ರೂಡಕಿ (ಉತ್ತರಾಖಂಡ) ಯಲ್ಲಿ ಹಿಂದೂ ಹೆಸರುಗಳನ್ನು ಇಟ್ಟುಕೊಂಡು ಸಾಧು-ಸಂತರ ವೇಷದಲ್ಲಿದ್ದ ೪೦ ಮುಸಲ್ಮಾನರ ಬಂಧನ

ಪೊಲೀಸರಿಂದ ‘ಆಪರೇಷನ್ ಕಾಲನೇಮಿ’ ಅಡಿಯಲ್ಲಿ ಕ್ರಮ

ರೂಡಕಿ (ಉತ್ತರಾಖಂಡ) – ಹರಿದ್ವಾರದ ರೂಡಕಿಯಲ್ಲಿರುವ ಪಿರಾನ ಕಲಿಯಾರನಲ್ಲಿ ಪೊಲೀಸರು ‘ಆಪರೇಷನ್ ಕಾಲನೇಮಿ’ ಅಡಿಯಲ್ಲಿ ಮಹತ್ತರ ಕಾರ್ಯಾಚರಣೆ ನಡೆಸಿದ್ದಾರೆ. ಸಾಧು-ಸಂತರ ಉಡುಪುಗಳನ್ನು ಧರಿಸಿ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿದ್ದ ೪೦ ನಕಲಿ ಬಾಬಾಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಅಕ್ಬರ, ವಸೀಮ ಮತ್ತು ಶಕೀಲ ಅವರಂತಹ ಹೆಸರುಗಳು ಸೇರಿವೆ, ಇವರು ಹಿಂದೂ ಹೆಸರುಗಳನ್ನು ಇಟ್ಟುಕೊಂಡು ಸಾಧುಗಳ ವೇಷದಲ್ಲಿ ತಿರುಗಾಡುತ್ತಿದ್ದರು. ಇಲ್ಲಿನ ದರ್ಗಾ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಪರಿಸರದಲ್ಲಿ ಪೊಲೀಸರು ಪರಿಶೀಲನಾ ಅಭಿಯಾನವನ್ನು ಹಮ್ಮಿಕೊಂಡಿದ್ದರು.

ಸಂಪಾದಕೀಯ ನಿಲುವು

ಈಗ ಇದನ್ನು ‘ಸಾಧು ಜಿಹಾದ’ ಎಂದು ಕರೆಯುವುದೇ ? ಇಂತಹ ಘಟನೆಗಳನ್ನು ತಡೆಯಲು ಸರಕಾರವು ಕಠೋರ ಕ್ರಮಕೈಗೊಳ್ಳುವುದು ಆವಶ್ಯಕವಾಗಿದೆ !