ಒಬ್ಬ ಪಾದ್ರಿ ಬಂಧನ, ಮತ್ತೊಬ್ಬ ಪರಾರಿ

ಗುನಾ (ಮಧ್ಯಪ್ರದೇಶ) – ಗುನಾ ಜಿಲ್ಲೆಯಲ್ಲಿ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ಪ್ರೇರೇಪಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದ ನಂತರ ಪೊಲೀಸರು ಮುಖ್ಯ ಆರೋಪಿ ಪಾದ್ರಿ ಉತ್ತಮ ಬರೇಲಾ ಎಂಬಾತನನ್ನು ಬಂಧಿಸಿದ್ದಾರೆ. (ಪಾದ್ರಿಯು ಹಿಂದೂ ಹೆಸರಿನ್ನಿಟ್ಟುಕೊಳ್ಳಲು ಕಾರಣವೇನು ? ಮತಾಂತರಗೊಂಡ ಕ್ರೈಸ್ತರು ಇತರ ಹಿಂದೂಗಳನ್ನು ಮತಾಂತರಿಸಲು ಹಿಂದೂ ಹೆಸರುಗಳನ್ನು ಬಳಸುತ್ತಾರೆ ಎಂಬುದನ್ನು ತಿಳಿಯಿರಿ! – ಸಂಪಾದಕರು). ‘ಚಂಗಾಯಿ ಸಭೆ’ (ಪಾದ್ರಿಗಳು ಪ್ರಾರ್ಥನೆಯ ಮೂಲಕ ಅನಾರೋಗ್ಯ ಪೀಡಿತರನ್ನು ಗುಣಪಡಿಸುವುದು) ಹೆಸರಿನಲ್ಲಿ ಮತಾಂತರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣದ ಎರಡನೇ ಆರೋಪಿ ಪಾದ್ರಿ ವಿಕಾಸ್ ಬರೇಲಾ ಎಂಬಾತನಿಗಾಗಿ ಹುಡುಕಾಟ ಮುಂದುವರಿದಿದೆ.
೧. ಏಪ್ರಿಲ್ ೫, ೨೦೨೬ ರಂದು ಮೋಹನಪುರ ಖುರ್ದ್ ಗ್ರಾಮದಲ್ಲಿ ೨ ಮೇಕೆ ಮತ್ತು ೪೦ ಕೋಳಿಗಳನ್ನು ಕತ್ತರಿಸಿ ೩೦೦ ರಿಂದ ೪೦೦ ಜನರಿಗೆ ಔತಣಕೂಟವನ್ನು ಏರ್ಪಡಿಸಲಾಗಿತ್ತು. ‘ಚಂಗಾಯಿ ಸಭೆ’ಯ ಹೆಸರಿನಲ್ಲಿ ಜನರನ್ನು ಇಲ್ಲಿಗೆ ಕರೆಯಿಸಲಾಗಿತ್ತು. ಪ್ರಾರ್ಥನೆಯಿಂದ ರೋಗಗಳು ಮತ್ತು ವ್ಯಸನಗಳು ಎರಡೂ ವಾಸಿಯಾಗುತ್ತವೆ ಎಂದು ಸಭೆಯಲ್ಲಿ ಭಾಗವಹಿಸಿದ ಜನರಿಗೆ ತಿಳಿಸಲಾಯಿತು.
೨. ಆಸ್ಪತ್ರೆ ಅಥವಾ ಸಾಂಪ್ರದಾಯಿಕ ಚಿಕಿತ್ಸೆಯಿಂದ ಗುಣಮುಖರಾಗದ ಕಾರಣ ತಮ್ಮನ್ನು ಇಲ್ಲಿಗೆ ಕರೆಯಲಾಗಿತ್ತು ಎಂದು ಅನೇಕ ಗ್ರಾಮಸ್ಥರು ತಿಳಿಸಿದ್ದಾರೆ. ಸ್ಥಳೀಯರ ಪ್ರಕಾರ, ಮಿಷನರಿಗಳಿಗೆ ಸಂಬಂಧಿಸಿದ ಜನರು ಪ್ರತಿ ಭಾನುವಾರ ಇಂತಹ ಸಭೆಗಳನ್ನು ನಡೆಸುತ್ತಿದ್ದರು ಮತ್ತು ಇದನ್ನು ‘ಮನಪರಿವರ್ತನೆ’ ಎಂದು ಕರೆಯುತ್ತಿದ್ದರು. ಈಸ್ಟರ್ ದಿನದಂದು ನಡೆದ ಈ ಸಭೆಯ ವಿಡಿಯೋ ವೈರಲ್ ಆದ ನಂತರ, ಸಂಬಂಧಪಟ್ಟ ವ್ಯಕ್ತಿಗಳು ಅಲ್ಲಿಂದ ಪರಾರಿಯಾಗಿದ್ದರು.
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !
ಆಷಾಢಿ ವಾರಿಯಲ್ಲಿ ಭಕ್ತರಿಗೆ ಯಾವುದೇ ಅನಾನುಕೂಲತೆಯಾಗದಂತೆ ಜಾಗ್ರತೆ ವಹಿಸಿ! – ದೇವೇಂದ್ರ ಫಡ್ನವಿಸ್, ಮುಖ್ಯಮಂತ್ರಿ, ಮಹಾರಾಷ್ಟ್ರ ರಾಜ್ಯ
ಮುಂಬಯಿ ಲೋಕಲ್ ನಲ್ಲಿನ ಮತಾಂತರ ಮತ್ತು ಢೋಂಗಿತನದ ಹಿಂದೆ ಅಡಗಿರುವ ಗಂಡಾಂತರವನ್ನು ನಿಯಂತ್ರಿಸಲು ವಿಶೇಷ ನಿಯಮಾವಳಿ ಸಿದ್ಧಪಡಿಸಲಾಗುವುದು !
ಕೇರಳ: ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಹಲ್ಲೆ ನಡೆಸಿದ ಕ್ರೈಸ್ತ ಪಾದ್ರಿ ವಿರುದ್ಧ ರೊಚ್ಚಿಗೆದ್ದು ರಸ್ತೆಗಿಳಿದ ನಾಗರಿಕರು!