
ಪುಣೆ, 27 ಮೇ (ಸುದ್ದಿ) – ಹಿಂದುತ್ವನಿಷ್ಠರ ಸಂಘಟಿತ ಬೇಡಿಕೆಯ ನಂತರ ಸುರಕ್ಷತೆಯ ಕಾರಣಗಳಿಗಾಗಿ ಸಾರಸಬಾಗ್ ಉದ್ಯಾನವನವನ್ನು ಮೇ 28 ಮತ್ತು 29 ರಂದು ಮುಚ್ಚಲಾಗುವುದು. ಇಲ್ಲಿನ ಐತಿಹಾಸಿಕ ಸಾರಸಬಾಗ್ ಪರಿಸರದಲ್ಲಿ ಮಾರ್ಚ್ 9 ರಂದು ನಡೆದ ‘ರಮಜಾನ್ ಈದ್’ನ ಮರುದಿನ ದೊಡ್ಡ ಸಂಖ್ಯೆಯಲ್ಲಿ ಮುಸಲ್ಮಾನರ ಜನಸಮೂಹ ಜಮಾಯಿಸಿತ್ತು. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್, ಸಕಲ ಹಿಂದೂ ಸಮಾಜ, ಪತಿತ ಪಾವನ ಸಂಘಟನೆ, ಸ್ವಾತಂತ್ರ್ಯವೀರ ಸಾವರಕರ್ ವಿಚಾರ ಮಂಚ್, ಮಹಾರಾಷ್ಟ್ರ ಮಂದಿರ ಮಹಾಸಂಘ, ಸ್ವಾತಂತ್ರ್ಯವೀರ ಸಾವರಕರ್ ಯುವ ವಿಚಾರ ಮಂಚ್ ಮತ್ತು ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ಹಲವು ಹಿಂದುತ್ವನಿಷ್ಠ ಸಂಘಟನೆಗಳು ಒಟ್ಟಾಗಿ ‘ಹಿಂದೂ ರಾಷ್ಟ್ರ-ಜಾಗೃತಿ ಆಂದೋಲನ’ ನಡೆಸಿದ್ದವು. ಈ ಕುರಿತಾದ ಮನವಿಯನ್ನು ಪುಣೆ ಪೊಲೀಸ್, ಪುಣೆ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ನೀಡಲಾಗಿತ್ತು. ಸಾರಸಬಾಗ್ ಉದ್ಯಾನವನ ಪರಿಸರದಲ್ಲಿರುವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಟ್ರಸ್ಟಿಗಳು ಕೂಡ ಬಕ್ರೀದ್ ನಂತರ ಸಾರಸಬಾಗ್ ಉದ್ಯಾನವನವನ್ನು ಬಂದ್ ಮಾಡಲು ಸರಕಾರ ಮತ್ತು ಆಡಳಿತಕ್ಕೆ ಮನವಿ ಮಾಡಿದ್ದರು. ತದನಂತರ, ‘ಪ್ರಸ್ತುತ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಇದೇ ಹಿನ್ನೆಲೆಯಲ್ಲಿ ಸುರಕ್ಷತೆಯ ಕಾರಣಗಳಿಗಾಗಿ ಸಾರಸಬಾಗ್ ಉದ್ಯಾನವನವನ್ನು ಮುಚ್ಚಲು ನಿರ್ಧರಿಸಲಾಗಿದೆ’ ಎಂದು ಮೇಯರ್ ಸೌ. ಮಂಜುಷಾ ನಾಗಪುರೆ ಅವರು ಮೇ 26 ರಂದು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ನೀಡಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ