ಕೆಳಗೆ ಇಳಿದು ಬರಲು ಮದ್ಯದ ಬಾಟಲಿ ಕೇಳಿದ ಕುಡುಕ

ತಿರುಪತಿ (ಆಂಧ್ರಪ್ರದೇಶ) – ಇಲ್ಲಿನ ಶ್ರೀ ಗೋವಿಂದರಾಜಸ್ವಾಮಿ ದೇವಾಲಯದ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ದೇವಾಲಯದ ಆವರಣಕ್ಕೆ ಪ್ರವೇಶಿಸಿದ ಕುಡಿದ ವ್ಯಕ್ತಿಯೊಬ್ಬ ದೇವಾಲಯದ ಗೋಡೆಯ ಮೇಲೆ ಹತ್ತಿದನು. ಗೋಪುರದ ಮೇಲೆ ಹತ್ತಿ ಕಲಶದವರೆಗೆ ವ್ಯಕ್ತಿ ಹೋದದ್ದನ್ನು ಕಂಡು ದೇವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಜಮಾಯಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ, ದೇವಾಲಯದ ಆಡಳಿತವು ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದರು. ಗೋಪುರದ ಕಲಶದ ಮೇಲೆ ಏರಿದ ನಂತರ, “ಮದ್ಯದ ಬಾಟಲಿ ತಂದುಕೊಟ್ಟರೆ ಮಾತ್ರ ಕೆಳಗಿಳಿಯುತ್ತೇನೆ” ಎಂದು ಆ ಕುಡುಕ ಷರತ್ತು ಹಾಕಿದನು. ದೇವಾಲಯದ ಭದ್ರತಾ ಅಧಿಕಾರಿಗಳು ಆತನ ಬೇಡಿಕೆಯನ್ನು ಒಪ್ಪಿಕೊಂಡ ನಂತರ, ಆತ ತಾನಾಗಿಯೇ ಸುರಕ್ಷಿತವಾಗಿ ಕೆಳಗಿಳಿದನು. ನಂತರ ಪೊಲೀಸರು ಆತನನ್ನು ಬಂಧಿಸಿದರು.
ಈ ಮದ್ಯವ್ಯಸನಿಯ ಹೆಸರು ಕುಟ್ಟಾಡಿ ತಿರುಪತಿ (ವಯಸ್ಸು ೪೫ ವರ್ಷ) ಎಂದು ಹೇಳಲಾಗಿದೆ. ಈತ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಕುರ್ಮವಾಡದಲ್ಲಿರುವ ಪೆದ್ದಮಲ್ಲಾ ರೆಡ್ಡಿ ಕಾಲೋನಿಯ ನಿವಾಸಿ. ಅನ್ಯ ಭಕ್ತರಂತೆ ಈತ ಕೂಡ ದೇವಾಲಯ ಪ್ರವೇಶಿಸಿದ್ದ.
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ