‘ಸರ್ಜಿಕಲ್ ಸ್ಟ್ರೈಕ್’ ಅನ್ನು ಶ್ಲಾಘಿಸಿದ್ದಕ್ಕಾಗಿ ವಿದ್ಯಾರ್ಥಿಗೆ ಕಿರುಕುಳ ನೀಡಿದ ಪ್ರಾಧ್ಯಾಪಕಿ ಸರೋವರ್ ಜೈದಿ ಅಮಾನತು – OP Jindal Prof. Sarover Zaidi Suspended

  • ಸೋನಿಪತ್ (ಹರಿಯಾಣ) ಇಲ್ಲಿನ ‘ಓಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯ’ದಲ್ಲಿ  ನಡೆದ  ಘಟನೆ

  • ಪ್ರಧಾನಿ ಮೋದಿಯವರನ್ನು ಹಿಟ್ಲರ್‌ ಗೆ ಹೋಲಿಸಿದ ಪ್ರಾಧ್ಯಾಪಕಿ

  • ಅಮಾನತು ಕೇವಲ ೬ ತಿಂಗಳ ಅವಧಿಗೆ ಮಾತ್ರ

ಹರಿಯಾಣ – ಸೋನಿಪತ್‌ ನ ‘ಓಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯ’ದ ಪ್ರಾಧ್ಯಾಪಕಿ ಸರೋವರ್ ಜೈದಿ ಅವರು ‘ಸರ್ಜಿಕಲ್ ಸ್ಟ್ರೈಕ್’ ಅನ್ನು ಶ್ಲಾಘಿಸಿದ್ದಕ್ಕಾಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬನಿಗೆ ಕಿರುಕುಳ ನೀಡಿದ್ದಾರೆ, ಅಷ್ಟೇ ಅಲ್ಲದೆ ಜೈದಿ ಅವರು ಪ್ರಧಾನಿ ಮೋದಿಯವರನ್ನು ಹಿಟ್ಲರ್‌ ಗೆ ಹೋಲಿಸಿದ್ದಾರೆ. ‘ಪ್ರಾಧ್ಯಾಪಕಿಯು ಮಗನಿಗೆ ಕಿರುಕುಳ ನೀಡಿದ್ದಾರೆ, ಆತನನ್ನು ಅವಮಾನಿಸಿದ್ದಾರೆ ಮತ್ತು ಆತನ ವಿರುದ್ಧ ತಾರತಮ್ಯ ಮಾಡಿದ್ದಾರೆ’ ಎಂದು ವಿದ್ಯಾರ್ಥಿಯ ತಂದೆ ಆರೋಪಿಸಿದ ನಂತರ ವಿಶ್ವವಿದ್ಯಾಲಯದ ಆಡಳಿತವು ಜೈದಿ ಅವರನ್ನು ಫೆಬ್ರವರಿ ೧ ರಿಂದ ಜುಲೈ ೩೧, ೨೦೨೬ ರವರೆಗೆ ಒಂದು ಶೈಕ್ಷಣಿಕ ಅವಧಿಗೆ ಅಮಾನತುಗೊಳಿಸಿದೆ.

೧. ಪದವಿಯ ವಿದ್ಯಾರ್ಥಿ ವಿಖ್ಯಾತನ ತಂದೆ ವಿಶ್ವ ಬಜಾಜ್ ಅವರು ನವೆಂಬರ್ ೨೦೨೫ ರಲ್ಲಿ ಹರಿಯಾಣ ಮಾನವ ಹಕ್ಕುಗಳ ಆಯೋಗದ ಮುಂದೆ ಈ ಬಗ್ಗೆ ದೂರು ನೀಡಿದ್ದರು. ತಮ್ಮ ಮಗನು ಇಬ್ಬರು ಪ್ರಾಧ್ಯಾಪಕರ ಕಿರುಕುಳವನ್ನು ಅನುಭವಿಸಬೇಕಾಯಿತು ಎಂದು ಬಜಾಜ್ ಅವರು ದೂರಿನಲ್ಲಿ ಆರೋಪಿಸಿದ್ದರು. ಅವರ ಮಗನು ಅಕ್ಟೋಬರ್ ೩೧, ೨೦೨೫ ರಂದು ‘ಉರಿ : ದ ಸರ್ಜಿಕಲ್ ಸ್ಟ್ರೈಕ್’ ಹೆಸರಿನ ಪ್ರಬಂಧವನ್ನು ಬರೆದಿದ್ದನು. ಇಬ್ಬರೂ ಶಿಕ್ಷಕರಿಗೆ ಈ ಪ್ರಬಂಧ ಇಷ್ಟವಾಗಲಿಲ್ಲ ಮತ್ತು ಅವರು ನವೆಂಬರ್ ೩, ೨೦೨೫ ರಂದು ಮಗನಿಗೆ ಕಿರುಕುಳ ನೀಡಲು ಪ್ರಾರಂಭಿಸಿದರು.

೨. ಜೈದಿ ಅವರು ಬೋಧಿಸುತ್ತಿದ್ದ ‘ರಾಜಕೀಯದ ಪ್ರಾತಿನಿಧ್ಯ’ ವಿಷಯದ ತರಗತಿಯ ಸಮಯದಲ್ಲಿ ತಮ್ಮ ಮಗನು ಪದೇ ಪದೇ ರಾಜಕೀಯವಾಗಿ ಅವಮಾನಕರ, ಪ್ರಚೋದನಕಾರಿ ಮತ್ತು ತೊಂದರೆದಾಯಕ ಟಿಪ್ಪಣಿಗಳನ್ನು ಎದುರಿಸಬೇಕಾಯಿತು ಎಂದು ಬಜಾಜ್ ಹೇಳಿದ್ದಾರೆ. ಪ್ರಾಧ್ಯಾಪಕಿಯ ಟೀಕೆಗಳಲ್ಲಿ ಭಾರತದ ಪ್ರಧಾನ ಮಂತ್ರಿಯವರನ್ನು ಅಡಾಲ್ಫ್ ಹಿಟ್ಲರ್‌ ಗೆ ಹೋಲಿಸುವುದು ಮತ್ತು ರಾಷ್ಟ್ರೀಯ ಭದ್ರತಾ ಕಾರ್ಯಾಚರಣೆಗಳನ್ನು ಪ್ರಧಾನ ಮಂತ್ರಿಗಳು ತಮ್ಮ ಸ್ವಂತ ಪ್ರಾಮುಖ್ಯತೆಯನ್ನು ಹೆಚ್ಚಿಸಿಕೊಳ್ಳಲು ಮಾಡುತ್ತಿದ್ದಾರೆ ಎಂದು ಬಣ್ಣಿಸುವುದು ಸೇರಿತ್ತು. ಪ್ರಧಾನಿ ಮೋದಿ ಮತ್ತು ಭಾರತೀಯ ಸೈನ್ಯವನ್ನು ಶ್ಲಾಘಿಸಿದ್ದಕ್ಕಾಗಿ ಕೆಲವು ಪ್ರಾಧ್ಯಾಪಕರು ಉದ್ದೇಶಪೂರ್ವಕವಾಗಿ ನನ್ನ ಮಗನನ್ನು ಗುರಿ ಮಾಡತೊಡಗಿದರು. ಅವರು ಉದ್ದೇಶಪೂರ್ವಕವಾಗಿ ಪರೀಕ್ಷೆಯಲ್ಲಿ ಮಗನ ಅಂಕಗಳನ್ನು ಕಡಿಮೆ ಮಾಡಿದರು, ಇದರಿಂದಾಗಿ ಆತ ಆ ವಿಷಯದಲ್ಲಿ ಅನುತ್ತೀರ್ಣನಾದನು.

೩. ಈ ಬಗ್ಗೆ ಬಜಾಜ್ ಅವರು ವಿಶ್ವವಿದ್ಯಾಲಯದ ಕುಲಪತಿಗಳಿಗೆ ದೂರು ನೀಡಿದ ನಂತರ ನಡೆದ ತನಿಖೆಯಲ್ಲಿ ವಿಖ್ಯಾತ ನ ಪರೀಕ್ಷೆಯ ಅಂಕಗಳನ್ನು ಅನ್ಯಾಯದ ರೀತಿಯಲ್ಲಿ ಕಡಿತಗೊಳಿಸಿರುವುದು ಬೆಳಕಿಗೆ ಬಂದಿದೆ. ನಂತರ ವಿಶ್ವವಿದ್ಯಾಲಯವು ವಿಖ್ಯಾತನಿಗೆ ಪರೀಕ್ಷೆಯ ಪರಿಷ್ಕೃತ ಫಲಿತಾಂಶವನ್ನು ನೀಡಿತು.

೪. ಈ ಘಟನೆಯ ಬಗ್ಗೆ ವಿಶ್ವವಿದ್ಯಾಲಯದ ಮುಖ್ಯ ಸಂಪರ್ಕ ಅಧಿಕಾರಿ ಅಂಜು ಮೋಹೂನ್ ಅವರು ಮಾತನಾಡಿ, ಹರಿಯಾಣ ಮಾನವ ಹಕ್ಕುಗಳ ಆಯೋಗವು ಈ ಪ್ರಕರಣವನ್ನು ಪರಿಶೀಲಿಸುತ್ತಿದೆ ಮತ್ತು ವಿಶ್ವವಿದ್ಯಾಲಯವು ಆಯೋಗದ ನಿರ್ದೇಶನಗಳನ್ನು ಪಾಲಿಸುತ್ತಿದೆ ಎಂದು ತಿಳಿಸಿದರು. ಜನವರಿ ೧೬, ೨೦೨೬ ರಂದು ಆಯೋಗವು ಸೋನಿಪತ್ ಪೊಲೀಸ್ ಕಮಿಷನರ್ ಮತ್ತು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅವರಿಂದ ವರದಿಯನ್ನು ಕೇಳಿದೆ.

ಸಂಪಾದಕೀಯ ನಿಲುವು

  • ಒಬ್ಬ ಮುಸಲ್ಮಾನ ಪ್ರಾಧ್ಯಾಪಕಿಗೆ ‘ಸರ್ಜಿಕಲ್ ಸ್ಟ್ರೈಕ್’ ಅನ್ನು ಶ್ಲಾಘಿಸಿದಾಗ ಹೊಟ್ಟೆನೋವು ಶುರುವಾಗುತ್ತದೆ ಎಂದರೆ ಅದರಲ್ಲಿಯೇ ಎಲ್ಲವೂ ಅಡಗಿದೆ! ಭಾರತದ ಬಗ್ಗೆ ದ್ವೇಷ ಹೊಂದಿರುವ ಇಂತಹ ಪ್ರಾಧ್ಯಾಪಕರೇ ಮುಂದಿನ ಪೀಳಿಗೆಯನ್ನು ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ!
  • ಪ್ರಾಧ್ಯಾಪಕಿಯಿಂದ ದೇಶದ ಬಗ್ಗೆಯೇ ದ್ವೇಷ ಹರಡಲ್ಪಡುತ್ತಿರುವಾಗ, ಅವರನ್ನು ಕೇವಲ ೬ ತಿಂಗಳ ಕಾಲ ಅಮಾನತು ಮಾಡುವುದರಿಂದ ಅವರ ಮಾನಸಿಕತೆ ಬದಲಾಗುತ್ತದೆಯೇ? ೬ ತಿಂಗಳ ನಂತರ ಅವರು ಮತ್ತೆ ಕೆಲಸಕ್ಕೆ ಸೇರಿದಾಗ ಇಂತಹದ್ದೇ ಘಟನೆ ಮರುಕಳಿಸಿದರೆ, ಅದರ ಜವಾಬ್ದಾರಿಯನ್ನು ವಿಶ್ವವಿದ್ಯಾಲಯದ ಆಡಳಿತ ಮತ್ತು ಹರಿಯಾಣ ಮಾನವ ಹಕ್ಕುಗಳ ಆಯೋಗ ತೆಗೆದುಕೊಳ್ಳುತ್ತದೆಯೇ?