ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಬೇಜವಾಬ್ದಾರಿತನ!

ನಾಗಪುರ – ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಜೂನ್ 21 ರಂದು ನಡೆಸಲಿರುವ ‘ನೀಟ್’ (NEET) ಮರುಪರೀಕ್ಷೆಗೆ ಮುನ್ನ, ನಾಗಪುರದ ವಿದ್ಯಾರ್ಥಿಯೊಬ್ಬನ ಪ್ರವೇಶ ಪತ್ರದಲ್ಲಿ (Admit Card) ಸಂಯುಕ್ತ ಅರಬ್ ಎಮಿರೇಟ್ಸ್ನ (UAE) ಅಬುಧಾಬಿಯನ್ನು ಪರೀಕ್ಷಾ ಕೇಂದ್ರವಾಗಿ ನೀಡಿರುವುದು ಬೆಳಕಿಗೆ ಬಂದಿದೆ. ಅಬ್ದುಲ್ಲಾ ಎಂಬುದು ಈ ವಿದ್ಯಾರ್ಥಿಯ ಹೆಸರಾಗಿದ್ದು, ಆತ ಮರುಪರೀಕ್ಷೆಗಾಗಿ ಸಲ್ಲಿಸಿದ ಅರ್ಜಿಯಲ್ಲಿ ನಾಗಪುರ, ವರ್ಧಾ ಮತ್ತು ಭಂಡಾರಾ ನಗರಗಳನ್ನು ಆಯ್ಕೆ ಮಾಡಿದ್ದನು. ಕೇವಲ ಒಂದೇ ದಿನದಲ್ಲಿ ಪಾಸ್ಪೋರ್ಟ್ ಮತ್ತು ವೀಸಾ ಪ್ರಕ್ರಿಯೆ ಹೇಗೆ ಸಾಧ್ಯ?, ಎಂಬ ಪ್ರಶ್ನೆ ಎದುರಾಗಿರುವುದರಿಂದ ವಿದ್ಯಾರ್ಥಿ ಮತ್ತು ಆತನ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ತನ್ನ ಶೈಕ್ಷಣಿಕ ವರ್ಷ ವ್ಯರ್ಥವಾಗಬಹುದು ಎಂಬ ಭೀತಿ ವಿದ್ಯಾರ್ಥಿ ವ್ಯಕ್ತಪಡಿಸಿದ್ದಾನೆ.
ಪೋಷಕರು ತಕ್ಷಣವೇ ಸಂಸ್ಥೆಯ ಸಹಾಯವಾಣಿಗೆ (Helpline) ದೂರು ದಾಖಲಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇದೊಂದು ತಾಂತ್ರಿಕ ದೋಷ ಎಂದು ಒಪ್ಪಿಕೊಂಡಿದ್ದು, ಪರಿಶೀಲನೆಯ ನಂತರ ತಿದ್ದುಪಡಿ ಮಾಡಿದ ಹೊಸ ಪ್ರವೇಶ ಪತ್ರ ನೀಡುವುದಾಗಿ ಭರವಸೆ ನೀಡಿದ್ದಾರೆ. ಮಾಜಿ ಶಿಕ್ಷಣ ಸಚಿವ ಡಾ. ಅನೀಸ್ ಅಹ್ಮದ್ ಅವರು ಈ ಘಟನೆಯ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
Bhatkal Kidnapping : ಮುಸಲ್ಮಾನನೊಬ್ಬ ಅಪಹರಿಸಿದ್ದ ಹಿಂದೂ ಯುವತಿಯನ್ನು ರಕ್ಷಿಸಿದ ಹಿಂದುತ್ವನಿಷ್ಠರ ವಿರುದ್ಧವೇ ಪ್ರಕರಣ ದಾಖಲು
ರೌಡಿಗಳೊಂದಿಗೆ ಸೇರಿ ಯುವಕರಿಂದ ೨೦ ಲಕ್ಷ ರೂಪಾಯಿ ದೋಚಿದ ಬೆಂಗಳೂರು ಪೊಲೀಸ್ ಇನ್ಸ್ಪೆಕ್ಟರ್ !
Andhra Pradesh Gold : ಆಂಧ್ರಪ್ರದೇಶದಲ್ಲಿ 50 ಟನ್ ಚಿನ್ನದ ದಾಸ್ತಾನು ಪತ್ತೆಯಾಗಿರುವ ದಾವೆ
ಸಹಾರನಪುರ (ಉತ್ತರಪ್ರದೇಶ) ಇಲ್ಲಿನ ಶಹಜಾದ ಆದ ‘ಶಂಕರ!’
Davanagere Fake Doctors : ದಾವಣಗೆರೆಯಲ್ಲಿ 40 ನಕಲಿ ವೈದ್ಯರು ಪತ್ತೆ!
ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಮಧ್ಯರಾತ್ರಿಯಲ್ಲಿ ತೆರವುಗೊಳಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ!