ಹಮೀರಪುರ (ಉತ್ತರ ಪ್ರದೇಶ): ನದಿಗೆ ನಿರ್ಮಿಸಲಾಗುತ್ತಿದ್ದ ಸೇತುವೆಯ ಸ್ಲ್ಯಾಬ್ ಬಿರುಗಾಳಿಗೆ ಕುಸಿತ: 6 ಕಾರ್ಮಿಕರ ಸಾವು

ಹಮೀರಪುರ (ಉತ್ತರ ಪ್ರದೇಶ) – ಇಲ್ಲಿನ ಬೆತ್ವಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಸೇತುವೆಯ ಸ್ಲ್ಯಾಬ್ ಮೇ 28ರ ಮಧ್ಯರಾತ್ರಿ ಕುಸಿದು ಬಿದ್ದಿದೆ. ಈ ಭೀಕರ ಅಪಘಾತದಲ್ಲಿ 6 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇನ್ನುಳಿದ 6 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ರಾಜ್ಯ ವಿಪತ್ತು ಸ್ಪಂದನಾ ಪಡೆ ಜನರನ್ನು ಹೊರತೆಗೆಯಲು ತೀವ್ರ ಪ್ರಯತ್ನ ನಡೆಸುತ್ತಿದೆ. ಬಿರುಗಾಳಿ ಮತ್ತು ಭಾರಿ ಮಳೆಯಿಂದಾಗಿ ಈ ಸ್ಲ್ಯಾಬ್ ಕುಸಿದಿದೆ ಎನ್ನಲಾಗಿದೆ. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ಹಮೀರಪುರದಲ್ಲಿ ಗಂಟೆಗೆ 70ರಿಂದ 80ಕಿ.ಮೀ ವೇಗದಲ್ಲಿ ತೀವ್ರ ಬಿರುಗಾಳಿ ಬೀಸಿತ್ತು.

ಸಂಪಾದಕೀಯ ನಿಲುವು

ಬಿರುಗಾಳಿಯನ್ನು ತಡೆದುಕೊಳ್ಳದ ಸೇತುವೆಯಿಂದ ಏನು ಪ್ರಯೋಜನ? ಸರಕಾರ ಮತ್ತು ಆಡಳಿತ ಮಂಡಳಿ ಇಂತಹ ಕಾಮಗಾರಿಗಳ ಮೇಲ್ವಿಚಾರಣೆ ನಡೆಸುವುದಿಲ್ಲವೇ?