‘ಗಜನಿ ಬಳಿಕ ದೇವಾಲಯ ಆಸ್ತಿ ಲೂಟಿ ಮಾಡಿದವರು ಬಿಜೆಪಿ-ಸಂಘ’: ವಿವಾದಾತ್ಮಕ ಆರೋಪ : BJP RSS Temple Property Claim

ರಾಜ್ಯ ಕಾಂಗ್ರೆಸ್‌ ನ ಹಾಸ್ಯಾಸ್ಪದ ವಿಷ ಕಾರುವಿಕೆ

B.K. ಹರಿಪ್ರಸಾದ್

ಹುಬ್ಬಳ್ಳಿ – ಶ್ರೀರಾಮ ಮಂದಿರದ ನಿಧಿಯಿಂದ ಸುಮಾರು 200 ಕೋಟಿ ರೂಪಾಯಿ ಲೂಟಿಯಾಗಿದೆ ಎಂದು ದಾವೆ ಮಾಡಿರುವ ಕಾಂಗ್ರೆಸ್‌ ನ ಬಿ.ಕೆ. ಹರಿಪ್ರಸಾದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ವಿಷಯದಲ್ಲಿ ಮೌನ ವಹಿಸಿರುವುದನ್ನು ಟೀಕಿಸಿದ್ದಾರೆ. ಅವರು ಮಾತನಾಡಿ, ಹಿಂದೆ ಭಾರತದ ದೇವಸ್ಥಾನಗಳ ಮೇಲೆ ದಾಳಿ ನಡೆಸಿ ಆಸ್ತಿಯನ್ನು ಲೂಟಿ ಮಾಡಿದ ಇತಿಹಾಸ ಪ್ರಸಿದ್ಧ ಆಕ್ರಮಣಕಾರ ಮಹಮ್ಮದ್ ಗಜನಿ ಮತ್ತು ಸದ್ಯ ಅಧಿಕಾರದಲ್ಲಿರುವ ಮೋದಿ-ಶಾ ಜೋಡಿಯ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಧರ್ಮದ ಹೆಸರಿನಲ್ಲಿ ಅಧಿಕಾರ ಹಿಡಿದವರು ಸಾರ್ವಜನಿಕ ಹಣದ ದುರ್ಬಳಕೆಯ ಬಗ್ಗೆ ಮೌನ ವಹಿಸಿರುವುದು ಅವರ ನೈಜತೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ದೇವಸ್ಥಾನಗಳ ಆಸ್ತಿಯನ್ನು ಲೂಟಿ ಮಾಡಲು ಸಾಧ್ಯವಾಗಬೇಕೆಂದು ಸಂವಿಧಾನದ 25 ಮತ್ತು 26 ನೇ ವಿಧಿಗಳಲ್ಲಿ ಅಸ್ಪಷ್ಟತೆಯನ್ನು ಇಟ್ಟು ದೇವಸ್ಥಾನಗಳ ಸರಕಾರೀಕರಣವನ್ನು ಇದೇ ಕಾಂಗ್ರೆಸ್ ಮಾಡಿತು. ಆ ಮೂಲಕ ದೇವಸ್ಥಾನಗಳ ಕೋಟ್ಯಂತರ ರೂಪಾಯಿಗಳ ದೇವನಿಧಿಯನ್ನು ಕಾಂಗ್ರೆಸ್‌ ನವರು ಲೂಟಿ ಮಾಡಿದರು. ಇದರ ಬಗ್ಗೆ ಕಾಂಗ್ರೆಸ್ ಎಂದಿಗೂ ಏನನ್ನೂ ಮಾತನಾಡುವುದಿಲ್ಲ !