Katni Railway Rescue : ಮಧ್ಯಪ್ರದೇಶದ ಕಟ್ನಿ ರೈಲ್ವೆ ನಿಲ್ದಾಣದಲ್ಲಿ ೧೬೭ ಅಪ್ರಾಪ್ತ ಮುಸಲ್ಮಾನ ಮಕ್ಕಳ ರಕ್ಷಣೆ !

  • ಮಕ್ಕಳ ಕಳ್ಳಸಾಗಣೆ ಶಂಕೆ, ೮ ಜನರ ಬಂಧನ

  • ಲಾತೂರ್‌ ನ ಮದರಸಾದಲ್ಲಿ ಶಿಕ್ಷಣಕ್ಕಾಗಿ ಕರೆದೊಯ್ಯಲಾಗುತ್ತಿದೆ ಎಂದು ಸದ್ದಾಂ ಎಂಬ ವ್ಯಕ್ತಿಯ ಹೇಳಿಕೆ

ಪುಣೆ – ಬಿಹಾರದ ರಾಜಧಾನಿ ಪಾಟ್ಲಿಪುತ್ರದಿಂದ ಪುಣೆಗೆ ತೆರಳುತ್ತಿದ್ದ ೧೬೭ ಅಪ್ರಾಪ್ತ ಮುಸಲ್ಮಾನ ಮಕ್ಕಳನ್ನು ಏಪ್ರಿಲ್ ೧೧ ರ ರಾತ್ರಿ ಮಧ್ಯಪ್ರದೇಶದ ಕಟ್ನಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ರಕ್ಷಿಸಿದ್ದಾರೆ. ಪಾಟ್ನಾ-ಪೂರ್ಣಾ ಎಕ್ಸಪ್ರೆಸ್‌ ನಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಈ ಪ್ರಕರಣದಲ್ಲಿ ೮ ಜನರನ್ನು ಬಂಧಿಸಲಾಗಿದೆ. ರೈಲ್ವೆ ಭದ್ರತಾ ಪಡೆ ಮತ್ತು ರೈಲ್ವೆ ಪೊಲೀಸರ ಸಹಯೋಗದೊಂದಿಗೆ ಈ ಮಕ್ಕಳನ್ನು ರೈಲಿನಿಂದ ರಕ್ಷಿಸಲಾಯಿತು. ವಿಚಾರಣೆಯ ಸಮಯದಲ್ಲಿ, ಈ ಎಲ್ಲಾ ಮಕ್ಕಳು ಬಿಹಾರದ ಅರರಿಯಾದಿಂದ ಮಹಾರಾಷ್ಟ್ರದ ಲಾತೂರ್‌ ನಲ್ಲಿರುವ ಮದರಸಾವೊಂದರಲ್ಲಿ ಶಿಕ್ಷಣ ಪಡೆಯಲು ಪ್ರಯಾಣಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ಮಕ್ಕಳ ಕಳ್ಳಸಾಗಣೆ ನಡೆಯುತ್ತಿರುವ ಬಗ್ಗೆ ಲಭ್ಯವಾದ ಗುಪ್ತ ಮಾಹಿತಿಯ ಆಧಾರದ ಮೇಲೆ ಮಕ್ಕಳ ಕಲ್ಯಾಣ ಸಮಿತಿಯ ತಂಡವು ಈ ಕಾರ್ಯಾಚರಣೆ ನಡೆಸಿದೆ.

ಅರರಿಯಾದಿಂದ ಲಾತೂರ್‌ ನ ಮದರಸಾಗೆ ಈ ಮಕ್ಕಳನ್ನು ಕರೆದೊಯ್ಯುತ್ತಿದ್ದ ಸದ್ದಾಂ ಎಂಬ ವ್ಯಕ್ತಿಯು, ಕಳೆದ ೧೦ ವರ್ಷಗಳಿಂದ ತಾನು ಮಕ್ಕಳನ್ನು ಲಾತೂರ್‌ ನ ಮದರಸಾಗಳಿಗೆ ಶಿಕ್ಷಣಕ್ಕಾಗಿ ಕರೆದೊಯ್ಯುತ್ತಿರುವುದಾಗಿ ಹೇಳಿದ್ದಾನೆ. ಈ ಬಾರಿಯೂ ಸುಮಾರು ೧೦೦ ಮಕ್ಕಳನ್ನು ಅವರ ಪೋಷಕರ ಪೂರ್ಣ ಸಮ್ಮತಿಯೊಂದಿಗೆ ಕರೆದೊಯ್ಯುತ್ತಿದ್ದೆ ಎಂದು ಅವನು ತಿಳಿಸಿದ್ದಾನೆ.

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಮಕ್ಕಳ ಸಂರಕ್ಷಣಾ ಅಧಿಕಾರಿ ಮನೀಶ್ ತಿವಾರಿ ಅವರು, ರೈಲಿನಲ್ಲಿ ೧೦೦ ಕ್ಕೂ ಹೆಚ್ಚು ಮಕ್ಕಳನ್ನು ಕಳ್ಳಸಾಗಣೆ ಮಾಡುವ ಸಾಧ್ಯತೆಯ ಬಗ್ಗೆ ಗುಪ್ತ ಮಾಹಿತಿ ಲಭಿಸಿತ್ತು ಎಂದು ತಿಳಿಸಿದರು. ಈ ಮಾಹಿತಿಯ ಆಧಾರದ ಮೇಲೆ ಮಕ್ಕಳನ್ನು ರಕ್ಷಿಸಲಾಗಿದ್ದು, ಅವರ ವಿಚಾರಣೆ ನಡೆಯುತ್ತಿದೆ.

ವಿಚಾರಣೆಯ ಸಮಯದಲ್ಲಿ ಮಕ್ಕಳು ತಾವು ಲಾತೂರ್‌ ನ ಮದರಸಾದಲ್ಲಿ ಶಿಕ್ಷಣ ಪಡೆಯಲು ಪ್ರಯಾಣಿಸುತ್ತಿದ್ದೆವು ಎಂದು ಹೇಳಿದ್ದಾರೆ. ಸದ್ಯ ಈ ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ಆಯಾಮದಿಂದಲೂ ಆಳವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ.

ಸಂಪಾದಕೀಯ ನಿಲುವು

ಮದರಸಾಗಳ ಹೆಸರಿನಲ್ಲಿ ನಡೆಯುವ ಇಂತಹ ಸಂಶಯಾಸ್ಪದ ಚಟುವಟಿಕೆಗಳನ್ನು ಸರಕಾರ ಮತ್ತು ಆಡಳಿತವು ಗಂಭೀರವಾಗಿ ಪರಿಗಣಿಸಬೇಕು. ಮೂಲತಃ ಭಯೋತ್ಪಾದಕರನ್ನು ತಯಾರು ಮಾಡುವ ಅಡ್ಡೆಗಳಾಗಿರುವ ಮದರಸಾಗಳನ್ನು ದೇಶಾದ್ಯಂತ ನಿಷೇಧಿಸಬೇಕು. ಮಹಾರಾಷ್ಟ್ರದ ಮರಾಠವಾಡ ಭಾಗವು ಈಗಾಗಲೇ ಸೂಕ್ಷ್ಮ ಪ್ರದೇಶವಾಗಿದ್ದು, ಅಲ್ಲಿಗೆ ಹೊರಗಿನಿಂದ ಈ ರೀತಿ ಮುಸಲ್ಮಾನ ಮಕ್ಕಳನ್ನು ಕರೆತರುವುದು ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿಯಲ್ಲವೇ? ಮೂಲತಃ ಬಿಹಾರದ ಅರರಿಯಾ ಭಾಗವು ಮುಸಲ್ಮಾನ ಬಹುಸಂಖ್ಯಾತ ಪ್ರದೇಶವಾಗಿದೆ. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮದರಸಾಗಳಿದ್ದರೂ, ಅಲ್ಲಿಂದ ಮಕ್ಕಳನ್ನು ಮಹಾರಾಷ್ಟ್ರಕ್ಕೆ ಏಕೆ ಕರೆತರಲಾಗುತ್ತಿತ್ತು? ಇಂತಹ ವಿಷಯಗಳ ಬಗ್ಗೆ ತನಿಖೆಯಾಗಬೇಕು. ಇದಕ್ಕಾಗಿ ಈಗ ರಾಷ್ಟ್ರಪ್ರೇಮಿ ಹಿಂದೂಗಳು ಸರಕಾರದ ಮೇಲೆ ಒತ್ತಡ ಹೇರಬೇಕು.