
ಜಬಲ್ಪುರ (ಮಧ್ಯಪ್ರದೇಶ) – ಒಬ್ಬ ಮುಸಲ್ಮಾನ್ ಪುರುಷನ ಮೊದಲ ಮದುವೆಯು ಕಾನೂನುಬದ್ಧವಾಗಿದ್ದರೂ ಸಹ, ಅವನು ಎರಡನೇ ಮದುವೆಯಾದರೆ ಭಾರತೀಯ ದಂಡ ಸಂಹಿತೆಯ ಕಲಂ ೪೯೪ ರ ಅಡಿಯಲ್ಲಿ ದ್ವಿಪತ್ನಿತ್ವದ ಅಪರಾಧ ಅನ್ವಯಿಸುವುದಿಲ್ಲ. ಮೊದಲ ಮದುವೆಯು ಚಾಲ್ತಿಯಲ್ಲಿರುವಾಗ ಎರಡನೇ ಮದುವೆಯು ಕಾನೂನುಬದ್ಧವಾಗಿ ಅಮಾನ್ಯ ಎಂದು ಪರಿಗಣಿಸಲ್ಪಟ್ಟಾಗ ಮಾತ್ರ ಕಲಂ ೪೯೪ ಅನ್ವಯಿಸುತ್ತದೆ; ಆದರೆ ‘ಮುಸ್ಲಿಂ ವೈಯಕ್ತಿಕ ಕಾನೂನಿನ’ ಪ್ರಕಾರ ಪುರುಷನಿಗೆ ಬಹುಪತ್ನಿತ್ವಕ್ಕೆ ಅನುಮತಿ ಇರುವುದರಿಂದ ಎರಡನೇ ಮದುವೆಯು ಅಕ್ರಮವಾಗುವುದಿಲ್ಲ. ಆದ್ದರಿಂದ ಈ ಕಲಂ ಅಡಿಯಲ್ಲಿ ಅಪರಾಧ ದಾಖಲಿಸಲು ಸಾಧ್ಯವಿಲ್ಲ,ಎಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ನ್ಯಾಯಾಲಯವು ಅರ್ಜಿದಾರನ ಅರ್ಜಿಯನ್ನು ಸ್ವೀಕರಿಸಿತು ಮತ್ತು ಆತನ ಮೇಲಿದ್ದ ದ್ವಿಪತ್ನಿತ್ವದ ಆರೋಪವನ್ನು ಸಂಪೂರ್ಣವಾಗಿ ರದ್ದುಗೊಳಿಸಿತು; ಆದರೆ ಭಾರತೀಯ ದಂಡ ಸಂಹಿತೆಯ ಕಲಂ ೪೯೮-ಎ (ಪತ್ನಿಯ ಮೇಲೆ ದೌರ್ಜನ್ಯ), ೩೪೨ (ಅಕ್ರಮ ಬಂಧನ), ೩೨೩ (ಗಾಯಗೊಳಿಸುವುದು) ಮತ್ತು ೫೦೬ (ಭಾಗ ೨) (ಬೆದರಿಕೆ) ಅಡಿಯಲ್ಲಿ ದಾಖಲಾದ ಇತರ ಅಪರಾಧಗಳನ್ನು ಹಾಗೆಯೇ ಉಳಿಸಿದೆ. ಈ ಪ್ರಕರಣದ ವಿಚಾರಣೆಯು ಕೆಳಹಂತದ ನ್ಯಾಯಾಲಯದಲ್ಲಿ ಮುಂದುವರಿಯಲಿದೆ.
ಏನಿದು ಪ್ರಕರಣ?
೨೦೦೨ ರಲ್ಲಿ ಮದುವೆಯಾದ ನಂತರ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಪತಿಯು ತನ್ನ ಮೇಲೆ ದೈಹಿಕ ಮತ್ತು ಮಾನಸಿಕ ದೌರ್ಜನ್ಯ ಎಸಗಿದ್ದಾನೆ ಎಂದು ಅರ್ಜಿದಾರನ ಪತ್ನಿ ಆರೋಪಿಸಿದ್ದಳು. ಅಲ್ಲದೆ ೨೦೨೨ ರಲ್ಲಿ ಆತ ಎರಡನೇ ಮದುವೆಯಾಗಿದ್ದು, ನನ್ನ ಮೇಲೆ ‘ಖುಲಾ’ (ಮುಸಲ್ಮಾನ್ ಮಹಿಳಯಿಂದ ನೀಡುವ ವಿಚ್ಛೇದನ) ಮೂಲಕ ವಿಚ್ಛೇದನ ನೀಡುವಂತೆ ಒತ್ತಡ ಹೇರಿದ್ದನು ಎಂದು ನೊಂದ ಮಹಿಳೆ ದೂರಿನಲ್ಲಿ ತಿಳಿಸಿದ್ದಳು.
ಸಂಪಾದಕೀಯ ನಿಲುವುಇದರಿಂದಾಗಿಯೇ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವ ಅಗತ್ಯವಿದೆ! |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ