ಗಂಗಾವತಿ (ಕರ್ನಾಟಕ): ಹಿರಿಯ ವಕೀಲರು ಮತ್ತು ಅವರ ಪತ್ನಿಯ ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ

ವಕೀಲರಿಂದ ಪೊಲೀಸ್ ಠಾಣೆಗೆ ಮುತ್ತಿಗೆ

ಗಂಗಾವತಿ – ಇಲ್ಲಿ ‘ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡಬೇಡ’ ಎಂದು ಹೇಳಿದ್ದಕ್ಕಾಗಿ ಜುಬೇರ್ ಎಂಬ ಮುಸ್ಲಿಂ ಯುವಕನು ಹಿರಿಯ ವಕೀಲರಾದ ಪ್ರಭಾಕರ್ ಮತ್ತು ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿದನು. ಈ ಘಟನೆ ಬಸವೇಶ್ವರ ನಗರದ ಬಾಂಬು ಬಜಾರ್ ನಲ್ಲಿ ನಡೆದಿದೆ. ಈ ಘಟನೆಯಿಂದ ಆಕ್ರೋಶಗೊಂಡ ಸಹೋದ್ಯೋಗಿ ವಕೀಲರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.

ಹಲ್ಲೆಯ ಸುದ್ದಿ ತಿಳಿಯುತ್ತಿದ್ದಂತೆಯೇ ವಕೀಲರು ಮತ್ತು ನಾಗರಿಕರು ಗಂಗಾವತಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ, ಘಟನೆಯನ್ನು ತೀವ್ರವಾಗಿ ಖಂಡಿಸಿದರು ಹಾಗೂ ಆರೋಪಿಯನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು. ವಿಷಯ ತಿಳಿದ ಮಾಜಿ ಸಂಸದ ಶಿವಣ್ಣಗೌಡ ಮತ್ತು ಮಾಜಿ ಶಾಸಕ ಪಾರಣ್ಣ ಮುನವಳ್ಳಿ ಅವರು ಪೊಲೀಸ್ ಠಾಣೆಗೆ ಆಗಮಿಸಿದರು. ಆರೋಪಿಯ ಬಂಧನಕ್ಕೆ ಒತ್ತಾಯಿಸಿ ಠಾಣೆಯಲ್ಲೇ ಅವರು ಧರಣಿ ಕುಳಿತಿದ್ದರಿಂದ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ತದನಂತರ ಪೊಲೀಸರು ಆರೋಪಿ ಜುಬೇರ್‌ನನ್ನು ಬಂಧಿಸಿದ್ದು, ಸದ್ಯ ಪರಿಸ್ಥಿತಿ ಶಾಂತವಾಗಿದೆ.

ಸಂಪಾದಕೀಯ ನಿಲುವು

ವಕೀಲರಿಗೇ ರಕ್ಷಣೆ ಇಲ್ಲದಂತಾಗಿರುವಾಗ, ಸಾಮಾನ್ಯ ಜನರು ಹೇಗೆ ಸುರಕ್ಷಿತವಾಗಿರಲು ಸಾಧ್ಯ? ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿ ಅತ್ಯಂತ ಶೋಚನೀಯವಾಗಿದೆ!