. ರಾಜ್ಯದಲ್ಲಿ ಒಂದೇ ದಿನದಲ್ಲಿ ೧೩೯ ರೋಗಿಗಳು ಸಾವನ್ನಪ್ಪಿದ್ದು ಇದುವರೆಗೆ ೨ ಸಾವಿರದ ೮೪೯ ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ೩೫ ಸಾವಿರದ ೧೫೬ ರೋಗಿಗಳನ್ನು ಮನೆಗೆ ಕಳುಹಿಸಲಾಗಿದೆ.
ಭಾರತದಲ್ಲಿ ಕರೋನಾ ಪೀಡಿತ ಸಂಖ್ಯೆಯ ವೇಗ ಅಷ್ಟು ಹೆಚ್ಚಿಲ್ಲ ; ಆದರೆ ಅಪಾಯ ಇದೆ ! – ವಿಶ್ವ ಆರೋಗ್ಯ ಸಂಸ್ಥೆ

ಭಾರತದಲ್ಲಿ ಕೊರೋನಾ ರೋಗಿಗಳ ಹೆಚ್ಚಾಗುವ ವೇಗ ಅಷ್ಟು ಇಲ್ಲ; ಆದರೆ ಅಪಾಯ ಇದೆ, ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಡಾ. ಮೈಕೆಲ್ ರಯಾನ್ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಮಾತನ್ನು ಮುಂದುವರೆಸುತ್ತ, ‘ಭಾರತದಲ್ಲಿ ಕೊರೋನಾ ರೋಗಿಗಳ ಪ್ರಮಾಣವು ೩ ವಾರಗಳಿಗೆ ದ್ವಿಗುಣಗೊಂಡಿದೆ. ಆದ್ದರಿಂದ ಕರೋನಾ ವೇಗವಾಗಿ ಹರಡುತ್ತಿದೆ, ಎಂದು ಅಲ್ಲ; ಆದರೆ, ಕಾಳಜಿ ವಹಿಸುವುದು ಅಗತ್ಯವಿದೆ.’ ಇಲ್ಲದಿದ್ದರೆ ಜನನಿಬಿಡ ಇರುವ ದೇಶಗಳಲ್ಲಿ ಕೊರೋನಾದ ಸೊಂಕು ಹರಡಿದರೆ ಪರಿಸ್ಥಿತಿ ಹದಗೆಡಬಹುದು, ಎಂದೂ ಸಹ ಎಚ್ಚರಿಕೆಯನ್ನು ನೀಡಿದ್ದಾರೆ.
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಲ್ಲಿ ಮುಸ್ಲಿಮರು ಇದ್ದಿದ್ದರೆ, ಕಳ್ಳತನದ ಆರೋಪದ ಮೇಲೆ ಅವರ ‘ಎನ್ಕೌಂಟರ್’ ಮಾಡಲಾಗುತ್ತಿತ್ತು!’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ
ಸೋಲಾಪುರದಲ್ಲಿ ಅನಧಿಕೃತ ಚರ್ಚ್ ಮತ್ತು ಮಹಾನಗರ ಪಾಲಿಕೆ ನೌಕರನ ಅಕ್ರಮಗಳ ತನಿಖೆ!