ಹಿಂದುತ್ವನಿಷ್ಠ ನಾಯಕ ಭರತ್ ವೈಷ್ಣವ್ ಇವರ ಕೊಲೆ ಪ್ರಕರಣದಲ್ಲಿ ರಶೀದ್ ಖಾನ್ ಮತ್ತು ಅಮ್ಜದ್ ಸೈಯದ್‌ಬಂಧನ

  • ಕಾಂಗ್ರೆsಸ್ ಆಡಳಿತದ ರಾಜಸ್ಥಾನದಲ್ಲಿ ಹಿಂದೂಗಳು ಅಸುರಕ್ಷಿತ !

  • ಹಿಂದುತ್ವನಿಷ್ಠ ನಾಯಕರ ಹೆಚ್ಚುತ್ತಿರುವ ಹತ್ಯೆಗಳನ್ನು ತಡೆಯಲು ಹಿಂದೂರಾಷ್ಟ್ರವೇ ಬೇಕು !

ಜೈಪುರ (ರಾಜಸ್ಥಾನ) – ಹಿಂದುತ್ವನಿಷ್ಠ ನಾಯಕ ಭರತ್ ವೈ?ವ ಇವರನ್ನು ೨೭ ಮೇ ೨೦೨೦ ರಂದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಶೀದ್ ಖಾನ್ ಮತ್ತು ಅಮ್ಜದ್ ಸೈಯದ್ ಅವರನ್ನು ಬಂಧಿಸಲಾಗಿದೆ ಎಂದು ಸಾದಡಿ ಪೊಲೀಸ ಠಾಣೆಯ ಅಧಿಕಾರಿ ರವೀಂದ್ರ ಪ್ರತಾಪ ಸಿಂಗ್ ಮಾಹಿತಿಯನ್ನು ನೀಡಿದ್ದಾರೆ. ಆರೋಪಿಗಳಿಂದ ಬಂದೂಕು ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಹಿಂದೆ ಈ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಶೀದ್ ಲಂಗಡಾ ಮತ್ತು ಇರಾಕ್ ಖಾನ್ ಅವರನ್ನು ಬಂಧಿಸಿದ್ದರು. ಅವರ ವಿಚಾರಣೆಯ ಸಮಯದಲ್ಲಿ ಭರತ್ ವೈ?ವ್‌ನ ಹತ್ಯೆಯು ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿರ್ಮಾಣವಾಗಿದ್ದ ವಾದದಿಂದ ಹತ್ಯೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಭರತ್ ವೈ?ವ್ ಅವರೊಂದಿಗೆ ಪ್ರೀತಿಯಿಂದ ಮಾತನಾಡುತ್ತಾ ಕಾಡಿಗೆ ಒಬ್ಬಂಟಿಯಾಗಿ ಬರಲು ಹೇಳಿದರು. ಒಂಟಿಯಾಗಿ ಭೇಟಿಯಾಗಲು ಆರೋಪಿ ರಶೀದ್ ಲಂಗಾಡನು ಭರತ ವೈಷ್ಣವನಿಗೆ ಭಗವದ್ಗೀತೆಯ ಮೇಲೆ ಆಣೆ ಮಾಡಿಸಿದ್ದನು, ಅದೇ ರೀತಿ ಸ್ವತಃ ಸಹ ಕುರಾನದ ಮೇಲೆಯೂ ಆಣೆ ಮಾಡಿದ್ದನು. ನಂತರ ವೈ?ವ್ ಕಾಡಿಗೆ ಹೋದನು. ಅಲ್ಲಿ ರಶೀದ್ ಲಂಗಡಾ ಮತ್ತು ಆತನ ಸಹಚರರಾದ ರಶೀದ್ ಖಾನ್, ಸತ್ತಾರ್, ಇರಾಕ್ ಮತ್ತು ಗಫೂರ್ ಖಾನ್ ಇವರು ಮೊದಲೇ ಅಲ್ಲಿದ್ದರು. ವೈ?ವ್ ಅಲ್ಲಿಗೆ ಬಂದಾಗ ಅವರು ವೈ?ವನನ್ನು ಗುಂಡಿಕ್ಕಿ ಕೊಂದರು. ಅ? ಅಲ್ಲದೇ, ವೈ?ವ ಅವರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದರು. ಅದರಲ್ಲಿ ವೈ?ವ್ ಇವರು ಮೃತಪಟ್ಟರು. ಆರೋಪಿಯು ವೈ?ವ್‌ನ ಸಹಚರ ಕಿಶನದಾಸ್‌ನನ್ನು ಕೊಲ್ಲಲು ಪ್ರಯತ್ನಿಸಿದರು; ಆದರೆ ಕಿಶನ್‌ದಾಸ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು.