ಶೃಂಗೇರಿಯಲ್ಲಿ ಹಿಂದೂ ಉತ್ಸವದ ಬ್ಯಾನರ್‌ಗಳನ್ನು ಹರಿದು ಹಾಕಿದ ಸಮಾಜಘಾತಕರು – Sringeri Miscreants Tore Down the Banner

ಚಿಕ್ಕಮಗಳೂರು – ಶೃಂಗೇರಿ ತಾಲೂಕಿನ ಬೆಗಾರು ಸಮೀಪದ ಬೋಳೂರು ಕ್ರಾಸ್‌ನಲ್ಲಿ ಹಿಂದೂ ಉತ್ಸವದ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದಂತೆ ಅಳವಡಿಸಲಾಗಿದ್ದ ಬ್ಯಾನರ್‌ಅನ್ನು ಸಮಾಜಘಾತಕರು ಹರಿದು ಹಾಕಿದ್ದಾರೆ. ಈ ಘಟನೆಯಿಂದ ಹಿಂದೂ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮರಿಗೇಬೈಲು ಗ್ರಾಮದಲ್ಲಿ ಜನವರಿ 31 ರಂದು ನಡೆಯಲಿರುವ ಈ ಉತ್ಸವದ ಬ್ಯಾನರ್‌ಗಳನ್ನು ಎಲ್ಲೆಡೆ ಅಳವಡಿಸಲಾಗಿತ್ತು. ಜನವರಿ 28 ರ ರಾತ್ರಿ ಅಜ್ಞಾತ ಸಮಾಜಘಾತಕರು ಬ್ಲೇಡ್‌ನಿಂದ ಈ ಬ್ಯಾನರ್‌ಗಳನ್ನು ಹರಿದು ಹಾಕಿದ್ದಾರೆ. ಈ ಉತ್ಸವ ಸಮಿತಿಯ ಅಧ್ಯಕ್ಷರಾದ ಪ್ರದೀಪ ಚೋಳರಮನೆ ಅವರು ಈ ಬಗ್ಗೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ಇದಕ್ಕಿಂತ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ?