|

ಅಮೃತಸರ (ಪಂಜಾಬ್) – ಶಾಲೆ, ಕಾಲೇಜು ಸೇರಿದಂತೆ ಮುಂತಾದ ಕಡೆಗಳಲ್ಲಿ ‘ವಂದೇ ಮಾತರಂ’ ಹಾಡುವುದನ್ನು ಕಡ್ಡಾಯಗೊಳಿಸುವ ನಿರ್ಧಾರವು ಭಾರತೀಯತೆಯ ಹೆಸರಿನಲ್ಲಿ ಸಿಖ್ ಸಮುದಾಯದ ಮೇಲೆ ಹಿಂದುತ್ವ ಸಿದ್ಧಾಂತವನ್ನು ಹೇರುವ ಪ್ರಯತ್ನವಾಗಿದೆ. ನಾವು ಸಿಖ್ಖರಾಗಿರುವುದರಿಂದ ಇದನ್ನು ಒಪ್ಪುವುದಿಲ್ಲ. ಈ ನಿರ್ಧಾರವು ಸಿಖ್ ಸಮುದಾಯದ ಭಾವನೆಗಳಿಗೆ ಮತ್ತು ಅವರ ಧಾರ್ಮಿಕ ಗುರುತಿಗೆ ವಿರುದ್ಧವಾಗಿದೆ ಎಂದು ಖಲಿಸ್ತಾನ್ ಬೆಂಬಲಿಸುವ ‘ದಳ ಖಾಲ್ಸಾ’ ಸಿಖ್ ಸಂಘಟನೆಯ ನಾಯಕ ಕನ್ವರ್ಪಾಲ್ ಸಿಂಗ್ ಬಿಟ್ಟು ಪ್ರಕಟಣೆಯ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಕನ್ವರ್ಪಾಲ್ ಸಿಂಗ್ ಬಿಟ್ಟು ಇಡೀ ಸಿಖ್ ಸಮುದಾಯಕ್ಕೆ ಈ ನಿರ್ಧಾರವನ್ನು ಒಪ್ಪಬಾರದು ಮತ್ತು ಅದನ್ನು ರದ್ದುಗೊಳಿಸುವಂತೆ ಒತ್ತಾಯಿಸಬೇಕೆಂದು ಕರೆ ನೀಡಿದ್ದಾರೆ. ಅವರ ಪ್ರಕಾರ, ಈ ನಿರ್ಧಾರವು ಸಿಖ್ ಸಂಸ್ಕೃತಿಯ ಮೇಲೆ ಒಂದು ನಿರ್ದಿಷ್ಟ ಸಿದ್ಧಾಂತವನ್ನು ಹೇರುವುದಾಗಿದ್ದು, ಇದು ಸಿಖ್ ಸಂಪ್ರದಾಯಗಳಿಗೆ ಹೊಂದಿಕೆಯಾಗುವುದಿಲ್ಲ. ಇದೊಂದು ಸೂಕ್ಷ್ಮ ಆಕ್ರಮಣವಾಗಿದೆ. ಸಿಖ್ಖರು ಈ ವಿಷಯವನ್ನು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಇದನ್ನು ವಿರೋಧಿಸಬೇಕು. ಒಂದು ವೇಳೆ ಭಾರತ ಸರಕಾರ ಅಥವಾ ಪಂಜಾಬ್ ಸರಕಾರವು ಯಾವುದೇ ನಿರ್ಧಾರವನ್ನು ವಂಚನೆ ಅಥವಾ ಯಾವುದೇ ಗುಪ್ತ ಕಾರ್ಯಸೂಚಿಯ ಅಡಿಯಲ್ಲಿ ಸಿಖ್ ಸಮುದಾಯದ ಮೇಲೆ ಹೇರಿದರೆ, ಅದನ್ನು ಈ ಹಿಂದೆಯೂ ವಿರೋಧಿಸಲಾಗಿದೆ ಮತ್ತು ಮುಂದೆಯೂ ವಿರೋಧಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಖಲಿಸ್ತಾನ್ ಬೆಂಬಲಿತ ‘ದಳ ಖಾಲ್ಸಾ’ ಬಗ್ಗೆ ಮಾಹಿತಿ
‘ದಳ ಖಾಲ್ಸಾ’ ಒಂದು ಸಿಖ್ ಧಾರ್ಮಿಕ ಸಂಘಟನೆಯಾಗಿದೆ. ಇದು 1978 ರಲ್ಲಿ ಪಂಜಾಬ್ನಲ್ಲಿ ಸ್ಥಾಪನೆಯಾಯಿತು. ಈ ಸಂಘಟನೆಯು ಸಿಖ್ ಸಮುದಾಯದ ಧಾರ್ಮಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಧ್ವನಿ ಎತ್ತಲು ಪ್ರಯತ್ನಿಸುತ್ತದೆ. ಸಿಖ್ಖರ ತಥಾಕಥಿತ ಹಕ್ಕುಗಳಿಗಾಗಿ, ಪಂಜಾಬ್ಗೆ ಸಂಬಂಧಿಸಿದ ವಿಷಯಗಳಿಗಾಗಿ ಮತ್ತು ಖಲಿಸ್ತಾನ್ ಬೇಡಿಕೆಗಾಗಿ ಈ ಸಂಘಟನೆಯು ಯಾವಾಗಲೂ ಹೋರಾಟ ಮಾಡುತ್ತಾ ಬಂದಿದೆ.
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ