ರಾಜಸ್ಥಾನ: ಪಾಕಿಸ್ತಾನಿ ಉಗ್ರರ ಸಂಪರ್ಕದಲ್ಲಿದ್ದ 28 ಶಂಕಿತರ ಬಂಧನ

ಜೈಪುರ (ರಾಜಸ್ಥಾನ) – ರಾಜಸ್ಥಾನದ ಭಯೋತ್ಪಾದನಾ ನಿರೋಧಕ ದಳ(ATS) ರಾಜ್ಯದ 20ಕ್ಕೂ ಹೆಚ್ಚು ನಗರಗಳಲ್ಲಿ ದಾಳಿ ನಡೆಸಿ 28 ಶಂಕಿತರನ್ನು ಬಂಧಿಸಿದೆ. ಬಂಧಿತರು ಪಾಕಿಸ್ತಾನಿ ಉಗ್ರ ಶಹಜಾದ್ ಭಟ್ಟಿ ಜೊತೆ ಸಂಪರ್ಕದಲ್ಲಿದ್ದರು. ಈತ ಸಾಮಾಜಿಕ ಮಾಧ್ಯಮಗಳ ಮೂಲಕ ಹಣ ಮತ್ತು ಪ್ರಚಾರದ ಆಮಿಷವೊಡ್ಡಿ ಜನರೊಂದಿಗೆ ಸ್ನೇಹ ಬೆಳೆಸುತ್ತಿದ್ದನು ಮತ್ತು ನಂತರ ಅವರಿಂದ ಸೂಕ್ಷ್ಮ ಪ್ರದೇಶಗಳ ಛಾಯಾಚಿತ್ರಗಳನ್ನು (ಫೋಟೋಗಳನ್ನು) ತರಿಸಿಕೊಳ್ಳುತ್ತಿದ್ದನು. ಭಟ್ಟಿಯ ಜಾಲದಲ್ಲಿ ಹೆಚ್ಚಾಗಿ ಭಾರತ-ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳ ಯುವಕರು ಸಿಲುಕುತ್ತಿದ್ದಾರೆ.

ಬಂಧಿತರ ಸಾಮಾಜಿಕ ಮಾಧ್ಯಮಗಳ ಖಾತೆಗಳು ಮತ್ತು ಇತರ ಆನ್‌ಲೈನ್ ಚಟುವಟಿಕೆಗಳನ್ನು ತನಿಖೆ ಮಾಡಲಾಗುತ್ತಿದೆ. ತನಿಖಾ ಸಂಸ್ಥೆಗಳ ಪ್ರಕಾರ, ಭಟ್ಟಿ ರಾಜಸ್ಥಾನದ ಜೊತೆಗೆ ಹರಿಯಾಣ, ಪಂಜಾಬ್, ದೆಹಲಿ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲೂ ‘ಸ್ಲೀಪರ್ ಸೆಲ್’ (ರಹಸ್ಯವಾಗಿ ಉಗ್ರರಿಗೆ ಸಹಾಯ ಮಾಡುವ ಮತಾಂಧ ಮುಸ್ಲಿಮರ ಸ್ಥಳೀಯ ಗುಂಪುಗಳು) ಜಾಲವನ್ನು ಸಕ್ರಿಯಗೊಳಿಸಿದ್ದಾನೆ. ಇವರಿಗೆ ಹವಾಲಾ (ಅರಬ್ ಮತ್ತು ದಕ್ಷಿಣ ಏಷ್ಯಾ ದೇಶಗಳು ಹಣ ವರ್ಗಾವಣೆಗಾಗಿ ಬಳಸುವ ಒಂದು ನಿರ್ದಿಷ್ಟ ವ್ಯವಸ್ಥೆ) ಮೂಲಕ ಹಣ ತಲುಪಿಸಲಾಗುತ್ತಿತ್ತು.

ಸಂಪಾದಕೀಯ ನಿಲುವು

ಎಲ್ಲಿಯವರೆಗೆ ಪಾಕಿಸ್ತಾನ ಇರುತ್ತದೆಯೋ, ಅಲ್ಲಿಯವರೆಗೆ ಭಾರತಕ್ಕೆ ಶಾಂತಿ ಸಿಗಲು ಸಾಧ್ಯವಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಭಾರತವು ಪಾಕಿಸ್ತಾನವನ್ನು ನಾಶಪಡಿಸುವುದೇ ಅಗತ್ಯವಾಗಿದೆ!