-
ಭಾರತ ಮಾತೆಯ ಮೂರ್ತಿಯನ್ನು ವಿರೋಧಿಸುವ ಕ್ರೈಸ್ತ ಮಿಷನರಿಗಳು ದೇಶದ್ರೋಹಿಗಳಾಗಿದ್ದಾರೆ ! ತಮಿಳುನಾಡು ಸರಕಾರವು ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು !
-
ಕ್ರೈಸ್ತ ಮಿಷನರಿಗಳ ಬೀಡಾಗಿರುವ ಹಿಂದೂವಿರೋಧಿ ಮಾಧ್ಯಮಗಳು ಈ ಸುದ್ದಿಯನ್ನು ಎಂದಿಗೂ ತೋರಿಸುವುದಿಲ್ಲ ಎಂಬುದನ್ನು ಗಮನದಲ್ಲಿಡಿ !

ಕನ್ಯಾಕುಮಾರಿ (ತಮಿಳುನಾಡು) – ಇಲ್ಲಿ ಕ್ರೈಸ್ತ ಮಿಷನರಿಗಳು ಮಾಡಿದ ವಿರೋಧದಿಂದಾಗಿ ಭಾರತಮಾತೆಯ ಮೂರ್ತಿಯನ್ನು ಜಿಲ್ಲಾಡಳಿತ ವತಿಯಿಂದ ಮುಚ್ಚಿಡಲಾಗಿತ್ತು. ಆಡಳಿತದ ಈ ಕ್ರಮವನ್ನು ದೇಶಪ್ರೇಮಿಗಳು ವಿರೋಧಿಸಿದ ನಂತರ ಮೂರ್ತಿಯ ಮೇಲಿನ ಹೊದಿಕೆಯನ್ನು ತೆಗೆದುಹಾಕಲಾಯಿತು. ಈ ಬಗ್ಗೆ ಬಿಜೆಪಿ ಮಾಜಿ ಸಂಸದ ತರುಣ್ ವಿಜಯ್ ಟ್ವೀಟ್ ಮಾಡಿದ್ದಾರೆ. ಮೂರ್ತಿಯನ್ನು ಇಲ್ಲಿನ ಅಮ್ಮನ್ ದೇವಸ್ಥಾನದಲ್ಲಿ ಸ್ಥಾಪಿಸಲಾಗಿತ್ತು. ಕೆಲವು ಕ್ರೈಸ್ತ ಮಿಷನರಿಗಳು ಈ ಮೂರ್ತಿಯನ್ನು ವಿರೋಧಿಸಿದಾಗ ಆಡಳಿತವು ಅದನ್ನು ಮುಚ್ಚಿಹಾಕಿತು. ಇದನ್ನು ಚೆನ್ನೈನ ಹಿಂದುತ್ವನಿಷ್ಠ ಸಂಘಟನೆಯಾದ ‘ಹಿಂದೂ ಮಕ್ಕಲ್ ಕಚ್ಚಿ’ ವಿರೋಧಿಸಿತು. ಈ ಸಂಘಟನೆಯ ಅಧ್ಯಕ್ಷರಾದ ಶ್ರೀ. ಅರ್ಜುನ ಸಂಪತ್ ಇವರು ಮಾತನಾಡುತ್ತ, ‘ಭಾರತ ಮಾತೆಯು ಇಡೀ ದೇಶದ ತಾಯಿಯಾಗಿದ್ದಾರೆ. ಬಿಜೆಪಿ ನಾಯಕರು ಸೇರಿದಂತೆ ಹಲವಾರು ಸಂಘಟನೆಗಳು ತಮಿಳುನಾಡು ಮುಖ್ಯಮಂತ್ರಿಯವರಲ್ಲಿ ‘ಮೂರ್ತಿಯನ್ನು ಮುಚ್ಚಿಡುವುದು ಅಯೋಗ್ಯವಾಗಿದೆ ಅದನ್ನು ತೆಗೆಯಬೇಕು’, ಎಂದು ಒತ್ತಾಯಿಸಿದ ನಂತರ ಆಡಳಿತದ ವತಿಯಿಂದ ಮೂರ್ತಿಯ ಮೇಲಿನ ಹೊದಿಕೆಯನ್ನು ತೆಗೆಯಲಾಯಿತು.’
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !