ಭೋಪಾಲ್ (ಮಧ್ಯಪ್ರದೇಶ) ಇಲ್ಲಿ ಮಧ್ಯರಾತ್ರಿ ಮುಸಲ್ಮಾನರಿಂದ ತಥಾಕಥಿತ ಧಾರ್ಮಿಕ ಭಾವನೆಗೆ ಧಕ್ಕೆಯಾದ ಆರೋಪದಡಿ ಹಿಂಸಾತ್ಮಕ ಪ್ರತಿಭಟನೆ

  • ೪ ಪೊಲೀಸರಿಗೆ ಗಾಯ

  • ನಿಷೇಧಾಜ್ಞೆ ಜಾರಿ

ಭೋಪಾಲ್ (ಮಧ್ಯಪ್ರದೇಶ) – ಇಲ್ಲಿ ಮೇ ೧೨ರ ರಾತ್ರಿ ತಥಾಕಥಿತ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದ ಮತ್ತು ಆಕ್ಷೇಪಾರ್ಹ ಪದಗಳ ಬಳಕೆಯನ್ನು ವಿರೋಧಿಸಿ ನೂರಾರು ಮುಸಲ್ಮಾನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ವೇಳೆ ಮುಸಲ್ಮಾನರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಪೊಲೀಸರ ವಾಹನದ ಗಾಜುಗಳು ಪುಡಿಯಾಗಿದ್ದು, ೪ ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿ ಗುಂಪನ್ನು ಚದುರಿಸಿದ್ದಾರೆ. ಇದರ ನಂತರ ಹಳೆಯ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ, ಆದರೆ ಕೆಲವು ಮುಸಲ್ಮಾನ ಸಂಘಟನೆಗಳು ಆರೋಪಿಗಳನ್ನು ಬಂಧಿಸದಿದ್ದರೆ ಭೋಪಾಲ್ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿವೆ.

ಏನಿದು ಪ್ರಕರಣ?

ಭೋಪಾಲನಲ್ಲಿ ಮೇ ೧೦ ರಂದು ಹಿಂದೂ ಸಂಘಟನೆಗೆ ಸಂಬಂಧಿಸಿದ ಕೆಲವು ಕಾರ್ಯಕರ್ತರು ಹೋಟೆಲ್ ನಲ್ಲಿ ಒಟ್ಟಿಗೆ ತಂಗಿದ್ದ ಮುಸಲ್ಮಾನ ಯುವಕ ಮತ್ತು ಹಿಂದೂ ಯುವತಿಯನ್ನು ಹಿಡಿದಿದ್ದರು. ಮುಸಲ್ಮಾನ ಯುವಕನಿಗೆ ಹಲ್ಲೆ ನಡೆಸಿ, ಮುಖಕ್ಕೆ ಮಸಿ ಮತ್ತು ಸಗಣಿ ಬಳಿದು, ಅರೆನಗ್ನ ಸ್ಥಿತಿಯಲ್ಲಿ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಆಕ್ಷೇಪಾರ್ಹ ಪದಗಳನ್ನು ಬಳಸಲಾಗಿದೆ ಎನ್ನಲಾಗಿದೆ. ಸಂಬಂಧಪಟ್ಟ ಹಿಂದೂ ಯುವತಿಯು ತಾನು ಆ ಯುವಕನೊಂದಿಗೆ ಲಿವ್-ಇನ್ ರಿಲೇಶನ್‌ಶಿಪ್ ನಲ್ಲಿ ಇರುವುದಾಗಿ ತಿಳಿಸಿದ್ದಳು.

ಹಲ್ಲೆಯ ವೇಳೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಆಕ್ಷೇಪಾರ್ಹ ಭಾಷೆಯನ್ನು ಬಳಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಇದರ ನಂತರ ನಿಯೋಗವೊಂದು ಪೊಲೀಸ್ ಕಮಿಷನರ್ ಕಚೇರಿಗೆ ತೆರಳಿ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಹಿಂದೂಗಳ ಬಂಧನಕ್ಕೆ ತಕ್ಷಣವೇ ಸಿದ್ಧರಾಗುವ ಪೊಲೀಸರು, ಮತಾಂಧರ ವಿರುದ್ಧ ಇಷ್ಟೇ ತತ್ಪರತೆಯನ್ನು ಎಂದಾದರೂ ತೋರುತ್ತಾರೆಯೇ? – ಸಂಪಾದಕರು)

ಸಂಪಾದಕೀಯ ನಿಲುವು

  • ಹಿಂದೂ ಯುವತಿಯರನ್ನು ಮುಸಲ್ಮಾನರು ಆಮಿಷ ಒಡ್ಡಿ, ವಂಚಿಸಿ ಕರೆದೊಯ್ದಾಗ ಹಿಂದೂಗಳು ಎಂದಾದರೂ ಇಂತಹ ಪ್ರತಿಭಟನೆ ನಡೆಸುತ್ತಾರೆಯೇ? ಆದರೆ ಹಿಂದೂಗಳು ಯುವತಿಯನ್ನು ರಕ್ಷಿಸಿದಾಗ ಇಂತಹ ಜನರನ್ನು ಒತ್ತೆಯಾಳಾಗಿ ಇರಿಸಿಕೊಳ್ಳುವ ಕೆಲಸವನ್ನು ಮುಸಲ್ಮಾನರು ಮಾಡುತ್ತಾರೆ!
  • ಮಧ್ಯಪ್ರದೇಶದಲ್ಲಿ ಅನೇಕ ವರ್ಷಗಳಿಂದ ಭಾಜಪ ಸರಕಾರವಿದ್ದರೂ ಇಂತಹ ಘಟನೆಗಳು ನಡೆಯಬಾರದು ಎಂದೇ ಹಿಂದೂಗಳು ಬಯಸುತ್ತಾರೆ!