​Nalanda Stampede : ನಾಲಂದಾ (ಬಿಹಾರ): ಶೀತಲಾಮಾತಾ ದೇವಸ್ಥಾನದ ಕಾಲ್ತುಳಿತದ ಪ್ರಕರಣ: ೪ ಅರ್ಚಕರ ಬಂಧನ

ನಾಲಂದಾ (ಬಿಹಾರ) – ಇಲ್ಲಿನ ಶೀತಲಾಮಾತಾ ದೇವಸ್ಥಾನದಲ್ಲಿ ಮಾರ್ಚ್ ೩೧ ರಂದು ನಡೆದ ಭೀಕರ ಕಾಲ್ತುಳಿತದ ಘಟನೆಯಲ್ಲಿ ೯ ಜನರು ಮೃತಪಟ್ಟ ನಂತರ, ಸರ್ಕಾರವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈ ಪ್ರಕರಣದಲ್ಲಿ ಪೊಲೀಸರು ೪ ಅರ್ಚಕರನ್ನು ಬಂಧಿಸಿದ್ದಾರೆ. ನಿರಂಜನ್ ಕುಮಾರ್, ಅನುಜ್ ಪಾಂಡೆ, ಮಿಥಿಲೇಶ್ ಪಂಡಿತ್ ಮತ್ತು ವಿವೇಕಾನಂದ ಬಂಧಿತ ಅರ್ಚಕರು. ಇವರು ಹಣ ಪಡೆದು ಜನರಿಗೆ ದರ್ಶನ ಮಾಡಿಸುತ್ತಿದ್ದರು, ಇದರಿಂದಾಗಿ ಜನಸಂದಣಿ ಹೆಚ್ಚಾಗಿ ಈ ಭೀಕರ ಘಟನೆ ಸಂಭವಿಸಿದೆ ಎಂಬ ಆರೋಪ ಇವರ ಮೇಲಿದೆ. ಒಟ್ಟು ೪೦ ಜನರ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ೨೦ ಜನರ ಹೆಸರು ಪತ್ತೆಯಾಗಿದೆ ಇನ್ನೂ ೨೦ ಜನರು ಅಪರಿಚಿತರಾಗಿದ್ದಾರೆ.

ಸಂಪಾದಕೀಯ ನಿಲುವು

ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸರು ಮತ್ತು ಆಡಳಿತಾಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ ಅವರ ಮೇಲೂ ಕ್ರಮ ಕೈಗೊಳ್ಳಬೇಕು !