ಉತ್ತರಾಖಂಡದ ಉಧಮಸಿಂಗ್ ನಗರದಲ್ಲಾದ ಘಟನೆ

(‘ಕಾವಡಿಗಳು’ ಅಥವಾ ‘ಕಾವಡಿ ಯಾತ್ರಿಕರು’ ಎಂದರೆ ಗಂಗಾಜಲವನ್ನು ತೆಗೆದುಕೊಂಡು ಊರಿನ ಶಿವಮಂದಿರಕ್ಕೆ ಹೋಗಿ ಜಲಾಭಿಷೇಕ ಮಾಡುವವರು)
ಡೆಹ್ರಾಡೂನ (ಉತ್ತರಾಖಂಡ) – ರಾಜ್ಯದ ಉಧಮಸಿಂಗ್ ನಗರ ಜಿಲ್ಲೆಯ ಜಸಪುರದಲ್ಲಿ ಮಹಾಶಿವರಾತ್ರಿಯ ಪವಿತ್ರ ದಿನದಂದು ಅಬ್ದುಲವಾರಿ ವೃತ್ತದ ಸಮೀಪವಿರುವ ಒಂದು ಮನೆಯ ಛಾವಣಿಯ ಮೇಲಿಂದ ಕೆಲವು ಮುಸಲ್ಮಾನ ಮಕ್ಕಳು ಕೆಲ ಕಾವಡಿಗಳ ಮೇಲೆ ಮೊದಲು ಫ್ರೂಟಿ ಪಾನೀಯದ ಖಾಲಿ ಪ್ಯಾಕೆಟ್ ಗಳನ್ನು ಎಸೆದರು ಮತ್ತು ತದನಂತರ ಮರದ ಕೋಲುಗಳನ್ನು ಸಹ ಎಸೆದರು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಸಂಪೂರ್ಣ ಪ್ರದೇಶದಲ್ಲಿ ಆಕ್ರೋಶ ಭುಗಿಲೆದ್ದಿತು ಮತ್ತು ಉದ್ವಿಗ್ನ ವಾತಾವರಣ ಉಂಟಾಯಿತು.
MahaShivaratri Disrespect in Uttarakhand?
In Udham Singh Nagar, empty packets were thrown at Kanwar yatris during #MahaShivratri
Why does such hostility surface during Hindu festivals?
People expect stricter action to ensure respect and law & order in Uttarakhand. pic.twitter.com/ZGra3nq5Xt
— Sanatan Prabhat (@SanatanPrabhat) February 16, 2026
ಭಾಜಪ ಕಾರ್ಯಕರ್ತರು ಮತ್ತು ಹಿಂದುತ್ವನಿಷ್ಠ ಸಂಘಟನೆಗಳಿಗೆ ಸಂಬಂಧಿಸಿದ ಸದಸ್ಯರು ನೇರವಾಗಿ ಪೊಲೀಸ್ ಠಾಣೆಗೆ ತಲುಪಿದರು. ಇನ್ನೊಂದೆಡೆ ಮುಸಲ್ಮಾನರು ಕೂಡ ಅಲ್ಲಿ ಜಮಾಯಿಸಿದರು. ಸ್ವಲ್ಪ ಸಮಯದವರೆಗೆ ಎರಡೂ ಗುಂಪುಗಳು ಮುಖಾಮುಖಿಯಾಗಿ ನಿಂತವು ಮತ್ತು ಪರಿಸ್ಥಿತಿ ಹದಗೆಡುವ ಹಂತಕ್ಕೆ ತಲುಪಿತು. ವಾತಾವರಣ ಎಷ್ಟೊಂದು ಕಾವೇರಿತ್ತೆಂದರೆ, ಪೊಲೀಸರು ಕೂಡಲೇ ಮಧ್ಯಪ್ರವೇಶಿಸಬೇಕಾಯಿತು, ಇಲ್ಲದಿದ್ದರೆ ಪ್ರಕರಣ ನಿಯಂತ್ರಣ ಮೀರಿ ಹೋಗುತ್ತಿತ್ತು.
ಪೊಲೀಸರು ಸಂಬಂಧಿತ ಮಕ್ಕಳು ಮತ್ತು ಅವರ ಪೋಷಕರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು ಹಾಗೂ ‘ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ’, ಎಂದು ಭರವಸೆ ನೀಡಿದ ನಂತರ ಪರಿಸ್ಥಿತಿ ಸ್ವಲ್ಪ ಶಾಂತವಾಯಿತು. ಭಾಜಪ ನಾಯಕ ಶ್ರೀ. ಶೀತಲ ಜೋಶಿ ಅವರು ಈ ಕೃತ್ಯವು ಪೂರ್ವನಿಯೋಜಿತ ಎಂದು ಆರೋಪಿಸಿದ್ದು, ಕಾವಡಿ ಯಾತ್ರೆಯಲ್ಲಿ ಅಡಚಣೆ ಉಂಟುಮಾಡುವ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಅಪರಾಧಿಗಳ ಮೇಲೆ ಕಠಿಣಾತಿಕಠಿಣ ಕ್ರಮಕ್ಕೆ ಅವರು ಆಗ್ರಹಿಸಿದ್ದಾರೆ. ಪೊಲೀಸರು ತನಿಖೆಗಾಗಿ ೨ ದಿನಗಳ ಕಾಲಾವಕಾಶ ತೆಗೆದುಕೊಂಡಿದ್ದು ಕೆಲವರನ್ನು ವಶಕ್ಕೆ ಪಡೆದಿದ್ದಾರೆ.
ಸಂಪಾದಕೀಯ ನಿಲುವು
|
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !