ಛತ್ತೀಸ್‌ಗಢದ ರಾಯಗಢ ಜಿಲ್ಲೆಯಲ್ಲಿ ಮತಾಂತರಗೊಂಡಿದ್ದ ೨೭೨ ಜನರಿಂದ ಮರಳಿ ಹಿಂದೂ ಧರ್ಮಕ್ಕೆ ಪ್ರವೇಶ !

ಮಹಿಳೆಯ ಪಾದಗಳನ್ನು ತೊಳೆಯುತ್ತಿರುವ ಪ್ರಬಲ ಪ್ರತಾಪ್ ಸಿಂಗ್ ಜೂದೇವ್

ರಾಯಗಢ (ಛತ್ತೀಸ್‌ಗಢ) – ಮಹಾಶಿವರಾತ್ರಿಯ ಸಂದರ್ಭದಲ್ಲಿ, ಛತ್ತೀಸ್‌ಗಢದ ರಾಯಗಢ ಜಿಲ್ಲೆಯ ಖರಸಿಯಾದ ಬರ್‍ಗಢ ಧಾಮ ಪರಿಸರದಲ್ಲಿ ಮತಾಂತರಗೊಂಡಿದ್ದ ೨೭೨ ಜನರು ‘ಘರ್ ವಾಪಸಿ’ (ಹಿಂದೂ ಧರ್ಮಕ್ಕೆ ಮರು ಪ್ರವೇಶ) ಮಾಡಿದರು. ಇಲ್ಲಿನ ಬಾಬಾ ಸಿದ್ದೇಶ್ವರ ಮಹಾದೇವನ ಪವಿತ್ರ ಭೂಮಿಯಲ್ಲಿ ಆಯೋಜಿಸಲಾಗಿದ್ದ ಹಿಂದೂ ಮಹಾಸಂಗಮ ಕಾರ್ಯಕ್ರಮದಲ್ಲಿ, ಶಾಸ್ತ್ರೋಕ್ತ ಮಂತ್ರೋಚ್ಚಾರಣೆಗಳೊಂದಿಗೆ ಅವರು ಮತ್ತೆ ಹಿಂದೂ ಧರ್ಮವನ್ನು ಸ್ವೀಕರಿಸಿದರು.

ಧರ್ಮ ಜಾಗರಣ ಸಮನ್ವಯ ಛತ್ತೀಸ್‌ಗಢ ಪ್ರಾಂತ್ಯ, ಕಲ್ಚುರಿ ಕಲಾರ್ ಮಹಾಸಂಘ, ಸೇವಾ ನ್ಯಾಯ ಉತ್ಥಾನ ಮತ್ತು ದಿಲೀಪ್ ಸಿಂಗ್ ಜೂದೇವ್ ಫೌಂಡೇಶನ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಖಿಲ ಭಾರತ ಘರ್ ವಾಪಸಿ ಪ್ರಮುಖರಾದ ಪ್ರಬಲ ಪ್ರತಾಪ್ ಸಿಂಗ್ ಜೂದೇವ್ ಅವರು ಎಲ್ಲರ ಪಾದಗಳನ್ನು ತೊಳೆದು ಅವರನ್ನು ಮರಳಿ ಹಿಂದೂ ಧರ್ಮಕ್ಕೆ ಸ್ವಾಗತಿಸಿದರು.