ಪಂಚವಟಿ (ನಾಸಿಕ್) ಯಲ್ಲಿನ ಘಟನೆ !
ಚಾಕು ತೋರಿಸಿ ಕತ್ತರಿಸುವ ಬೆದರಿಕೆ !

ನಾಸಿಕ್ – ದಾನಿಶ್ ಸೈಯದ್ ಎಂಬ ವಾಹನ ಚಾಲಕ ಹಣಕಾಸು ಸಂಸ್ಥೆಯ 7 ಮಹಿಳಾ ಉದ್ಯೋಗಿಗಳಿಗೆ ಕಿರುಕುಳ ನೀಡಿದ್ದಾನೆ. ಈ ಪ್ರಕರಣದಲ್ಲಿ ದಾಖಲಾದ ದೂರಿನ ಪ್ರಕಾರ ಪೊಲೀಸರು ದಾನಿಶ್ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ದಾನಿಶ್ ಹಣಕಾಸು ಸಂಸ್ಥೆಯ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಆತ ಸಂಸ್ಥೆಯ ಮಹಿಳಾ ಉದ್ಯೋಗಿಗಳನ್ನು ಖಾಸಗಿ ವಾಹನದಲ್ಲಿ ಕರೆತರುತ್ತಿದ್ದನು.
1. ಮಹಿಳಾ ಉದ್ಯೋಗಿಗಳು ಕಾರಿನಲ್ಲಿ ಕುಳಿತುಕೊಳ್ಳುವಾಗ ದಾನಿಶ್ ಒಬ್ಬ ಮಹಿಳೆಗೆ ತನ್ನ ಪಕ್ಕದಲ್ಲಿ ಕುಳಿತುಕೊಳ್ಳಲು ಹೇಳಿದನು. ಆಕೆ ನಿರಾಕರಿಸಿದಾಗ ಆತ ಕೋಪಗೊಂಡು ಕಾರನ್ನು ಅತಿ ವೇಗವಾಗಿ ಓಡಿಸಿದನು, ಅಲ್ಲದೆ ಕಾರಿನಲ್ಲೇ ಅವರೊಂದಿಗೆ ಅಶ್ಲೀಲವಾಗಿ ವರ್ತಿಸಿದನು.
2. ಆತ ಚಾಕು ತೋರಿಸಿ ಭಯ ಹುಟ್ಟಿಸಿದನು. ಈ ಸಮಯದಲ್ಲಿ ಆತ ಬೆದರಿಕೆ ಹಾಕುತ್ತಾ, “ಇಂದು ನಾನು ನಿಮ್ಮನ್ನು ಕತ್ತರಿಸಿ ಹಾಕುತ್ತೇನೆ” ಎಂದನು. ಇದರಿಂದ ಮಹಿಳೆಯರು ಹೆದರಿದ್ದರು. (ಮಹಿಳೆಯರು ಇಂತಹ ಬೆದರಿಕೆಗಳಿಗೆ ಹೆದರದೆ ಸ್ವರಕ್ಷಣೆ ತರಬೇತಿ ಪಡೆದು ಕಿರುಕುಳ ನೀಡುವವರಿಗೆ ತಕ್ಕ ಪಾಠ ಕಲಿಸಬೇಕು ! – ಸಂಪಾದಕರು)
3. ಸ್ವಲ್ಪ ಸಮಯದ ನಂತರ ಅವರು ಕಾರಿನಿಂದ ಕೆಳಗಿಳಿದರು; ಆದರೆ ದಾನಿಶ್ ಅವರನ್ನು ಹಿಂಬಾಲಿಸಿದನು ಮತ್ತು ಮತ್ತೆ ಅವರಿಗೆ ಚಾಕುವಿನ ಬೆದರಿಕೆ ಹಾಕಿದನು.
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!
ಬೆಂಗಳೂರಿನ 97 ಲಕ್ಷ ಮತದಾರರಲ್ಲಿ 3.5–4 ಲಕ್ಷ ಮತದಾರರು ಅಸಿಂಧು ಮತದಾರರಾಗಿರಬಹುದು!”
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ದೆಹಲಿಯ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ: 21 ಜನರ ಸಾವು