230 ಮೊಬೈಲ್, 17 ಮಾರಕಾಸ್ತ್ರಗಳೊಂದಿಗೆ ಆರೋಪಿ ಬಂಧನ : Crime News Arrest

ಆರೋಪಿ ಅಕ್ಬರ್ ಷರೀಫ್

ಬೆಂಗಳೂರು – ನಗರದ ವಿವಿಧ ರಸ್ತೆಗಳಲ್ಲಿ ರಾತ್ರಿಯ ಸಮಯದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಅಕ್ಬರ್ ಷರೀಫ್ ಎಂಬ ವ್ಯಕ್ತಿಯನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಆತನ ದ್ವಿಚಕ್ರ ವಾಹನವನ್ನು ತಪಾಸಣೆ ನಡೆಸಿದಾಗ ಅದರಲ್ಲಿ ೫ ಮಾರಕಾಸ್ತ್ರಗಳು ಪತ್ತೆಯಾಗಿವೆ. ನಂತರ ಆತನ ಮನೆಯನ್ನು ಶೋಧಿಸಿದಾಗ ಬಚ್ಚಿಟ್ಟಿದ್ದ ವಿವಿಧ ರೀತಿಯ ೧೭ ಮಾರಕಾಸ್ತ್ರಗಳು, ೨೩೦ ಮೊಬೈಲ್ ಫೋನ್‌ಗಳು ಮತ್ತು ೭೦೦ ಗ್ರಾಂ ಗಾಂಜಾ ಪತ್ತೆಯಾಗಿದೆ. ಪೊಲೀಸರು ಇವೆಲ್ಲವನ್ನೂ ವಶಪಡಿಸಿಕೊಂಡು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ.

೧. ಆರೋಪಿ ಅಕ್ಬರ್ ಷರೀಫ್ ಬ್ಯಾಟರಾಯನಪುರ ರೈಲ್ವೆ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ. ‘ನನ್ನ ಆತ್ಮರಕ್ಷಣೆಗಾಗಿ ನಾನು ಮಾರಕಾಸ್ತ್ರಗಳನ್ನು ಇಟ್ಟುಕೊಂಡಿದ್ದೆ’, ಎಂದು ಆತ ವಿಚಾರಣೆಯ ವೇಳೆ ತಿಳಿಸಿದ್ದಾನೆ.

೨. ಆರೋಪಿ ಇಷ್ಟೊಂದು ಮೊಬೈಲ್ ಫೋನ್‌ಗಳನ್ನು ಎಲ್ಲಿಂದ ಕದ್ದಿದ್ದಾನೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಎಂದು ಪಶ್ಚಿಮ ವಿಭಾಗದ ಪೊಲೀಸ್ ಉಪ ಆಯುಕ್ತರಾದ ಎನ್. ಯತೀಶ ಹೇಳಿದ್ದಾರೆ.

೩. ೨೦೨೪ ರಲ್ಲಿ ಗಾಂಜಾ ಸರಬರಾಜು ಮಾಡಿದ ಆರೋಪದ ಮೇಲೆ ಅಕ್ಬರ್ ಷರೀಫ್‌ನ ತಾಯಿ ಮೆಹರ್ ಉನ್ನಿಸಾಳನ್ನು ಬಂಧಿಸಲಾಗಿತ್ತು. ಆ ಸಮಯದಲ್ಲಿ ೪೫ ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿತ್ತು, ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಂಪಾದಕೀಯ ನಿಲುವು

ಇವುಗಳನ್ನು ಇಟ್ಟುಕೊಂಡು ಆರೋಪಿ ಏನು ಮಾಡಲು ಹೊರಟಿದ್ದ?, ಇದರ ಸಮಗ್ರ ತನಿಖೆ ನಡೆಸಿ ಸತ್ಯವನ್ನು ಸಾರ್ವಜನಿಕರ ಮುಂದೆ ತರಬೇಕು!