ಅಯೋಧ್ಯೆ: ಭವ್ಯ ಮಸೀದಿ ನಿರ್ಮಾಣ ಯೋಜನೆ ಸ್ಥಗಿತದತ್ತ : Ayodhya Mosque News

AI-ರಚಿತ ಚಿತ್ರ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಸುಪ್ರೀಂ ಕೋರ್ಟ್ ೯ ನವೆಂಬರ್ ೨೦೧೯ ರಂದು ನೀಡಿದ ಐತಿಹಾಸಿಕ ತೀರ್ಪಿನಲ್ಲಿ ಅಯೋಧ್ಯೆಯ ಭೂಮಿಯನ್ನು ಶ್ರೀ ರಾಮಲಲ್ಲಾಗೆ ನೀಡಲು ನಿರ್ಧರಿಸಿತು ಮತ್ತು ಅದಕ್ಕೆ ಪ್ರತಿಯಾಗಿ ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲೇ ಸುನ್ನಿ ವಕ್ಫ್ ಬೋರ್ಡ್‌ಗೆ ೫ ಎಕರೆ ಪರ್ಯಾಯ ಭೂಮಿಯನ್ನು ನೀಡುವಂತೆ ಆದೇಶಿಸಿತು. ಈ ತೀರ್ಪಿನ ನಂತರ ಮುಸ್ಲಿಂ ಸಮುದಾಯದ ಉದಾಸೀನತೆ ಮತ್ತು ದೇಣಿಗೆಯ ತೀವ್ರ ಕೊರತೆಯಿಂದಾಗಿ ಧನ್ನಿಪುರದಲ್ಲಿ ನಿರ್ಮಿಸಲಾಗುತ್ತಿದ್ದ ಮಸೀದಿ ಯೋಜನೆ ಕುಸಿದಿದೆ. ಈ ಕಾರಣದಿಂದಾಗಿ ಮಸೀದಿಯ ಗಾತ್ರವನ್ನು ಅತ್ಯಂತ ಚಿಕ್ಕದಾಗಿ ಮಾಡಲಾಗಿದೆ.

. ‘ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್’ ಮಸೀದಿಯೊಂದಿಗೆ ೫ ಎಕರೆ ಭೂಮಿಯಲ್ಲಿ ಆಸ್ಪತ್ರೆ ಮತ್ತು ಗ್ರಂಥಾಲಯದಂತಹ ದೊಡ್ಡ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿತ್ತು; ಆದರೆ ಈ ನಿರ್ಧಾರವನ್ನು ಈಗ ಕೈಬಿಡಲಾಗಿದೆ.

. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಉತ್ತರ ಪ್ರದೇಶ ಸರಕಾರವು ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ೫ ಎಕರೆ ಭೂಮಿಯನ್ನು ಮುಸ್ಲಿಂ ಸಮುದಾಯಕ್ಕೆ ನೀಡಿತ್ತು. ಈ ಸ್ಥಳವು ಶ್ರೀರಾಮ ಮಂದಿರದಿಂದ ಸುಮಾರು ೨೫ ಕಿಲೋಮೀಟರ್ ದೂರದಲ್ಲಿ ಲಕ್ನೋ-ಗೊರಖ್‌ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿದೆ.

. ಈ ಸಣ್ಣ ಮಸೀದಿಯನ್ನು ನಿರ್ಮಿಸಲು ಸಹ ಕನಿಷ್ಠ ೩ ಕೋಟಿಯಿಂದ ೫ ಕೋಟಿ ರೂಪಾಯಿಗಳ ನಿಧಿಯ ಅಗತ್ಯವಿದೆ. ಅನೇಕ ಪ್ರಯತ್ನಗಳ ನಂತರವೂ ಫೌಂಡೇಶನ್ ಇದುವರೆಗೆ ಕೇವಲ ೧ ಕೋಟಿ ೫ ಲಕ್ಷ ರೂಪಾಯಿಗಳ ದೇಣಿಗೆಯನ್ನು ಮಾತ್ರ ಸಂಗ್ರಹಿಸಲು ಸಾಧ್ಯವಾಗಿದೆ. ಈ ಮೊತ್ತವು ಈ ಯೋಜನೆಗೆ ತೀರಾ ಅತ್ಯಲ್ಪವಾಗಿದೆ.