
ಪಾಟಲಿಪುತ್ರ (ಬಿಹಾರ) – ಭಾಜಪ ನಾಯಕ ಸಮ್ರಾಟ್ ಚೌಧರಿ ಅವರು ಏಪ್ರಿಲ್ ೧೫ ರಂದು ಬಿಹಾರದ ೨೪ ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಸೈಯದ್ ಅತಾ ಹಸನೈನ್ ಅವರು ಇಲ್ಲಿನ ಲೋಕ ಭವನದಲ್ಲಿ ಅವರಿಗೆ ಪದವಿ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಸಂಯುಕ್ತ ಜನತಾ ದಳದ ವಿಜಯ ಚೌಧರಿ ಮತ್ತು ಬಿಜೇಂದ್ರ ಯಾದವ್ ಅವರು ರಾಜ್ಯದ ಉಪಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡರು.
ಮುಖ್ಯಮಂತ್ರಿ ಸಮ್ರಾಟ್ ಚೌಧರಿ ಅವರ ತಂದೆ ಶಕುನಿ ಚೌಧರಿ ಈ ಸಂದರ್ಭದಲ್ಲಿ ಮಾತನಾಡಿ, ‘ಕೆಲವೊಮ್ಮೆ ದೇವರ ಕೃಪೆ ಇರುತ್ತದೆ. ನಾವು ಅನೇಕ ಪಕ್ಷಗಳಿಗಾಗಿ ಜೀವ ಸವೆಸಿ ಹೋರಾಟ ನಡೆಸಿದೆವು; ಆದರೆ ನಮಗೆ ಯಶಸ್ಸು ಸಿಗಲಿಲ್ಲ. ಇಂದು ಅಮಿತ್ ಶಾ, ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಅವರ ಆಶೀರ್ವಾದದಿಂದ ಸಮ್ರಾಟ್ ಮುಂದೆ ಬಂದಿದ್ದಾರೆ. ಕಷ್ಟಕ್ಕೆ ತಕ್ಕ ಪ್ರತಿ ಫಲ ಸಿಕ್ಕೇ ಸಿಗುತ್ತದೆ. ಯಾರು ಕಠಿಣ ಪರಿಶ್ರಮ ಪಡುತ್ತಾರೋ, ಅವರೇ ಪ್ರಗತಿ ಹೊಂದುತ್ತಾರೆ,’ ಎಂದು ಹೇಳಿದರು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ