ಹಾರ್ಬರ್ ರೈಲ್ವೆಯಲ್ಲಿ ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡುವ ಕರಪತ್ರಗಳನ್ನು ಅಂಟಿಸಲಾಗಿದೆ!

ಮುಂಬಯಿ – ಹಾರ್ಬರ್ ರೈಲ್ವೆ ಮಾರ್ಗದ ಪನವೇಲ್‌ ನಿಂದ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ವರೆಗಿನ ಹವಾನಿಯಂತ್ರಿತ (ಎಸಿ) ಲೋಕಲ್ ರೈಲಿನಲ್ಲಿ ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡುವ ಮತ್ತು ಪ್ರಯಾಣಿಕರನ್ನು ಆಕರ್ಷಿಸುವ ಕರಪತ್ರಗಳನ್ನು ಅಂಟಿಸಲಾಗಿದೆ. ಈ ಕರಪತ್ರಗಳಲ್ಲಿ ‘ಜೀವನರೇಖೆ ಬೇಕಾಗಿದೆಯೇ?’, ‘ಯೇಸು ದೇವರು ಇದ್ದಾನೆ’, ‘ನಿಮ್ಮನ್ನು ಪ್ರೀತಿಸಲೆಂದೇ ಸೃಷ್ಟಿಸಲಾಗಿದೆ’ ಎಂಬಂತಹ ಭಾವನಾತ್ಮಕ ಮತ್ತು ಮಾನಸಿಕ ಒತ್ತಡದಲ್ಲಿರುವ ವ್ಯಕ್ತಿಗಳನ್ನು ಆಕರ್ಷಿಸುವ ಶೀರ್ಷಿಕೆಗಳನ್ನು ಬಳಸಲಾಗಿದೆ. ಮನುಷ್ಯನ ವೈಯಕ್ತಿಕ ತೊಂದರೆಗಳು, ಉದ್ಯೋಗ ನಷ್ಟ, ಕೌಟುಂಬಿಕ ಸಮಸ್ಯೆಗಳು ಮತ್ತು ಮಾನಸಿಕ ಬಳಲಿಕೆಯನ್ನು ದುರುಪಯೋಗಪಡಿಸಿಕೊಂಡು ‘ಕೇವಲ ಯೇಸು ಮಾತ್ರ ನಿಮ್ಮನ್ನು ರಕ್ಷಿಸಬಲ್ಲನು’ ಎಂಬ ಆಶಯದ ಪ್ರಚಾರವನ್ನು ಈ ಕರಪತ್ರಗಳ ಮೂಲಕ ಮಾಡಲಾಗುತ್ತಿದೆ. ‘www.ThisLoveStory.org’ ವೆಬ್‌ಸೈಟ್ ವಿಳಾಸವನ್ನು ನೀಡಿ, ಹೆಚ್ಚಿನ ಮಾಹಿತಿಯ ಹೆಸರಿನಲ್ಲಿ ಪ್ರಯಾಣಿಕರನ್ನು ನೇರವಾಗಿ ಜಾಲಕ್ಕೆ ಸೆಳೆಯುವ ಯತ್ನ ನಡೆಯುತ್ತಿದೆ.

ಯಾರಾದರೂ ಇಂತಹ ಕರಪತ್ರಗಳನ್ನು ಅಂಟಿಸುತ್ತಿರುವುದು ಕಂಡುಬಂದಲ್ಲಿ ನಾಗರಿಕರು ತಕ್ಷಣವೇ ರೈಲ್ವೆ ಆಡಳಿತಕ್ಕೆ ಮಾಹಿತಿ ನೀಡಬೇಕು. ಈ ಪ್ರಕರಣದಲ್ಲಿ ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಸ್ವಪ್ನಿಲ್ ನೀಲಾ ಅವರು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

  • ರೈಲ್ವೆಯ ಮೂಲಕ ಮತಾಂತರ ಮಾಡುವ ಕ್ರೈಸ್ತರ ಷಡ್ಯಂತ್ರವನ್ನು ಅರಿತುಕೊಳ್ಳಿ! ಸಂಬಂಧಪಟ್ಟವರನ್ನು ತಕ್ಷಣವೇ ಪತ್ತೆಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ!
  • ರೈಲ್ವೆಯಲ್ಲಿ ಜಾಹೀರಾತುಗಳನ್ನು ಹಾಕಲು ರೈಲ್ವೆ ಆಡಳಿತದ ಅನುಮತಿ ಅತ್ಯಗತ್ಯವಾಗಿರುತ್ತದೆ. ಹಾಗಿರುವಾಗ ಯಾವುದೇ ಅನುಮತಿಯಿಲ್ಲದೆ ಇಂತಹ ಕರಪತ್ರಗಳನ್ನು ಅಂಟಿಸುವ ಧೈರ್ಯವಾದರೂ ಹೇಗೆ ಬರುತ್ತದೆ? ರೈಲ್ವೆ ಸುರಕ್ಷಾ ಪಡೆ (ಆರ್‌ಪಿಎಫ್) ಮತ್ತು ರೈಲ್ವೆ ಆಡಳಿತವು ನಿದ್ರಿಸುತ್ತಿದೆಯೇ?