NIA Court Bengaluru : ‘ಚೋಟಾ ಉಸ್ಮಾನ್’ಗೆ 7 ವರ್ಷಗಳ ಜೈಲು ಶಿಕ್ಷೆ

ಬೆಂಗಳೂರು ಜೈಲಿನಲ್ಲಿ ಭಯೋತ್ಪಾದಕ ದಾಳಿಯ ಸಂಚು ರೂಪಿಸಿದ ಪ್ರಕರಣ

ಬೆಂಗಳೂರು – ‘ಲಷ್ಕರ್-ಎ-ತೊಯ್ಬಾ’ ಸಂಘಟನೆಗೆ ಸಂಬಂಧಿಸಿದ ಭಯೋತ್ಪಾದಕ ವಿಕ್ರಮ್ ಕುಮಾರ್ ಅಲಿಯಾಸ್ ‘ಚೋಟಾ ಉಸ್ಮಾನ್’ಗೆ ರಾಷ್ಟ್ರೀಯ ತನಿಖಾ ದಳದ (ಎನ್.ಐ.ಎ) ವಿಶೇಷ ನ್ಯಾಯಾಲಯವು 7 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ. ಇದರಲ್ಲಿ 30 ಸಾವಿರ ರೂಪಾಯಿಗಳ ದಂಡವೂ ಸೇರಿದೆ. 2023ರ ಬೆಂಗಳೂರು ಜೈಲಿನಲ್ಲಿ ಭಯೋತ್ಪಾದಕ ದಾಳಿಯ ಸಂಚು ರೂಪಿಸಿದ ಪ್ರಕರಣದಲ್ಲಿ ಈ ಶಿಕ್ಷೆಯನ್ನು ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೆ 8 ಜನರನ್ನು ಅಪರಾಧಿಗಳೆಂದು ಘೋಷಿಸಲಾಗಿದೆ.

1. ಚೋಟಾ ಉಸ್ಮಾನ್ ಜೈಲಿನಲ್ಲಿ ಬಂಧಿಯಾಗಿದ್ದಾಗ ಕಟ್ಟರ್ ವಾದಿಯಾದನು ಮತ್ತು ಟಿ. ನಾಸೀರ್ ಹಾಗೂ ಸಹ ಆರೋಪಿ ಜುನೈದ್ ಅಹ್ಮದ್ ಸಂಪರ್ಕಕ್ಕೆ ಬಂದಿದ್ದನು. ಬಿಡುಗಡೆಯಾದ ನಂತರವೂ ಅವನು ಸತತವಾಗಿ ಅವರೊಂದಿಗೆ ಸಂಪರ್ಕದಲ್ಲಿದ್ದನು. ಮೇ 2023ರಲ್ಲಿ ಅವನು ಹರಿಯಾಣದ ಅಂಬಾಲಾದಿಂದ ಕೈಬಾಂಬ್‌ಗಳನ್ನು ಬೆಂಗಳೂರಿನಲ್ಲಿ ಮತ್ತೊಬ್ಬ ಆರೋಪಿಗೆ ತಲುಪಿಸಿದ್ದನು. ಪೊಲೀಸರು ಟಿ. ನಾಸೀರ್‌ನನ್ನು ಜೈಲಿನಿಂದ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಅವನನ್ನು ತಪ್ಪಿಸಿಕೊಂಡು ಹೋಗಲು ನೆರವಾಗುವ ಸಂಚಿನಲ್ಲೂ ಇವನು ಭಾಗಿಯಾಗಿದ್ದನು.

2. ಈ ಪ್ರಕರಣವು ಜುಲೈ 2023ರಲ್ಲಿ ಬೆಳಕಿಗೆ ಬಂದಿತ್ತು, ಆಗ ಬೆಂಗಳೂರು ಕೇಂದ್ರ ಅಪರಾಧ ವಿಭಾಗವು (ಸಿಸಿಬಿ) ನಗರದಲ್ಲಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದ ಆರೋಪಿಗಳಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸಂವಹನ ಉಪಕರಣಗಳನ್ನು ವಶಪಡಿಸಿಕೊಂಡಿತ್ತು. ನಂತರ ಅಕ್ಟೋಬರ್ 2023ರಲ್ಲಿ ರಾಷ್ಟ್ರೀಯ ತನಿಖಾ ದಳವು ಜೈಲು ಒಳಗೆ ಯುವಕರನ್ನು ಕಟ್ಟರ್ ವಾದಿಗಳನ್ನಾಗಿ ಮಾಡುವ ಮತ್ತು ನೇಮಕ ಮಾಡುವ ದೊಡ್ಡ ಜಾಲವನ್ನು ಬಯಲಿಗೆಳೆದಿತ್ತು.

ಸಂಪಾದಕೀಯ ನಿಲುವು

ಜೈಲಿನಿಂದ ಬಿಡುಗಡೆಯಾದ ನಂತರ ಇಂತಹ ಕಟ್ಟರ್ ವಾದಿಗಳು ಮತ್ತೆ ಭಯೋತ್ಪಾದಕ ಕೃತ್ಯಗಳನ್ನೇ ಮಾಡುತ್ತಾರೆ ಎಂಬಲ್ಲಿ ಸಂಶಯವಿಲ್ಲದಿರುವುದರಿಂದ ಇಂಥವರಿಗೆ ಗಲ್ಲು ಶಿಕ್ಷೆಯನ್ನೇ ನೀಡಿದರೆ ಮಾತ್ರ ದೇಶದಲ್ಲಿನ ಭಯೋತ್ಪಾದಕ ಚಟುವಟಿಕೆಗಳು ನಿಲ್ಲುತ್ತವೆ!