ಜಮ್ಮುವಿನ ಬಾಲ ಸುಧಾರಣಾ ಕೇಂದ್ರದಿಂದ ಪರಾರಿಯಾಗಿದ್ದ ೩ ಕೈದಿಗಳ ಪೈಕಿ ಇಬ್ಬರು ಪಾಕಿಸ್ತಾನಿಗಳು!

  • ಓರ್ವ ಕೈದಿ ಪಿಸ್ತೂಲಿನಿಂದ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರಿಗೆ ಗಾಯ

  • ೬ ಪೊಲೀಸರ ಅಮಾನತು!

ಜಮ್ಮು (ಜಮ್ಮು-ಕಾಶ್ಮೀರ) – ಜಮ್ಮು ವಿಭಾಗದ ‘ಆರ್.ಎಸ್. ಪುರ ಸೆಕ್ಟರ್’ನಲ್ಲಿರುವ ಬಾಲ ಸುಧಾರಣಾ ಕೇಂದ್ರದಿಂದ ೩ ಕೈದಿಗಳು ಪರಾರಿಯಾಗಿದ್ದಾರೆ. ಈ ಅಪ್ರಾಪ್ತ ಅಪರಾಧಿಗಳ ಪೈಕಿ ಒಬ್ಬನ ಬಳಿ ಪಿಸ್ತೂಲು ಇತ್ತು, ಹಾಗೆಯೇ ಇವರಲ್ಲಿ ಇಬ್ಬರು ಪಾಕಿಸ್ತಾನಿಗಳಾಗಿದ್ದಾರೆ. ಇವರು ಭದ್ರತೆಗಾಗಿ ನಿಯೋಜಿಸಲಾಗಿದ್ದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಈ ಘಟನೆಯು ಫೆಬ್ರವರಿ ೧೬ ರಂದು ಸಾಯಂಕಾಲ ೫:೧೫ ಕ್ಕೆ ನಡೆದಿದೆ. ಗಾಯಗೊಂಡ ಪೊಲೀಸರನ್ನು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿನಯ ಕುಮಾರ ಮತ್ತು ಮುಖ್ಯ ಪೇದೆ ಪರ್ವೀನ ಕುಮಾರ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಬಾಲ ಸುಧಾರಣಾ ಕೇಂದ್ರದ ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೬ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಕೈದಿಗಳ ಬಳಿ ಪಿಸ್ತೂಲು ಎಲ್ಲಿಂದ ಬಂತು ಮತ್ತು ಅದರಿಂದ ಎಷ್ಟು ಗುಂಡುಗಳನ್ನು ಹಾರಿಸಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ವಿಶೇಷವೆಂದರೆ ಬಾಲ ಸುಧಾರಣಾ ಕೇಂದ್ರದಿಂದ ಪರಾರಿಯಾದ ೩ ಕೈದಿಗಳ ಪೈಕಿ ಒಬ್ಬನ ತಾಯಿಯೂ ನಾಪತ್ತೆಯಾಗಿದ್ದಾರೆ. ಮಹಿಳೆಯ ನಾಪತ್ತೆಯಾದ ಪರಿಸ್ಥಿತಿಯು ಸಂದೇಹಾಸ್ಪದವಾಗಿದೆ ಎಂದು ಪರಿಗಣಿಸಲಾಗಿದೆ. ಈ ಪ್ರಕರಣಕ್ಕೂ ಸಂಬಂಧಿಸಿದಂತೆ ದೂರು ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಮಹಿಳೆಯ ನಾಪತ್ತೆಯು ಜೈಲಿನಿಂದ ಪರಾರಿಯಾಗುವುದಕ್ಕೆ ಸಂಬಂಧಿಸಿದ ಒಂದು ದೊಡ್ಡ ಸಂಚಿನ ಭಾಗವಾಗಿರಬಹುದು ಎಂದು ಶಂಕಿಸಲಾಗಿದೆ.

ಕಠುವಾ: ಜೈಶ್-ಎ-ಮೊಹಮ್ಮದ್‌ನ 5 ಭಯೋತ್ಪಾದಕರು ಸಕ್ರಿಯ

ಜಮ್ಮು-ಕಾಶ್ಮೀರದ ಕಠುವಾದಲ್ಲಿ ಭದ್ರತಾ ಪಡೆಗಳು ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ 5 ಭಯೋತ್ಪಾದಕರ ಚಿತ್ರಗಳನ್ನು ಬಿಡುಗಡೆ ಮಾಡಿವೆ. ಈ ಎಲ್ಲಾ ಭಯೋತ್ಪಾದಕರು ಇತ್ತೀಚೆಗಷ್ಟೇ ಕಠುವಾ ಜಿಲ್ಲೆಯೊಳಗೆ ನುಸುಳಿದ್ದಾರೆ. ಪಾಕಿಸ್ತಾನದಿಂದ ನಿಯಂತ್ರಣ ರೇಖೆಯನ್ನು ದಾಟಿ ಬಂದಿರುವ ಇವರು ಗಡಿ ಭಾಗದಲ್ಲಿ ಸಕ್ರಿಯರಾಗಿದ್ದಾರೆ.

ಸಂಪಾದಕೀಯ ನಿಲುವು

  • ಬಂಧಿತ ಅಪ್ರಾಪ್ತ ಅಪರಾಧಿಗಳ ಪೈಕಿ ಇಬ್ಬರು ಪಾಕಿಸ್ತಾನಿಗಳಾಗಿದ್ದರೆ, ಅವರನ್ನು ಬಾಲ ಸುಧಾರಣಾ ಕೇಂದ್ರದಲ್ಲಿ ಹೇಗೆ ಇಡುತ್ತಾರೆ? ಇದೇ ಕೈದಿಗಳು ಇತರ ಬಾಲಾಪರಾಧಿಗಳಲ್ಲಿ ಭಾರತವಿರೋಧಿ ಮಾನಸಿಕತೆಯನ್ನು ಬಿತ್ತುವುದಿಲ್ಲ ಎಂಬ ಖಾತರಿ ಏನು?
  • ಬಾಲಾಪರಾಧಿಗಳ ಬಳಿ ಪಿಸ್ತೂಲು ಹೇಗೆ ಬರುತ್ತದೆ ? ಈ ಘಟನೆಯಲ್ಲಿ ಭದ್ರತಾ ವ್ಯವಸ್ಥೆಯ ಯಾರಾದರೂ ಅಧಿಕಾರಿಗಳು ಅಥವಾ ಸಿಬ್ಬಂದಿ ಶಾಮೀಲಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆಯಾಗಿ ಸಂಬಂಧಪಟ್ಟವರಿಗೆ ಗಲ್ಲು ಶಿಕ್ಷೆಯನ್ನು ಏಕೆ ನೀಡಬಾರದು ಎಂದು ಯಾರಾದರೂ ಸಂವೇದನಾಶೀಲ ರಾಷ್ಟ್ರಪ್ರೇಮಿಗಳು ಕೇಳಿದರೆ ಅದರಲ್ಲಿ ತಪ್ಪೇನಿದೆ?