ಜಾನುವಾರುಗಳಿಗೆ ಮೇವು-ನೀರು ನೀಡದೆ ಕ್ರೂರವಾಗಿ ಕಟ್ಟಿಹಾಕಿರುವುದು ಪತ್ತೆ

ಭಟ್ಕಳ – ಜಾನುವಾರುಗಳನ್ನು ಹತ್ಯೆ ಮಾಡುವ ಉದ್ದೇಶದಿಂದ ಅವುಗಳಿಗೆ ಮೇವು ಮತ್ತು ನೀರು ನೀಡದೆ ಕ್ರೂರವಾಗಿ ಕಟ್ಟಿಹಾಕಿದ ಆರೋಪದ ಮೇಲೆ ಮುಜಫರ್ ನಾಥಗೇರಿ ಎಂಬ ವ್ಯಕ್ತಿಯ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಮುಜಫರ್ ಮೂಲತಃ ಹೊನ್ನಾವರ ತಾಲೂಕಿನವನಾಗಿದ್ದು, ಸದ್ಯ ಭಟ್ಕಳದ ಮುಸಾನಗರದಲ್ಲಿ ವಾಸವಾಗಿದ್ದಾನೆ. ೪೦ ವರ್ಷದ ಮುಜಫರ್ನನ್ನು ಬಂಧಿಸಲಾಗಿದೆ.
ಮುಜಫರ್ ತನ್ನ ಸಹಚರರೊಂದಿಗೆ ಸುಮಾರು ೩ ಲಕ್ಷ ರೂಪಾಯಿ ಮೌಲ್ಯದ ೩ ಎತ್ತುಗಳು ಹಾಗೂ ೪೦ ಸಾವಿರ ರೂಪಾಯಿ ಮೌಲ್ಯದ ೨ ಗಂಡು ಕರುಗಳನ್ನು ಬಂದರು ರಸ್ತೆಯ ಒಂದು ಸ್ಥಳದಲ್ಲಿ ಇರಿಸಿದ್ದನು. ಅವುಗಳಿಗೆ ನೀರು ಮತ್ತು ಮೇವು ನೀಡದೆ ಕ್ರೂರವಾಗಿ ಕಟ್ಟಿಹಾಕಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ೩ ಎತ್ತುಗಳು ಮತ್ತು ೨ ಕರುಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ನವೀನ ನಾಯ್ಕ್ ಅವರು ದೂರು ನೀಡಿದ್ದು, ‘ಪಶುಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ’ಯ ಅಡಿಯಲ್ಲಿ ಉಪನಿರೀಕ್ಷಕ ಸೋಮನಾಥ ರಾಠೋಡ ಅವರು ಮೊಕದ್ದಮೆ ದಾಖಲಿಸಿದ್ದಾರೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಸರಕಾರವು ಇಂತಹವರಿಗೆ ಇದೇ ರೀತಿಯಲ್ಲಿ ಕಟ್ಟಿಹಾಕುವ ಶಿಕ್ಷೆಯನ್ನು ನೀಡಬೇಕೆಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬೇಕಿಲ್ಲ! |
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !