ಹರಿಯಾಣದಲ್ಲಿ ‘ಲವ್ ಜಿಹಾದ್’ ಪ್ರಕರಣ ಬೆಳಕಿಗೆ

ಕೈಥಲ (ಹರಿಯಾಣಾ) – ತಾನು ಸೇನಾಪಡೆಯಲ್ಲಿ ಮೇಜರ್ ಎಂದು ಸುಳ್ಳು ಹೇಳಿ ಹಿಂದೂ ಯುವತಿಯರನ್ನು ಮದುವೆಯ ಜಾಲದಲ್ಲಿ ಸಿಲುಕಿಸಿ ವಂಚಿಸುತ್ತಿದ್ದ ಜಿಹಾದಿಯೊಬ್ಬನನ್ನು ಕೈಥಲ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಪೊಲೀಸರು ನೀಡಿದ ಮಾಹಿತಿಯ ಅನುಸಾರ, ಆರೋಪಿ ಮುಸ್ಲಿಂ ಯುವಕನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ನಿವಾಸಿಯಾಗಿದ್ದಾನೆ. ಆತನಿಂದ ಸೇನಾ ಪಡೆಯ ಸಮವಸ್ತ್ರವನ್ನೂ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಯುವಕನು ಆನ್ಲೈನ್ ವಿವಾಹ ವೆದಿಕೆಯ (ಮ್ಯಾಟ್ರಿಮೋನಿ) ವೆಬ್ಸೈಟ್ನಲ್ಲಿ ತನ್ನನ್ನು ಸೇನಾ ಪಡೆಯ ಮೇಜರ್ ‘ನಿಶಾಂತ್ ಸಹಾರನ’ ಎಂದು ಪರಿಚಯಿಸಿಕೊಂಡು ಹಿಂದೂ ಯುವತಿಯರನ್ನು ವಂಚಿಸುತ್ತಿದ್ದನು. ಇಂತಹದ್ದೇ ಒಂದು ವಂಚನೆಯ ಪ್ರಕರಣದಲ್ಲಿ ಆತನು ಹಿಸಾರಿನ ಹಿಂದೂ ಯುವತಿಯೊಬ್ಬಳನ್ನು ಭೇಟಿಯಾಗಲು ಹೋಗುತ್ತಿದ್ದಾಗ ಕೈಥಲನ ಪೊಲೀಸರು ಆತನ ಟ್ಯಾಕ್ಸಿಯನ್ನು ತಡೆದು ವಿಚಾರಣೆ ನಡೆಸಿದ್ದಾರೆ. ‘ಆರೋಪಿ ಯುವಕ ತಾನು ಮೇಜರ್ ಎಂದು ಸುಳ್ಳು ಹೇಳುತ್ತಿದ್ದಾನೆ’ ಎಂಬುದು ಪೊಲೀಸರ ಗಮನಕ್ಕೆ ಬಂದಿದೆ. ವಿಚಾರಣೆಯ ವೇಳೆ ಆರೋಪಿ ಯುವಕ ನಿಶಾಂತ್ ಸಹಾರನ ಅಲ್ಲ, ಆತನ ನಿಜವಾದ ಹೆಸರು ‘ಮೆಹರಾಜುದ್ದೀನ ಆಝಮ’ ಎಂಬುದು ಬಹಿರಂಗವಾಗಿದೆ. ಹಿಸಾರಿನ ಹಿಂದೂ ಯುವತಿಯನ್ನು ಮದುವೆಯ ಜಾಲದಲ್ಲಿ ಸಿಲುಕಿಸುವ ಆತನ ಸಂಚು ಪೊಲೀಸರಿಗೆ ಅರಿವಾಗಿದೆ. ಈ ಪ್ರಕರಣ ಹಿಸಾರಿಗೆ ಸಂಬಂಧಿಸಿದ್ದಾದ್ದರಿಂದ ಕೈಥಲನ ಪೊಲೀಸರು ಆರೋಪಿಯನ್ನು ಅಲ್ಲಿನ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
೧. ಹಿಸಾರಿನ ಪೊಲೀಸರು ಆರೋಪಿಯನ್ನು ವಿಚಾರಿಸಿದಾಗ ಅನೇಕ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಇದುವರೆಗೆ ಆತ ೧೦ ಕ್ಕೂ ಹೆಚ್ಚು ಹಿಂದೂ ಯುವತಿಯರಿಗೆ ತಾನು ಮೇಜರ್ ಎಂದು ಸುಳ್ಳು ಹೇಳಿ ವಂಚಿಸಿರುವುದು ಬಹಿರಂಗವಾಗಿದೆ. ಹಿಸಾರಿನ ಓರ್ವ ಹಿಂದೂ ಯುವತಿಯಿಂದ ಆತ ೩೦ ಸಾವಿರ ರೂಪಾಯಿಗಳನ್ನೂ ದೋಚಿದ್ದನು.
೨. ಮೆಹರಾಜುದ್ದೀನ ಆಝಮನು ನಕಲಿ ಮೇಜರ್ ಆಗಿ ‘ನಿಶಾಂತ್ ಸಹಾರನ’ ಎಂಬ ಹಿಂದೂ ಹೆಸರನ್ನು ಇಟ್ಟುಕೊಂಡಿದ್ದನು. ಆರೋಪಿ ಮೆಹರಾಜುದ್ದೀನ ಆಝಮನ ವಿರುದ್ಧ ಹಿಸಾರಿನ ಆಜಾದನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
೩. ಹಿಸಾರಿನ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಮೆಹರಾಜುದ್ದೀನನು, ತಾನು ‘ಶಾದಿ ಡಾಟ್ ಕಾಮ್’ (Shaadi.com) ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿರುವುದಾಗಿ ಹೇಳಿದ್ದಾನೆ. ಅದರಲ್ಲಿ ಆತ ತನ್ನ ಹೆಸರನ್ನು ನಿಶಾಂತ ಸಹಾರನ ಮತ್ತು ವೃತ್ತಿಯನ್ನು ‘ಆರ್ಮಿ ಮೇಜರ್’ ಎಂದು ನಮೂದಿಸಿದ್ದನು. ತನಗೆ ೧೨೦ ಎಕರೆ ಜಮೀನಿದೆ ಎಂದು ಹೇಳಿಕೊಂಡಿದ್ದನು. ಸೇನಾ ಸಮವಸ್ತ್ರದಲ್ಲಿದ್ದ ಕೆಲವು ಭಾವಚಿತ್ರಗಳನ್ನೂ ಆತ ಈ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದನು.
೪. ಧರ್ಮವನ್ನು ಮರೆಮಾಚಿ, ಮದುವೆಯ ಆಮಿಷವೊಡ್ಡಿ ಹಿಂದೂ ಯುವತಿಯರಿಂದ ಹಣ ಲೂಟಿ ಮಾಡಿದ ಆರೋಪ ಆತನ ಮೇಲಿದೆ. ಪ್ರಸ್ತುತ ಹಿಸಾರಿನ ಪೊಲೀಸರು ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ಅಪರಾಧದಲ್ಲಿ ಆತನೊಂದಿಗೆ ಬೇರೆ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದರ ತನಿಖೆ ನಡೆಯುತ್ತಿದೆ.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!