ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ ಜಾತಿ ಆಧಾರಿತ ಜನಗಣತಿ ವರದಿಯಲ್ಲಿ ಬಹಿರಂಗ...

ಬೆಂಗಳೂರು – ರಾಜ್ಯದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಮುನ್ನ ಜಾತಿ ಆಧಾರಿತ ಜನಗಣತಿ ವರದಿಯನ್ನು ಸ್ವೀಕರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ‘ರಾಜ್ಯ ಹಿಂದುಳಿದ ವರ್ಗಗಳ ಆಯೋಗ’ವು ರಾಜ್ಯ ಸರಕಾರಕ್ಕೆ ಸಲ್ಲಿಸಿರುವ ಜಾತಿ ಆಧಾರಿತ ಜನಗಣತಿಯ ಅಂತಿಮ ವರದಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಶೇಕಡಾ 32 ರಿಂದ ಶೇಕಡಾ 42 ಕ್ಕೆ ಹೆಚ್ಚಿಸಲು ಶಿಫಾರಸು ಮಾಡಲಾಗಿದೆ. ಅಲ್ಲದೆ ಮುಸ್ಲಿಂ ಸಮುದಾಯವು ರಾಜ್ಯದಲ್ಲಿ ಶೇಕಡಾ 14 ರಷ್ಟು ಅಂದರೆ 80 ಲಕ್ಷ 14 ಸಾವಿರ ಜನಸಂಖ್ಯೆಯೊಂದಿಗೆ ಎಲ್ಲಕ್ಕಿಂತ ದೊಡ್ಡ ಸಮುದಾಯವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
🚨 Muslims form the single largest community in Karnataka – revealed in the caste-based census reportX submitted to CM Siddaramaiah.
⚠️ The Centre has already rejected caste-based census politics, yet Congress is pushing divisive agendas to create rifts among Hindus.
❗Despite… pic.twitter.com/jRgu8Go2ni
— Sanatan Prabhat (@SanatanPrabhat) May 28, 2026
ವರದಿಯಲ್ಲಿ ಜಾತಿವಾರು ಜನಸಂಖ್ಯೆಯ ಬಗ್ಗೆ ಉಲ್ಲೇಖಿಸಲಾಗಿದೆ. ಇದರಲ್ಲಿ 13 ಅಧ್ಯಾಯಗಳಿದ್ದು, ಪ್ರತಿ ಜಾತಿಯ ಜನಸಂಖ್ಯೆ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿ ಸೇರಿದಂತೆ ಸಮಗ್ರ ಮಾಹಿತಿಯನ್ನು ನೀಡಲಾಗಿದೆ. ಈ ವರದಿಯ ಪ್ರಕಾರ…
೧. ವೀರಶೈವ ಲಿಂಗಾಯತರು ಶೇಕಡಾ 11 ರಷ್ಟು ಅಂದರೆ 60 ರಿಂದ 65 ಲಕ್ಷ ಜನಸಂಖ್ಯೆಯೊಂದಿಗೆ ರಾಜ್ಯದ ಎರಡನೇ ಅತಿ ದೊಡ್ಡ ಸಮುದಾಯವಾಗಿದೆ.
೨. ಒಕ್ಕಲಿಗರು ಶೇಕಡಾ 10 ರಷ್ಟು ಅಂದರೆ 55 ರಿಂದ 60 ಲಕ್ಷ ಜನಸಂಖ್ಯೆಯೊಂದಿಗೆ ಮೂರನೇ ದೊಡ್ಡ ಸಮುದಾಯವಾಗಿದೆ.
೩. ಕುರುಬ ಸಮುದಾಯವು ಶೇಕಡಾ 8 ರಷ್ಟಿದ್ದು, 40 ರಿಂದ 45 ಲಕ್ಷ ಜನಸಂಖ್ಯೆಯೊಂದಿಗೆ ರಾಜ್ಯದ ನಾಲ್ಕನೇ ಅತಿ ದೊಡ್ಡ ಸಮುದಾಯವಾಗಿದೆ. (ಜಾತಿ ಆಧಾರಿತ ಜನಗಣತಿಯ ಹೆಸರಿನಲ್ಲಿ ಹಿಂದೂಗಳಲ್ಲಿ ಒಡಕು ಮೂಡಿಸುವ ಸಂಚು ಇದಾಗಿದೆ ಎಂಬುದನ್ನು ಗಮನಿಸಿರಿ. ರಾಜ್ಯದ ಹಿಂದೂಗಳು ಜಾಗೃತರಾಗಿ ಸಂಘಟಿತರಾಗುವುದೇ ಸದ್ಯದ ನಿಜವಾದ ಅಗತ್ಯವಾಗಿದೆ! – ಸಂಪಾದಕರು)
ಮುಖ್ಯಮಂತ್ರಿಗಳಿಗೆ ಜಾತಿ ಆಧಾರಿತ ಜನಗಣತಿ ವರದಿಯನ್ನು ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ ನಾಯಕ ಅವರು, ವರದಿ ಪೂರ್ಣಗೊಂಡಿದೆ. ಹಾಗೆಯೇ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ವರದಿಯೂ ಸಿದ್ಧವಾಗಿದೆ. ಈ ವರದಿಯು 300 ಪುಟಗಳಷ್ಟಿದೆ. ಈ ಸಮೀಕ್ಷೆಯ ಪ್ರಕ್ರಿಯೆಯಲ್ಲಿ ಕೆಲವು ಜನರು ಭಾಗವಹಿಸಿಲ್ಲ. ಆದ್ದರಿಂದ ಅಂಕಿ-ಅಂಶಗಳು ಕೊಂಚ ಕಡಿಮೆಯಾಗುವ ಸಾಧ್ಯತೆಯಿದೆ, ಎಂದು ತಿಳಿಸಿದರು. (ಇದರರ್ಥ ವರದಿಯಲ್ಲಿನ ಮಾಹಿತಿಯು ಅಪೂರ್ಣ ಮತ್ತು ತಪ್ಪಾಗಿದೆ. ಇದರಿಂದಾಗಿ ಈ ವರದಿಯ ಆಧಾರದ ಮೇಲೆ ಕೈಗೊಳ್ಳಲಾಗುವ ಕ್ರಮಗಳೂ ಸಹ ದೋಷಪೂರಿತವಾಗಿರುತ್ತವೆ. ಈ ವರದಿಯ ವಿರುದ್ಧ ಸಮಾಜದ ಹಿತಚಿಂತಕ ನಾಗರಿಕರು ನ್ಯಾಯಾಲಯದ ಮೊರೆ ಹೋಗಬೇಕು! – ಸಂಪಾದಕರು)
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ದೆಹಲಿಯ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ: 21 ಜನರ ಸಾವು
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
Corporate Jihad: ಮತಾಂತರಕ್ಕೆ ನಿರಾಕರಿಸಿದ್ದಕ್ಕಾಗಿ ‘ವಿಪ್ರೋ’ದ ಹಿಂದೂ ಮಹಿಳಾ ಉದ್ಯೋಗಿಯನ್ನು ಕೆಲಸದಿಂದ ವಜಾ !
ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ ಶಿವಕುಮಾರ್