ಪ್ರಿಯಕರ ಮಹಫೂಜ್ ಖಾನ್‌ನ ಮನೆಯಲ್ಲಿ ಪ್ರಿಯತಮೆ ಕವಿತಾಳ ಮೃತದೇಹ ಪತ್ತೆ!

  • ರಾಯ್‌ಪುರ (ಛತ್ತೀಸ್‌ಗಢ)ನಲ್ಲಿ ನಡೆದ ಘಟನೆ

  • ಮಹಫೂಜ್ ಖಾನ್ ಕವಿತಾಳ ಹತ್ಯೆ ಮಾಡಿದ್ದಾನೆಂದು ಕುಟುಂಬಸ್ಥರ ಆರೋಪದ ನಂತರ ಬಂಧನ

​ರಾಯ್‌ಪುರ (ಛತ್ತೀಸ್‌ಗಢ) – ಇಲ್ಲಿನ ಸಂತೋಷಿ ನಗರ ಪ್ರದೇಶದಲ್ಲಿ ಏಪ್ರಿಲ್ ೧೯ ರಂದು ರಾತ್ರಿ ೧೯ ವರ್ಷದ ಕವಿತಾ ದಾಸ್ ಎಂಬಾಕೆಯ ಶವ, ಪ್ರಿಯಕರ ಮಹಫೂಜ್ ಖಾನ್‌ನ ಮನೆಯಲ್ಲಿ ಸಂಶಯಾಸ್ಪದ ಪರಿಸ್ಥಿತಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಫೂಜ್ ಖಾನ್ ಆಕೆಗೆ ಕಿರುಕುಳ ನೀಡಿ ಹತ್ಯೆ ಮಾಡಿದ್ದಾನೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆಯ ಗಂಭೀರತೆಯನ್ನು ಅರಿತ ಪೊಲೀಸರು ಮಹಫೂಜ್ ಖಾನ್‌ನನ್ನು ಬಂಧಿಸಿದ್ದು, ವಿಚಾರಣೆ ಮಾಡುತ್ತಿದ್ದಾರೆ.

​ಕವಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಪೊಲೀಸರ ವಾದವನ್ನು ಕವಿತಾಳ ಕುಟುಂಬಸ್ಥರು ಒಪ್ಪುತ್ತಿಲ್ಲ. ಆಕೆಯ ಕುಟುಂಬವು, ‘ಮಹಫೂಜ್ ಖಾನ್ ಕವಿತಾಳಿಗೆ ಪದೇ ಪದೇ ಮದುವೆಗಾಗಿ ಒತ್ತಾಯಿಸುತ್ತಿದ್ದನು, ಇದರಿಂದ ಕವಿತಾ ತೀವ್ರ ಮಾನಸಿಕ ಒತ್ತಡದಲ್ಲಿದ್ದಳು. ಅವನು ಕವಿತಾಳನ್ನು ಹೊಡೆಯುತ್ತಿದ್ದನು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ನೇರ ಪ್ರಸಾರ ಕೂಡ ಮಾಡುತ್ತಿದ್ದನು. ಇದರಿಂದ ಆಕೆಗೆ ಮಾನಸಿಕ ಆಘಾತ ಉಂಟಾಗಿತ್ತು’, ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಸಂಪಾದಕೀಯ ನಿಲುವು

ಇಂತಹವರ ವಿರುದ್ಧ ತ್ವರಿತ ಗತಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ, ಗಲ್ಲು ಶಿಕ್ಷೆ ಆಗುವಂತೆ ಸರಕಾರ ಪ್ರಯತ್ನಿಸಬೇಕು!