ಸರಕಾರವು ಸಾವರ್ಕರ್ ಸದನವನ್ನು ಸ್ವಾಧೀನಪಡಿಸಿಕೊಂಡು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಬೇಕು !

  • ಹಿಂದೂ ಜನಜಾಗೃತಿ ಸಮಿತಿಯಿಂದ ಪ್ರತಿಭಟನೆಯ ಮೂಲಕ ಆಗ್ರಹ

  • ಪುನರಾಭಿವೃದ್ಧಿಯ ಹೆಸರಿನಲ್ಲಿ ಸಾವರ್ಕರ್ ಸದನವನ್ನು ನೆಲಸಮ ಮಾಡಲು ಬಿಡುವುದಿಲ್ಲ ! - ಸಾವರ್ಕರ್ ಪ್ರೇಮಿಗಳ ದೃಢ ನಿರ್ಧಾರ

ಜಿಲ್ಲಾಧಿಕಾರಿ ಮನೋಜ ಜಿಂದಾಲ್ ಅವರಿಗೆ ಮನವಿ ಸಲ್ಲಿಸುತ್ತಿರುವ ಸಾವರ್ಕರ್ ಪ್ರೇಮಿಗಳ ನಿಯೋಗ

ರತ್ನಾಗಿರಿ – ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳ ಮೇರು ವ್ಯಕ್ತಿತ್ವವಾದ ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ಅವರ ಮುಂಬಯಿನ ದಾದರ್ ನಲ್ಲಿರುವ ಐತಿಹಾಸಿಕ ಸಾವರ್ಕರ್ ಸದನ ಕಟ್ಟಡದ ಮೇಲೆ ಪುನರಾಭಿವೃದ್ಧಿಯ ಹೆಸರಿನಲ್ಲಿ ಬಿಲ್ಡರ್ ಲಾಬಿಯಿಂದ ನೆಲಸಮವಾಗುವ ಆತಂಕ ಎದುರಾಗಿದೆ. ಈ ಐತಿಹಾಸಿಕ ಕಟ್ಟಡವನ್ನು ನೆಲಸಮವಾಗುವುದರಿಂದ ಉಳಿಸಲು ಮತ್ತು ಅದನ್ನು ಸಂರಕ್ಷಿಸಲು ಸರಕಾರ ಆ ಕಟ್ಟಡವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಧರಣಿ ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.

ಪ್ರತಿಭಟನೆಯ ವೇಳೆ ಘೋಷಣೆಗಳನ್ನು ಕೂಗುತ್ತಿರುವ ಸಾವರ್ಕರ್ ಪ್ರೇಮಿಗಳು

ಈ ಪ್ರತಿಭಟನೆಯನ್ನು ಮೇ 28 ರಂದು ಇಲ್ಲಿನ ಜಯಸ್ತಂಭದಲ್ಲಿ ಮಾಡಲಾಯಿತು. ಈ ವೇಳೆ ಸಾವರ್ಕರ್ ಪ್ರೇಮಿಗಳು, ಪುನರಾಭಿವೃದ್ಧಿಯ ಹೆಸರಿನಲ್ಲಿ ಸಾವರ್ಕರ್ ಸದನವನ್ನು ನೆಲಸಮ ಮಾಡಲು ಬಿಡುವುದಿಲ್ಲ ಎಂಬ ದೃಢ ನಿರ್ಧಾರವನ್ನು ವ್ಯಕ್ತಪಡಿಸಿದರು. ಇದರ ನಂತರ ಸಾವರ್ಕರ್ ಪ್ರೇಮಿಗಳ ನಿಯೋಗವು ಜಿಲ್ಲಾಧಿಕಾರಿ ಮನೋಜ ಜಿಂದಾಲ್ ಅವರಿಗೆ ಬೇಡಿಕೆಗಳ ಮನವಿಯನ್ನು ನೀಡಿತು.