ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನಾಲ್ವರು ಹಿಂದೂ ಆರೋಪಿಗಳು ಖುಲಾಸೆ!

  • 2006ರ ಮಾಲೆಗಾಂವ್ ಸ್ಫೋಟ ಪ್ರಕರಣ: ಮುಂಬಯಿ ಹೈಕೋರ್ಟ್ ತೀರ್ಪು

  • ನ್ಯಾಯಾಲಯಕ್ಕೆ ಕೃತಜ್ಞತೆ ಸಲ್ಲಿಸಿದ ಆರೋಪಿಗಳು!

ನಾಸಿಕ್ – ಮುಂಬಯಿ ಹೈಕೋರ್ಟ್ 2006ರಲ್ಲಿ ನಡೆದ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ನಾಲ್ವರು ಹಿಂದೂ ಆರೋಪಿಗಳ ಮೇಲಿನ ಆರೋಪಗಳನ್ನು ರದ್ದುಗೊಳಿಸಿದೆ. ರಾಜೇಂದ್ರ ಚೌಧರಿ, ಧಾನ್ ಸಿಂಗ್, ಲೋಕೇಶ್ ಶರ್ಮಾ ಮತ್ತು ಮನೋಹರ್ ನರ್ವಾರಿಯಾ ಬಿಡುಗಡೆಗೊಂಡವರು. ಸೆಷನ್ಸ್ ನ್ಯಾಯಾಲಯವು ಇವರ ಮೇಲೆ ಕೊಲೆ ಮತ್ತು ಕ್ರಿಮಿನಲ್ ಪಿತೂರಿಯ ಆರೋಪಗಳನ್ನು ಹೊರಿಸಿತ್ತು. ಈ ಆದೇಶವನ್ನು ಆರೋಪಿಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ವಿಚಾರಣೆಯ ನಂತರ ಸಾಕ್ಷ್ಯಾಧಾರಗಳು ಅಪುರೆ (ಸಾಕಷ್ಟು ಇಲ್ಲ) ಎಂದು ತಿಳಿಸುತ್ತಾ ಮುಂಬಯಿ ಹೈಕೋರ್ಟ್ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತು.

“ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ಯಾವುದೇ ಪ್ರತ್ಯಕ್ಷದರ್ಶಿ ಸಾಕ್ಷಿಗಳನ್ನು ಹಾಜರುಪಡಿಸಿಲ್ಲ. ಇದರಿಂದಾಗಿ ಆರೋಪಗಳ ತಳಹದಿಯೇ ದುರ್ಬಲವಾಗಿದೆ” ಎಂದು ಆರೋಪಿಗಳ ಪರ ವಕೀಲರು ವಾದಿಸಿದರು. “ಈಗಾಗಲೇ ಇತರ ಆರೋಪಿಗಳು ಬಿಡುಗಡೆಯಾಗಿರುವುದನ್ನು ಗಮನಿಸಿದರೆ ಈ ಪ್ರಕರಣವು ಕಾನೂನುಬದ್ಧವಾಗಿ ನಿಲ್ಲಲು ಸಾಧ್ಯವಿಲ್ಲ” ಎಂದೂ ವಾದಿಸಲಾಯಿತು. ಹೈಕೋರ್ಟ್ ಈ ಎಲ್ಲ ಅಂಶಗಳನ್ನು ಪರಿಗಣಿಸಿ ಆರೋಪಿಗಳಿಗೆ ಬಿಡುಗಡೆಯ ಸಮಾಧಾನ ನೀಡಿದೆ.

ಈ ತೀರ್ಪಿನ ನಂತರ ನ್ಯಾಯಾಲಯಕ್ಕೆ ಕೃತಜ್ಞತೆ ಸಲ್ಲಿಸಿದ ಆರೋಪಿಗಳು, “ನಮಗೆ ನ್ಯಾಯ ಸಿಗುವುದು ವಿಳಂಬವಾಗಿರಬಹುದು, ಆದರೆ ಅಂತಿಮವಾಗಿ ನ್ಯಾಯ ಸಿಕ್ಕಿದೆ” ಎಂದು ಹೇಳಿದರು.