ನವ ದೆಹಲಿ : ಕರೋನಾ ಮತ್ತು ಇತರ ರೋಗಾಣು, ಹಾನಿಕಾರಕ ಜೀವಜಂತುಗಳನ್ನು ನಾಶಮಾಡಲು ಮತ್ತು ಪರಿಸರವನ್ನು ಶುದ್ಧೀಕರಿಸಲು ಮೇ ೩೧ ರಂದು ಅಖಿಲ ವಿಶ್ವ ಗಾಯತ್ರಿ ಪರಿವಾರ ಇವರಿಂದ ೨೪ ಸಲ ‘ಗಾಯತ್ರಿ ಮಂತ್ರ’, ೫ ಸಲ ‘ಸೂರ್ಯ ಗಾಯತ್ರಿ ಮಂತ್ರ’ ಮತ್ತು ೫ ಸಲ ‘ಮಹಾಮೃತುಂಜಯ ಮಂತ್ರ’ ಇದರ ಪಾರಾಯಣದೊಂದಿಗೆ ಆಹುತಿಯನ್ನು ಕೊಡುತ್ತ ಯಜ್ಞವನ್ನು ಮಾಡಲಾಗುವುದು. ವಿಶ್ವದ ೧೦೦ ಕ್ಕೂ ಹೆಚ್ಚು ದೇಶಗಳಲ್ಲಿ ಗಾಯತ್ರಿ ಪರಿವಾರದ ಲಕ್ಷಾಂತರ ಅನುಯಾಯಿಗಳು ತಮ್ಮ ಮನೆಗಳಲ್ಲಿ ಈ ಯಜ್ಞವನ್ನು ಮಾಡಲಿದ್ದಾರೆ, ಎಂದು ಶ್ರೀ. ದಿನನಾಥ್ ಸಿಂಗ್ ಮಾಹಿತಿಯನ್ನು ನೀಡಿದರು. ಬೆಳಿಗ್ಗೆ ೯ ರಿಂದ ಸಂಜೆ ೫ ರ ವರೆಗೆ ಯಜ್ಞವನ್ನು ಮಾಡಲಾಗುವುದು. ಗಾಯತ್ರಿ ಪರಿವಾರದ ಸದಸ್ಯರಿಗೆ ಯಜ್ಞ ಮತ್ತು ಮಂತ್ರೋಚ್ಚಾರದ ಮಾಹಿತಿಯನ್ನು ತಿಳಿಸಲು ‘ಆನ್ಲೈನ್’ನಲ್ಲಿ ತರಬೇತಿ ನೀಡಲಾಗುತ್ತಿದೆ, ಅದೇರೀತಿ ಇದಕ್ಕಾಗಿ ಒಂದು ‘ಆಪ್’ ನಿರ್ಮಿಸಲಾಗಿದೆ. ಈ ಯಜ್ಞದ ಸಾಮಾಗ್ರಿಗಳಲ್ಲಿ ಅಮೃತ, ಬ್ರಾಹ್ಮಿ, ಪ್ರಜ್ಞಾ ಹುಲ್ಲು, ಹಸುವಿನ ತುಪ್ಪ, ಅಕ್ಕಿ, ಬೆಲ್ಲ, ಬೇವು, ಬಿಲ್ವ, ನೀಲಗಿರಿ, ಮಾವಿನ ಮರದ ಕಟ್ಟಿಗೆ ಇತ್ಯಾದಿಗಳು ಸೇರಿವೆ.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ಕರೋನಾದಿಂದ ಮುಕ್ತವಾಗಲು ಗಾಯತ್ರಿ ಪರಿವಾರದಿಂದ ಮೇ ೩೧ ರಂದು ವಿಶ್ವದಾದ್ಯಂತ ಯಜ್ಞ
ಕರೋನಾದಿಂದ ಮುಕ್ತವಾಗಲು ಗಾಯತ್ರಿ ಪರಿವಾರದಿಂದ ಮೇ ೩೧ ರಂದು ವಿಶ್ವದಾದ್ಯಂತ ಯಜ್ಞ
ಸಂಬಂಧಿತ ಲೇಖನಗಳು
ಏಕನಾಥ ಶಿಂದೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ !
ಹತ್ಯೆಗೆ ಹತ್ಯೆಯೇ ಉತ್ತರ – ಮಾಜಿ ಸಚಿವರು ಕೆಎಸ್ ಈಶ್ವರಪ್ಪ
ಕಾಶಿ ಯಾತ್ರೆ ಮಾಡಲು ಇಚ್ಚಿಸುವ ಪ್ರತಿಯೊಬ್ಬರಿಗೆ ೫ ಸಾವಿರ ರೂಪಾಯಿ ನೀಡಲಿರುವ ರಾಜ್ಯ ಸರಕಾರ !
ಕೇರಳದ ಮೊಪಲಾ ಮುಸಲ್ಮಾನರು ಮಾಡಿರುವ ಹಿಂದೂಗಳ ನರಸಂಹಾರದ ಚಲನಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ಕೇರಳ ಸರಕಾರದ ನಕಾರ
ಹಿಂದೂದ್ವೇಷಿ ಮಹಮ್ಮದ ಜುಬೇರನ ಸಮರ್ಥನೆಯಲ್ಲಿ ‘ಎಡಿಟರ್ಸ ಗಿಲ್ಡ್ ಆಫ್ ಇಂಡಿಯಾ’ದಿಂದ ಮನವಿ!
ಭಾರತದ ಮುಸಲ್ಮಾನರಿಗೆ ತಾಲಿಬಾನಿ ಮಾನಸಿಕತೆ ಒಪ್ಪಿಗೆ ಇಲ್ಲ ! – ಅಜ್ಮೀರ್ ದರ್ಗಾದ ಮುಖ್ಯಸ್ಥ ಜೈನುಲ ಅಬೆದಿನ ಅಲಿ ಖಾನ