Tamil Nadu Crime : ತಮಿಳುನಾಡಿನಲ್ಲಿ ೩ ಸಾವಿರದ ೨೪೬ ಅಪರಾಧಿಗಳು ಮತ್ತು ೪೧೯ ಮಾದಕ ವಸ್ತು ಕಳ್ಳಸಾಗಾಣಿಕೆದಾರರ ಬಂಧನ!

  • ಮುಖ್ಯಮಂತ್ರಿ ಜೋಸೆಫ್ ವಿಜಯರವರ ಆದೇಶದ ನಂತರ ಕೇವಲ ೩ ದಿನಗಳಲ್ಲಿ ವ್ಯಾಪಕ ಕಾರ್ಯಾಚರಣೆ

  • ೧ ಕೋಟಿ ೪೩ ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುಗಳೂ ಜಪ್ತು !

AI Generated Image

ಚೆನ್ನೈ (ತಮಿಳುನಾಡು) – ಮಾದಕ ವಸ್ತು ಕಳ್ಳಸಾಗಾಣಿಕೆದಾರರ ವಿರುದ್ಧ ಹೊಸದಾಗಿ ಆಯ್ಕೆಯಾಗಿರುವ ಮುಖ್ಯಮಂತ್ರಿ ಜೋಸೆಫ್ ವಿಜಯರವರು ಕಠಿಣ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದಾರೆ. ಇದರ ಬೆನ್ನಲ್ಲೇ ತಮಿಳುನಾಡು ಪೊಲೀಸರು ಕೇವಲ ೩ ದಿನಗಳಲ್ಲಿ ೩ ಸಾವಿರ ೨೪೬ ಅಪರಾಧಿಗಳು, ಹಾಗೂ ೪೧೯ ಮಾದಕ ವಸ್ತು ಕಳ್ಳಸಾಗಾಣಿಕೆದಾರರನ್ನು ಬಂಧಿಸಿದ್ದಾರೆ. ಈ ವಿಶೇಷ ಅಭಿಯಾನದಲ್ಲಿ ೧೫ ಸಾವಿರ ೩೪೯ ಜನರನ್ನು ತಪಾಸಣೆಗೊಳಪಡಿಸಲಾಗಿತ್ತು. ಇದರಲ್ಲಿ ೧೨ ಸಾವಿರ ೬೫೦ ಕುಖ್ಯಾತ ಅಪರಾಧಿಗಳು ಒಳಗೊಂಡಿದ್ದರು. ಇವರ ಪೈಕಿ ೩ ಸಾವಿರ ೨೪೬ ಜನರನ್ನು ಮುಂದಿನ ವಿಚಾರಣೆಗಾಗಿ ಬಂಧಿಸಲಾಗಿದೆ.

ಮಾದಕ ವಸ್ತು ಕಾಯ್ದೆಯಡಿ ಮಾದಕ ವಸ್ತುಗಳ ವಿರುದ್ಧ ಕ್ರಮ ಕೈಗೊಂಡಿರುವ ಪೊಲೀಸರು ೨೯೪ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ೨೬೮ ಕಿಲೋಗ್ರಾಂ ಗಾಂಜಾ ಮತ್ತು ೨ ಸಾವಿರದ ೪೭೬ ಅಮಲು ಮಾತ್ರೆಗಳನ್ನು ಜಪ್ತು ಮಾಡಲಾಗಿದೆ. ಇವುಗಳ ಅಂದಾಜು ಮೌಲ್ಯ ೧ ಕೋಟಿ ೪೩ ಲಕ್ಷ ರೂಪಾಯಿ ಎಂದು ಹೇಳಲಾಗಿದೆ.

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ೪೮ ಗಂಟೆಗಳ ಒಳಗಾಗಿ ಜೋಸೆಫ್ ವಿಜಯರವರು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಇದರಲ್ಲಿಯೇ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಸುಮಾರು ೬೫ ಮಾದಕ ವಸ್ತು ವಿರೋಧಿ ಕಾರ್ಯಪಡೆಗಳನ್ನು ಸ್ಥಾಪಿಸುವ ಮಹತ್ವದ ನಿರ್ಧಾರವೂ ಒಳಗೊಂಡಿತ್ತು.

ಸಂಪಾದಕೀಯ ನಿಲುವು

  • ಮುಖ್ಯಮಂತ್ರಿ ಜೋಸೆಫ್ ವಿಜಯರವರ ಆದೇಶದ ನಂತರವೇ ಇಷ್ಟೊಂದು ದೊಡ್ಡ ಕಾರ್ಯಾಚರಣೆ ನಡೆದಿದೆ. ಇದರರ್ಥ ಪೊಲೀಸರಿಗೆ ಮಾದಕ ವಸ್ತು ಕಳ್ಳಸಾಗಾಣಿಕೆದಾರರ ಮಾಹಿತಿ ಮೊದಲೇ ತಿಳಿದಿತ್ತು; ಆದರೆ ಇದಕ್ಕೂ ಮುನ್ನ ಇಂತಹ ವ್ಯಾಪಕ ಕ್ರಮ ಕೈಗೊಂಡಿರಲಿಲ್ಲ. ಹಾಗಾದರೆ ಮಾದಕ ವಸ್ತುಗಳ ವ್ಯವಹಾರವು ಪೊಲೀಸರ ಒಪ್ಪಿಗೆಯಿಂದಲೇ ನಡೆಸಲಾಗುತ್ತದೆ ಎಂದು ಭಾವಿಸಬೇಕೇ ?
  • ಸರಕಾರ ಮನಸ್ಸು ಮಾಡಿದರೆ ಇಂತಹ ಅಪರಾಧಗಳನ್ನು ಕೆಲವೇ ದಿನಗಳಲ್ಲಿ ಕೊನೆಗಾಣಿಸಬಹುದು; ಆದರೆ ಯಾವುದೇ ಸರಕಾರ ಹಾಗೆ ಮಾಡುವುದಿಲ್ಲ, ಇದರಿಂದ ಅವರು ಅಪರಾಧಿಗಳನ್ನು ಬೆಂಬಲಿಸಿ ಆರ್ಥಿಕ ಲಾಭ ಮಾಡಿಕೊಳ್ಳುತ್ತಾರೆ ಎಂದೇ ಸಾರ್ವಜನಿಕರಿಗೆ ಅನಿಸುತ್ತದೆ!